ಹಳಿಯಾಳ:- ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯ ಅಂಗವಾಗಿ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದು 72 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕ ಮತ್ತು ಡಾ||ಪ್ರಭಾಕರ ಕೋರೆ ಕೆ.ಎಲ್.ಇ. ರಕ್ತನಿಧಿ ಕೇಂದ್ರ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಸಲಾಯಿತು.
ನಿವೃತ್ತ ಸೈನಿಕರಾದ ವಿಶ್ವನಾಥ ಬೆಣಚೇಕರ ಇವರು ಇಬ್ಬರು ಮಕ್ಕಳು ಮತ್ತು ಧರ್ಮಪತ್ನಿ ಸಮೇತ ಬಂದು ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು.
ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಸೇರಿ ಸುಮಾರು 72 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಪ್ರಾಂಶುಪಾಲ ದಿನೇಶ ನಾಯ್ಕ, ಎನ್.ಎಸ್.ಎಸ್. ಸಂಯೋಜಕ ದಿನೇಶ, ಅವಿನಾಶ ಲೋನಿ, ವಿಕ್ರಮ ಲೋಖಂಡೆ ಇದ್ದರು.
Leave a Comment