ಹಳಿಯಾಳ:- ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನದ ಅಂಗವಾಗಿ “ಇಂಜಿನೀಯರ್ಸ್” ಡೇ ಮತ್ತು ರಕ್ತದಾನ ಶಿಬಿರ ನಡೆಯಿತು.
ಲಾಯನ್ಸ್ ಕ್ಲಬ್, ವಿ.ಆರ್.ಡಿ.ಎಮ್ ಟ್ರಸ್ಟ್, ಧಾರವಾಡದ ರೋಟರಿ ಬ್ಲಡ್ ಬ್ಯಾಂಕ್ ಮತ್ತು ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಜಂಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ವ್ಹಿ.ವ್ಹಿ. ಕಟ್ಟಿ, ಧಾರವಾಡದ ನವನಗರದ ರೋಟರಿ ಬ್ಲಡ್ ಬ್ಯಾಂಕನ್ ಡಾ|| ಉಮೇಶ ಹಳ್ಳಿಕೇರಿ, ಲಾಯನ್ಸ್ ಕ್ಲಬ್ನ ಜಿ.ಡಿ ಗಂಗಾಧರ್ ಇದ್ದರು.
ವಿದ್ಯಾರ್ಥಿಗಳಾದ ಸೃಷ್ಟಿ ಎಮ್, ಪ್ರೊ. ಮಂಜುನಾಥ ಡಿ, ಪ್ರೊ. ವಿರೂಪಾಕ್ಷ ಚೌಗಲಾ ಕಾರ್ಯಕ್ರಮವನ್ನು ನಿರ್ವಹಿಸಿದರು.
Leave a Comment