ಹಳಿಯಾಳ : ನಿಷೇಧಿತ ಮಾವೋವಾದಿ ನಕ್ಸಲರ ಜೊತೆ ನಂಟು ಇರುವ ಮತ್ತು ಹಿಂಸೆಗೆ ಪ್ರಚೋದನೆ ನೀಡುವ ಗಿರೀಶ ಕಾರ್ನಾಡ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ರಾಷ್ಟ್ರೀಯ ಹಿಂದೂ ಆಂದೋಲನದ ಸಮೀತಿಯವರು ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಸಂಘಟನೆಯವರು ಗೃಹ ಸಚಿವ ಡಾ|| ಜಿ. ಪರಮೇಶ್ವರ ಅವರ ಹೆಸರಿನಲ್ಲಿದ್ದ ಮನವಿಯನ್ನು ಹಳಿಯಾಳ ತಹಶೀಲ್ದಾರ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ಸಪ್ಟೆಂಬರ 5 ರಂದು ಗೌರಿ ಲಂಕೇಶ ಬಳಗದಿಂದ ಬೆಂಗಳೂರಿನಲ್ಲಿ ಗೌರಿ ದಿನದ ನಿಮಿತ್ಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆ ಅಡಿಯಲ್ಲಿ ಪ್ರತಿಪ್ರಭಟನೆ ಮತ್ತು ವಿಚಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಣೇಶ ಕಾರ್ನಾಡ ಇವರು ವಿ ಟೂ ಅರ್ಬನ್ ನಕ್ಸಲ್ ಎಂದು ಕುತ್ತಿಗೆಯಲ್ಲಿ ಫಲಕ ಹಾಕಿ ಕುಳಿತಿದ್ದರು.
ಇದು ದೇಶದ ಸಂವಿಧಾನದ ವಿರುದ್ದ ಯುದ್ಧ ಮತ್ತು ಹಿಂಸೆಯನ್ನು ಪ್ರಚೋದಿಸುವ ಮಾತ್ರವಲ್ಲದೇ ನಕ್ಸಲರನ್ನು ಸಮರ್ಪಣೆ ಮಾಡುವ ಕೃತಿಯಾಗಿದೆ. ಆದ್ದರಿಂದ ಕೂಡಲೇ ಕಾರ್ನಾಡ್ ಮೇಲೆ ಕಾನೂನು ಕ್ರಮಜರುಗಿಸಬೇಕೆಂದು ಆಗ್ರಹಿಸಲಾಗಿದೆ.
Leave a Comment