ಹಳಿಯಾಳ:- ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿಯಿಂದ ದತ್ತು ಪಡೆದ ಗ್ರಾಮಗಳಾದ ದೊಡ್ಡಕೊಪ್ಪ ಹಾಗೂ ಬಂಟರಗಾಳಿಯಲ್ಲಿ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕ, ಶ್ರೀಗ್ರಾಮದೇವಿ ಗ್ರಾಮಾಭಿವೃದ್ಧಿ ಸಮಿತಿ ದೊಡ್ಡಕೊಪ್ಪ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಯೋಗದಲ್ಲಿ ಸ್ವಚ್ಛ ಗ್ರಾಮ ಅಭಿಯಾನ ಯಶಸ್ವಿಯಾಗಿ ನಡೆಸಿದರು.
ಸ್ವಚ್ಛತಾ ಗ್ರಾಮ ಅಭಿಯಾನದಲ್ಲಿ ಗುಡಿಗುಂಡಾರಗಳು, ಚರ್ಚ, ಶಾಲೆ, ಅಂಗನವಾಡಿ ಕೇಂದ್ರಗಳನ್ನು ಸ್ವಚ್ಛಗೊಳಿಸಲಾಯಿತು. ದೊಡ್ಡಕೊಪ್ಪ ಹಾಗೂ ಬಂಟರಗಾಳಿ ಗ್ರಾಮಸ್ಥರು ತಮ್ಮ ಮನೆಯಂಗಳ, ಗಟಾರಗಳನ್ನು ಸ್ವಚ್ಛಗೊಳಿಸಿ ಈ ಅಭಿಯಾನಕ್ಕೆ ಕೈಜೋಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಸಂತೋಷ ಪರೀಟ, ಕೆಂಪ್ಪಣ್ಣ ಶೆಗುನಶಿ, ಮಂಜುನಾಥ ಲಕ್ಕಮನ್ನಳ್ಳಿ, ಡಿಪಿಐಟಿಐ ಎನ್ ಎಸ್ ಎಸ್ ಅಧಿಕಾರಿ ದಿನೇಶ ನಾಯ್ಕ, ಅವಿನಾಶ ಲೋನಿ, ಶಂಕರ ಮಿರಾಶಿ ,ವಿಷ್ಣು ಮಡಿವಾಳ, ಮಂಜುನಾಥ ಅರಕಸಾಲಿ, ಉಳವಯ್ಯಾ ಬೆಂಡಿಗೇರಿ, ಸಂತೋಷ ಸಿದ್ನೆಕೊಪ್ಪ, ಸುರೇಶ ಗಾವಡೆ, ನಾರಾಯಣ ರಾಂದೇವಾಡಿ, ಮಹಾದೇವ ಪವಾರ, ಸದಸ್ಯರಾದ ಪಿತಾಂಬರ ಕರ್ಲಕೊಪ್ಪ, ವಿಷ್ಣು ಧಾರವಾಡಕರ, ಮೋತೆಶ ಸಿದ್ದಿ, ರಾಜು ಸಿಂಧೆ, ಕಿರಣ ಶಿಂಧೆ, ಮನೋಹರ ಶಿಂಧೆ, ನಿತ್ಯಾನಂದ ಶಿಂಧೆ ಮೊದಲಾದವರು ಭಾಗವಹಿಸಿದ್ದರು.
Leave a Comment