ಹಳಿಯಾಳ :- ಹಳಿಯಾಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಯಶಸ್ವಿಯಾಗಿ ನಡೆಯಿತು.
ಶಿಬಿರವನ್ನು ತಹಶೀಲ್ದಾರ ವಿದ್ಯಾಧರ ಗುಳಗುಳಿ ಉದ್ಘಾಟಿಸಿ ವಿದ್ಯಾರ್ಥಿಗಳು ಶಿಬಿರಗಳ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಸ್ಕಂದ ಹಾಗೂ ಅಲೀಮಕೋ ಸಂಸ್ಥೆಯ ನುರಿತ ತಜ್ಞ ವೈದ್ಯರು ಪಾಲ್ಗೊಂಡು ಮಕ್ಕಳನ್ನು ತಪಾಸಣೆ ಮಾಡಿ ಅಗತ್ಯ ಸಲಕರಣೆಗಳ ಬಗ್ಗೆ ಶಿಫಾರಸ್ಸು ಮಾಡಿದರು.
ತಾಲೂಕಾ ಆರೋಗ್ಯ ಮತ್ತು ಜಿಲ್ಲಾ ಆರೋಗ್ಯ ಕೇಂದ್ರ ಕಾರವಾರದಿಂದ ಆಗಮಿಸಿದ್ದ ವೈದ್ಯರು ಮಕ್ಕಳ ವೈದ್ಯಕೀಯ ತಪಾಸಣೆ ಮಾಡಿದರು. ದೈಹಿಕ ವಿಕಲತೆ-87, ಶ್ರವಣ ದೋಷ-58, ಬುದ್ಧಿಮಾಂದ್ಯ-37, ಆಟಿಸಂ-10, ದೃಷ್ಟಿದೋಷ-37, ಹಾಗೂ ಮಾತಿನ ವಿಕಲತೆ-45 ಹಾಗೂ ಇತರೆ-28 ಒಟ್ಟು 302 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.
ಬಿ.ಇ.ಓ ಎಸ್.ಎಮ್ ಮುಲ್ಲಾ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ತಿಳಿಸಿದರು. ಡಾ|| ಮಹೇಶ ಕುರಿಯವರ ಹಾಗೂ ಫಾದರ್ ಜ್ಞಾನಪ್ರಕಾಶ ರಾವ್, ವಿಠೋಬಾ ಬೋರೆಕರ, ರಮೇಶ ಪಾಟೀಲ, ಪ್ರಸನ್ನ ಗಾಂವಕರ, ಹೇಮಾ ಕಾಮತ ಬಿ.ಆರ್.ಪಿ ವಂದಿಸಿದರು.
Leave a Comment