• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾಮನ್ಯ ಸಭೆ,ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ

October 12, 2018 by Gaju Gokarna Leave a Comment

watermarked hnr 12 t p honnvar. 1

ಹೊನ್ನಾವರ: ತಾಲೂಕ ಪಂಚಾಯತ ಸಭಾಭವನದಲ್ಲಿ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷ ಉಲ್ಲಾಸ ನಾಯ್ಕ ಕೆಲ ಇಲಾಖೆಯ ಅನುಪಾಲನಾ ವರದಿ ಇಲ್ಲದನ್ನು ಗಮನಿಸಿ ಆಕ್ರೋಶಿತರಾಗಿ ಅಧಿಕಾರಿಗಳಿಗೆ
ಅನುಪಾಲನಾ ವರದಿ ನೀಡುವಂತೆ ಸೂಚಿಸಿದರು. ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳು ಸಭೆಗೆ ಸತತ ಗೈರು ಹಾಜರಿ ಉಳಿಯುತ್ತಿರುವದಕ್ಕೆ ಸದಸ್ಯರು ಸಿಟ್ಟಿಗೆದ್ದು ಅದ್ಯಕ್ಷ ಉಲ್ಲಾಸ ನಾಯ್ಕ ಅವರನ್ನು ಪ್ರಶ್ನಿಸಿದರು.ಪ್ರಶ್ನೆಗೆ ಪ್ರತಿಯಾಗಿ ಅಧ್ಯಕ್ಷ ಉಲ್ಲಾಸ ನಾಯ್ಕ ಪ್ರತಿಕ್ರಿಯಿಸಿ ಚಿಕ್ಕ ನೀರಾವರಿ ಇಲಾಖೆಯವರು ಪ್ರತಿಬಾರಿ ಸಭೆಯನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.ಅಲ್ಲದೇ ಇವರ ಬೇಜವಬ್ದಾರಿತನದ ಕಾರ್ಯ ವೈಖರಿಯಿಂದ ತಾಲೂಕಿನ ರೈತ ಸಮುದಾಯಕ್ಕೆ ತೊಂದರೆಯಾಗುತ್ತಿದೆ ಆದರು ಈ ಇಲಾಖೆ ಇನ್ನು ಎಚ್ಚೆತ್ತುಕ್ಕೊಂಡಿಲ್ಲ ಎಂದು ಅಸಮಧಾನ ಹೊರಹಕಿದರು.
ಈ ವೇಳೆ ಸದಸ್ಯ ಅಣ್ಣಯ್ಯ ನಾಯ್ಕ ಆಕ್ರೋಶಿತರಾಗಿ, ತಾಲೂಕಾ ಪಂಚಾಯತ್‍ವೇ ಇದಕ್ಕೆ ಹೊಣೆಯಾಗಿದೆ ಅದ್ಯಕ್ಷರೇ ನೀವು ಇದರ ಜವಾಬ್ದಾರಿ ಹೊರಬೇಕು, ಕೂಡಲೇ ಸಭೆಗೆ ಅವರನ್ನು ಕರೆಯಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸದಸ್ಯರೆಲ್ಲರು ಪ್ರತಿಭಟನೆ ಹಾದಿ ತುಳಿಯಬೇಕಾಗುತ್ತದೆ. ತಾ.ಪಂ.ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ. ಚಿಕ್ಕನೀರಾವರಿ ಇಲಾಖೆ ಬಹಳಷ್ಟು ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆಸುತ್ತಿದೆ. ಈ ಇಲಾಖೆ ಅಧಿಕಾರಿಗಳು ಸಬೆಗೆ ಹಾಜರಿಲ್ಲದಿದ್ದರೆ ಯಾರಲ್ಲಿ ಸಾರ್ವಜನಿಕರ ಸಮಸ್ಯೆ ಪರಿಶೀಲನೆ ನಡೆಸಬೇಕು ಎಂದು ಅದ್ಯಕ್ಷರನ್ನು ಪ್ರಶ್ನಿಸಿದರು.

ಶಿಕ್ಷಣ ಇಲಾಖೆ ಕುರಿತ ಚರ್ಚೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ಮಾತನಾಡಿ ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ.ತಾಲೂಕಿನ 16 ಶಾಲೆಗಳ ದುರಸ್ತಿ ಕಾರ್ಯಕ್ಕೆ 17 ಲಕ್ಷ 65 ಸಾವಿರ ಹಣ ಬಿಡುಗಡೆಯಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ ವಿಭಾಗದಿಂದ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಕೇವಲ ಎರಡು ಶಾಲೆಗಳ ಕಾಮಗಾರಿ ಬಾಕಿ ಇದೆ ಎಂದರು.
ಅದ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಶಾಲಾ ಆರಂಭವಾಗಿ ಪ್ರಥಮ ಸೆಮಿಸ್ಟರ್ ಕಳೆದರು ಸಹ ಇದುವರೆಗು ಕೆಲ ಶಾಲಾ ವಿದ್ಯಾರ್ಥಿಗಳಿಗೆ ಸಮಸವಸ್ತ್ರ ಪೂರೈಕೆಯಾಗಿಲ್ಲ,ಶಿಕ್ಷಕರ ನೇಮಕ ಪ್ರಕ್ರಿಯೆಯು ನಡೆದಿಲ್ಲ ಎಂದು ಇಲಾಖೆಯ ಕುಂಠುತನಕ್ಕೆ ಕಿಡಿಕಾರಿದರು.

ಇನ್ನು ಆರೋಗ್ಯ ಇಲಾಖಾ ಸಂಭಂದಿತ ಚರ್ಚೆಯಲ್ಲಿ ಇಲಾಖಾ ಅಧಿಕಾರಿಗಳು ಸಭೆಗೆ ತಿಳಿಸಿ ತಾಲೂಕು ವ್ಯಾಪ್ತಿಯಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗನ ಖಾಯಿಲೆ ಪತ್ತೆಯಾಗಿದೆ ಎಂದರು.
ಕೃಷಿ ಇಲಾಖೆÉ ಸಂಭಂದಿತ ಚರ್ಚೆಯಲ್ಲಿ ರೈತರಿಗೆ ಲಬ್ಯವಿರುವ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ತಿಳಿಸಿದರು.

ತೊಟಗಾರಿಕೆ ಇಲಾಖೆ ಚರ್ಚೆಯಲ್ಲಿ ಅಧಿಕಾರಿಗಳು ಸಭೆಗೆ ತಿಳಿಸಿ ಬೆಲೆ ಪರಿಹಾರ ಅರ್ಜಿ ಪಡೆಯುತ್ತದ್ದೆವೆ ಎಂದರು. ಸದಸ್ಯ ಗಣಪಯ್ಯ ಗೌಡ ಪ್ರತಿಯಾಗಿ ಮಾತನಾಡಿ ಈ ಅರ್ಜಿ ಪಡೆಯೋ ಬಗ್ಗೆ ನನಗೆ ಮಾಹಿತಿ ಇಲ್ಲ ನಾನು ಸದಸದ್ಯನಾಗಿ ಜನರಿಗೆ ಹೇಗೆ ಹೇಳಲಿ ಎಂದು ಪೇಚಿಗೆ ಸಿಲುಕಿದರು.
ಈ ಬಗ್ಗೆ ಸದಸ್ಯ ಆರ್.ಪಿ ನಾಯ್ಕ ಸಭೆಗೆ ತಿಳಿಸಿ ಬೆಳೆ ಪರಿಹಾರ ವಿತರಣೆ ಸರ್ಕಾರ ಮಟ್ಟದಿಂದಲೇ ಆಗಬೇಕು ಇನ್ಸುರೆನ್ಸ್ ಕಂಪನಿಯಿಂದ ಬೆಡವೆಂದರು.
ಇನ್ನು ಸಾರಿಗೆ ಇಲಾಖೆ ಸಂಬಂದಿತ ಚರ್ಚೆ ಬಂದಾಗ ಇಲಾಖಾ ಅಧಿಕಾರಿಗಳೊಂದಿಗೆ ಸದಸ್ಯ ತುಕಾರಾಮ್ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಬಸ್ಸಿಗೆ ಜೋತಾಡುತ್ತಾ ಬಸ್ಸಿನ ಭಾಗಿಲ ಬಳಿ ನಿಲ್ಲುವ ಪರಿಸ್ಥಿತಿ ಕಂಡು ಬಂದಿದೆ. ಬಸ್ ಚಲಿಸುತ್ತಿರುವಾಗ ಎನಾದರು ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಲ್ಲದೇ ಇದೇ ವಿಷಯಕ್ಕೆ ಸಂಭಂದಿಸಿದಂತೆ ವಿದ್ಯಾರ್ಥಿಗಳು,ನಿರ್ವಾಹಕರ ನಡುವೆ ವಾಗ್ವಾದ ನಡೆದು ಪೊಲೀಸ್ ಠಾಣೆಗೆ ತೆರಳುವ ಹಂತಕ್ಕೆ ಬಂದಿದೆ. ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿಕೊಡಿ ಎಂದರು.

ಅರಣ್ಯ ಇಲಾಖೆ ಚರ್ಚೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿ ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಸೇರಿದಂತೆ ಇತರೆಡೆ ಇಗಾಗಲೇ ಅತಿಕ್ರಮಣ ಒತ್ತುವರಿ ಹೆಚ್ಚಾಗುತ್ತಿದ್ದು ಈ ಬಗ್ಗೆ ದೂರು ಪತ್ತೆಯಾದಲ್ಲಿ ಸಿಗುವ ಪರಿಹಾರವು ಇಲ್ಲವಾಗುತ್ತದೆ ಎಂದು ಸಭೆಗೆ ತಿಳಿಸಿದರು. ಲೋಕೋಪಯೋಗಿ ಇಲಾS,ಹೆಸ್ಕಾಂ ಇಲಾಖೆ,ಶಿಸು ಅಭಿವೃದ್ದಿ ಇಲಾಖೆ, ಪಶು ಇಲಾಖೆ,ಸಮಾಜ ಕಲ್ಯಾಣ ಇಲಾಖÉ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಸಭಗೆ ಹಾಜರಿದ್ದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಲಿತಾ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಖಾಜಿ ಮಹಮದ್ ಇರಶಾದ್, ಸೇರಿದಂತೆ ಸದಸ್ಯರು,ವಿವಿಧ ಇಲಾಖಾ ಅಧಿಕಾರಿಗಳು ಉಪಸ್ದಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Trending, Honavar News Tagged With: ಅಣ್ಣಯ್ಯ ನಾಯ್ಕ ಆಕ್ರೋಶಿತರಾಗಿ, ಅತಿಕ್ರಮಣ ಒತ್ತುವರಿ, ಅರಣ್ಯ ಇಲಾಖೆ ಚರ್ಚೆ, ಆರೋಗ್ಯ ಇಲಾಖಾ ಸಂಭಂದಿತ ಚರ್ಚೆ, ಇಂಜಿನಿಯರಿಂಗ ವಿಭಾಗ, ಕಳಪೆ ಕಾಮಗಾರಿ, ಚಿಕ್ಕ ನೀರಾವರಿ ಇಲಾಖೆ, ತಾಲೂಕಾ ಪಂಚಾಯತ್, ನಿಲ್ಲುವ ಪರಿಸ್ಥಿತಿ, ಪಶು ಇಲಾಖೆ, ಪ್ರಗತಿ ಪರಿಶೀಲನೆ, ಬಸ್ಸಿನ ಭಾಗಿಲ ಬಳಿ, ಬೆಲೆ ಪರಿಹಾರ ಅರ್ಜಿ, ಬೆಳೆ ಪರಿಹಾರ ವಿತರಣೆ, ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ಥಿ, ರೈತ ಸಮುದಾಯಕ್ಕೆ ತೊಂದರೆ, ವಿದ್ಯಾರ್ಥಿಗಳಿಗೆ ಸಮಸವಸ್ತ್ರ ಪೂರೈಕೆಯಾಗಿಲ್ಲ, ವಿದ್ಯಾರ್ಥಿಗಳು ಬಸ್ಸಿಗೆ ಜೋತಾಡುತ್ತಾ, ವಿವಿಧ ಇಲಾಖೆಗಳ, ಶಾಲೆಗಳ ದುರಸ್ತಿ ಕಾರ್ಯಕ್ಕೆ 17 ಲಕ್ಷ 65 ಸಾವಿರ ಹಣ ಬಿಡುಗಡೆ, ಶಿಕ್ಷಕರ ನೇಮಕ ಪ್ರಕ್ರಿಯೆ, ಶಿಕ್ಷಣ ಇಲಾಖೆ ಕುರಿತ ಚರ್ಚೆ, ಶಿಸು ಅಭಿವೃದ್ದಿ ಇಲಾಖೆ, ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳು, ಸತತ ಗೈರು ಹಾಜರಿ, ಸಭೆಗೆ, ಸಮಾಜ ಕಲ್ಯಾಣ, ಸಾಮನ್ಯ ಸಭೆ, ಸಾರಿಗೆ ಇಲಾಖೆ ಸಂಬಂದಿತ ಚರ್ಚೆ, ಹೆಚ್ಚಿನ ಬಸ್ ವ್ಯವಸ್ಥೆ, ಹೆಸ್ಕಾಂ ಇಲಾಖೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...