ಹಳಿಯಾಳ: ನ್ಯಾಯಮೂರ್ತಿ ಎಜೆ ಸದಾಶೀವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ(ಚಂದ್ರಕಾಂತ ಕಾದ್ರೋಳ್ಳಿ ಬಣ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಸದಾಶೀವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಅ.2ರಿಂದ ಆರಂಭಗೊಂಡಿರುವ ಹೋರಾಟ ಬೆಂಬಲಿಸಿ ಪಟ್ಟಣದಲ್ಲಿ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ದಲಿತ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೇರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯ ಸರ್ಕಾರವು ಸಚವಿ ಸಂಪುಟದ ಸಭೆ ಕರೆದು ಸದಾಶೀವ ಆಯೋಗದ ವರದಿ ಅಂಗೀಕರಿಸಿ ರಾಜ್ಯದಲ್ಲಿನ ಪರಿಶಿಷ್ಠರಲ್ಲಿರುವ ಶೋಷಿತ ಸಮುದಾಯಕ್ಕೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ಪ್ರಮುಖರಾದ ತಿರಕಪ್ಪಾ ಚಿಕ್ಕೇರಿ, ಗಿರೀಶ, ಕಲ್ಲಪ್ಪಾ ಸುಭಾಷ ಕಾದ್ರೋಳ್ಳಿ, ಬಸವರಾಜ ಮೇತ್ರಿ, ರಾಜು , ಚಂದ್ರಕಾಂತ ನಾಗೇಶ, ದುರ್ಗಪ್ಪಾ ಮೇತ್ರಿ, ಅಶೋಕ ಕಾಂಬಳೆ, ತಮ್ಮಣ್ಣ ಮೇತ್ರಿ, ಮಹಾದೇವ ಹರಿಜನ ಇತರರು ಇದ್ದರು.
Leave a Comment