ಹಳಿಯಾಳ: ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಬುಧವಾರ ಶ್ರೀ ನವಚಂಡಿ ಹವನ ನಡೆಯಿತು. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಕುಟುಂಬ ಸದಸ್ಯರೊಂದಿಗೆ ಹವನದಲ್ಲಿ ಪಾಲ್ಗೊಂಡಿದ್ದರು.
ಪ್ರತಿನಿತ್ಯ ಪೂಜೆ, ಹೋಮ ಹವನ, ಅಲಂಕಾರ, ರುದ್ರಾಭಿಷೇಕದೊಂದಿಗೆ ಪೂಜಾ ಕಾರ್ಯ ನಡೆಯುತ್ತಿದ್ದು ದಿ.18 ರಂದು ಗುರುವಾರ ಅಶ್ವಿಜ ಶುದ್ಧ ನವಮಿ ಹಾಗೂ ವಿಜಯದಶಮಿ ಕಾರ್ಯಕ್ರಮ, ಶಮಿ ಪೂಜನ, ಊಡಿ ತುಂಬುವುದು ಹಾಗೂ ದಸರಾ ಆಚರಣೆ ನಡೆಯಲಿದೆ.
Leave a Comment