ಹಳಿಯಾಳ: – ತಾಲೂಕಿನ ಗಡಿ ಗ್ರಾಮ ಕಾಲವಾಡದಲ್ಲಿ ಮೊದಲ ಬಾರಿಗೆ ನವರಾತ್ರಿಯ ಪ್ರಯುಕ್ತ ಒಂಬತ್ತು ದಿನಗಳವರೆಗೆ ಧಾರ್ಮಿಕ ನಡಿಗೆ ದುರ್ಗಾ ದೌಡ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಗ್ರಾಮದಲ್ಲಿನ ಪುರಾತನ ಸೋಮಶ್ವೆರ ದೇವಸ್ಥಾನದಿಂದ ಆರಂಭಗೊಳ್ಳುತ್ತಿದ್ದ ದುರ್ಗಾ ದೌಡ ಗ್ರಾಮದಲ್ಲಿನ ಎಲ್ಲ ದೇವಸ್ಥಾನಗಳಿಗೆ ತೆರಳಿ ಪೂಜಾ ವಿಧಿಯೊಂದಿಗೆ ಮುಕ್ತಾಯಗೊಳ್ಳುತ್ತಿತ್ತು. ಗ್ರಾಮದಲ್ಲಿ ಮೊದಲ ಬಾರಿಗೆ ದುರ್ಗಾ ದೌಡ ನಡೆಯುತ್ತಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಈ ಧಾರ್ಮಿಕ ನಡಿಗೆಯಲ್ಲಿ ಗ್ರಾಮಸ್ಥೆರಲ್ಲರೂ ಉತ್ಸಾಹದಿಂದ ಪಾಲ್ಗೋಳ್ಳುತ್ತಿದ್ದರು.
ದುರ್ಗಾ ದೌಡನಲ್ಲಿ ವಿನಾಯಕ ನಾರ್ವೇಕರ, ಮಂಜು ಬಾವಕರ, ಮಂಜು ಕಮ್ಮಾರ, ವಿಶಾಲ ತೋರ್ಲೆಕರ, ಮಂಜುನಾಥ ಗುಂಜಿಕರ, ಸ್ವಾಗತ ಲೋಹಾರ, ಸಚಿನ್ ಚಿಪ್ಟಿ, ರಾಜೇಶ ನಾರ್ವೇಕರ, ಪರಸು ಚಿಗಳ್ಳಿ ಭಾಗವಹಿದ್ದರು.
Leave a Comment