ಹಳಿಯಾಳ:- ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ಪ್ರತಿಷ್ಠಾಪಿಸಲಾಗಿರುವ ಹಳಿಯಾಳದ ಕಿಲ್ಲಾ ಪ್ರದೇಶದಲ್ಲಿಯ ವಿವಾದಿತ ಪ್ರದೇಶಕ್ಕೆ ಪಶ್ಚಿಮ ವಲಯ ಐಜಿಪಿ ಅರುಣ ಚಕ್ರವರ್ತಿ ಭೇಟಿ ನೀಡಿ ವೀಕ್ಷಿಸಿದರು.
ಗುರುವಾರ ದಾಂಡೇಲಿಗೆ ಆಗಮಿಸಿದ್ದ ಐಜಿಪಿ ಅವರು ಪೋಲಿಸ್ ಠಾಣೆಗಳ ಪ್ರಗತಿಯನ್ನು ಪರೀಶಿಲಿಸಿ ಶುಕ್ರವಾರ ಹಳಿಯಾಳಕ್ಕೆ ಆಗಮಿಸಿ ಭಾರಿ ವಿವಾದಕ್ಕೆ ಕಾರಣವಾಗಿ ನೂರಾರು ಜನರ ಮೇಲೆ ಪ್ರಕರಣ ದಾಖಲಾಗಿರುವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿರುವ ವಿವಾದಿತ ಸ್ಥಳವನ್ನು ಪರಿಶೀಲಿಸಿದರು.
ಬಳಿಕ ಹಳಿಯಾಳ ಪೋಲಿಸ್ ಠಾಣೆಗೆ ಆಗಮಿಸಿದ ಅವರನ್ನು ಹಳಿಯಾಳ ಪಿಎಸ್ಐ ಆನಂದಮೂರ್ತಿಯವರು ಗೌರವ ರಕ್ಷೆ ನೀಡಿದರು. ಅವರೊಂದಿಗೆ ಎಸ್ಪಿ ವಿನಾಯಕ ಪಾಟೀಲ್, ಡಿವೈಎಸ್ಪಿ ಮೋಹನಪ್ರಸಾದ, ಸಿಪಿಐಗಳಾದ ಲೋಕಾಪುರ ಬಿಎಸ್, ಅನಿಸ ಮುಜಾವರ ಇದ್ದರು.
Leave a Comment