• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ಪಟ್ಟಣದಲ್ಲಿ ದೀಪಾವಳಿ ಜೂಜಾಟಕ್ಕೆ ನಡೆದಿದೆ ತಯಾರಿ- ನಾಲ್ಕೈದು ದಿನಗಳಲ್ಲೇ ಆಗುತ್ತೆ ಕೊಟ್ಯಂತರ ರೂ ವಹಿವಾಟು. 8 ಗುಂಪುಗಳಿಂದ ನಡೆದಿದೆ ಜೂಜಾಟ ನಡೆಸಲು ಪೈಪೋಟಿ.

November 2, 2018 by Yogaraj SK Leave a Comment

ಹಳಿಯಾಳ: ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು ಇವು ದೀಪಾವಳಿ ಸಂದರ್ಭದಲ್ಲಿ ಹಬ್ಬದ ನೆಪ ಮಾಡಿ ಸಂಬಂಧ ಪಟ್ಟವರಿಂದ ಅಲಿಖಿತ ಹಾಗೂ ಅಕ್ರಮ ಪರವಾನಿಗೆ ಪಡೆದು ಕೊಟ್ಯಂತರ ರೂ ಅಕ್ರಮ ವ್ಯವಹಾರ ನಡೆಸಿ ಯುವಕರು, ಕಾರ್ಮಿಕರನ್ನು ಬೀದಿಗೆ ತಳ್ಳುವ ದಂಧೆಗೆ ಈಗಾಗಲೇ ಭರ್ಜರಿ ತಯಾರಿ ಹಳಿಯಾಳದಲ್ಲಿ ನಡೆದಿರುವ ಬಗ್ಗೆ ಪಟ್ಟಣದಲ್ಲಿ ಚರ್ಚೆಯಾಗುತ್ತಿದೆ.
ಹಳಿಯಾಳದಲ್ಲಿ ಅಂದರ ಬಾಹರ್-ಮಟ್ಕಾ, ವೈಶ್ಯಾವಾಟಿಕೆ, ಅಕ್ರಮ ಸರಾಯಿ ಮಾರಾಟ, ಕ್ರಿಕೇಟ ಬೆಟ್ಟಿಂಗ್ ನಂತಹ ಅಕ್ರಮ ಚಟುವಟಿಕೆಗಳಿಗೇನೂ ಕೊರತೆಯಿಲ್ಲ. ಇವೆಲ್ಲವೂ ಹಾಡು ಹಗಲೇ ರಾಜಾರೋಷವಾಗಿ ನಡೆಯುತ್ತಿವೆ. ಇದನ್ನು ನಿಯಂತ್ರಿಸುವವರೂ ಇಲ್ಲ. ಇದರ ಬಗ್ಗೆ ಮಾತಾಡುವವರೂ ಇಲ್ಲ. ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆಯೇ ನಗರದಲ್ಲಿ ಪ್ರತೀ ದೀಪಾವಳಿಯ ಸಂದರ್ಭದಲ್ಲಿ ಅಕ್ರಮ ಇಸ್ಫೀಟ್ ಅಡ್ಡೆಗಳ ದರ್ಬಾರ ಜೋರಾಗಿರುತ್ತದೆ. ದೀಪಾವಳಿಯ ನಾಲೈದು ದಿನಗಳಿಗಷ್ಠೇ ಸಿಮಿತವಾಗಿ ನಡೆಯುವ ಈ ಆಟವನ್ನು ಇದೊಂದು ವೀಶೇಷ ಇಸ್ಪೀಟ್ ಅಡ್ಡೆಗಳ ಶಿಬಿರ ಎಂದು ಕರೆಯಬುಹುದು.
ದೀಪಾವಳಿ ಹಬ್ಬದ ಆಸು ಪಾಸಿನ 7-8 ದಿನಗಳಿಗಷ್ಟೇ ನಡೆಯುವ ಈ ಜೂಜಾಟದಲ್ಲಿ ನೂರಾರು ಜನ ಕೊಟ್ಯಂತರ ರೂ. ಹಣ ಕಳೆದುಕೊಳ್ಳುತ್ತಾರೆ. ಈ ಭಾಗದಲ್ಲಿ ಇದೊಂಥರ ಹಬ್ಬದ ಭಾಗವೆಂಬಂತೆ ನಡೆದು ಹೋಗಿಬಿಡುತ್ತದೆ, ಹಬ್ಬದ ದಿನವಿಡೀ ಇಸ್ಪೀಟ್ ಅಡ್ಡೆಗಳಲ್ಲಿಯೇ ಕಳೆಯುವ ಮಹಾಶಯರೂ ನಗದು, ಬಂಗಾರ, ಬೈಕ್, ವಾಹನ ಸೇರಿದಂತೆ ಎಲ್ಲವನ್ನು ಸೋಲುವುದಲ್ಲದೇ ಇಲ್ಲಿ ಪ್ರತಿದಿನಕ್ಕೆ ಶೇ.10, 15 ಹಾಗೂ 20 ಬಡ್ಡಿಯಂತೆ ಹಣ ನೀಡುವ ದುರುಳರಿದ್ದು ಅವರಿಂದ ಹಣ ಪಡೆದು ಆ ಹಣ ದುಪ್ಪಟ್ಟಾಗಿ ಅದನ್ನು ತೀರಿಸಲಾಗದೆ ಮನೆಗಳನ್ನು ಮಾರಾಟ ಮಾಡಿರುವ ಸಾಕಷ್ಟು ಘಟನೆಗಳು ಈಗಾಗಲೇ ಪಟ್ಟಣದಲ್ಲಿ ನಡೆದಿದ್ದು ಈ ನಾಲ್ಕೈದು ದಿನಗಳ ಇಸ್ಪೀಟ್ ಅಡ್ಡೆಗಳಿಗಾಗಿಯೇ ಅಲಿಖಿತ ಪರವಾನಿಗೆಯನ್ನು ಸಂಬಂದಪಟ್ಟವರು ನೀಡಿ ಜನ ನಷ್ಠ ಅನುಭವಿಸಲು ಪರೋಕ್ಷವಾಗಿ ಕಾರಣರಾಗುತ್ತಾರೆ.
ದೀಪಾವಳಿಯಲ್ಲಿ ನಡೆಯುವ ಇಸ್ಪೀಟ್ ಅಡ್ಡೆಗಳು ಪಟ್ಟಣದ ಹತ್ತಾರು ಕಡೆಗಳಲ್ಲಿ ನಡೆಯುತ್ತದೆ. ಆದರೇ ಇಲಾಖೆಯವರಂತೂ ಆಕಡೆ ಮುಖವನ್ನೂ ಹಾಕುವುದಿಲ್ಲವಂತೆ. ಪ್ರತಿಯೊಬ್ಬ ಇಸ್ಪೀಟ್ ದೊರೆಗಳೂ ಸಹ ಈ ದೀಪಾವಳಿ ಜೂಜಾಟಕ್ಕಾಗಿಯೇ ಲಕ್ಷಾಂತರ ರೂ. ಕಪ್ಪ ಕೊಡುತ್ತಾರೆ ಅಲ್ಲದೇ ಅವರು ಲಕ್ಷಾಂತರ ರೂ ಗಳಿಸುತ್ತಾರೆ.
ಈ ನಾಲ್ಕೈದು ದಿನಗಳ ಇಸ್ಪೀಟ್ ಆಟದಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ದಾಂಡೇಲಿ, ಜೋಯಿಡಾ, ಅಳ್ನಾವರ, ಕಲಘಟಗಿ, ಧಾರವಾಡ, ಹುಬ್ಬಳ್ಳಿ, ಖಾನಾಪೂರ, ಬೆಳಗಾವಿ ಸೇರಿದಂತೆ ವಿವಿದೆಡೆಯ ಜನರು ಇಲ್ಲಿಗೆ ಇಸ್ಪೀಟ್ ಆಡಲು ಬರುತ್ತಾರೆ. ಇಸ್ಪೀಟ್ ಆಡಿಸುವ ಫಂಡ ಮಾಲಿಕರು ಮಾತ್ರ ಕೇವಲ 5-6 ದಿನಗಳಲ್ಲಿ ಲಕ್ಷಾಂತರ ರೂ. ಕಮಾಯಿಸಿ ತನ್ನ ವರ್ಷದ ದುಡಿಮೆಯನ್ನು ಮಾಡಿಕೊಳ್ಳುತ್ತಾರೆ ಆದರೇ ಆಡುವವರು ಮಾತ್ರ ಬೀದಿಗೆ ಬಿಳುತ್ತಾರೆ.
ಇನ್ನೂ ಸಾಮಾಜಿಕ ಚಟುವಟಿಕೆ ಹಾಗೂ ಕ್ರೀಡೆಗಳಿಗೆ ಪರವಾನಿಗೆ ಪಡೆದುಕೊಂಡ ಬಂದಿರುವ ಕೆಲ ಕ್ಲಬ್‍ಗಳು ರಾಜಾರೋಷವಾಗಿ ಪಟ್ಟಣದಲ್ಲಿ ಲಕ್ಷಾಂತರ ರೂ. ಇಸ್ಪಿಟ್ ಎಲೆಗಳ ರಮ್ಮಿ ಆಟ ನಡೆಸಿ ಯುವಕರು, ನೌಕರರು ಹಾಗೂ ಕಾರ್ಮಿಕರನ್ನು ಬೀದಿಗೆ ತಳ್ಳುವ ಕಾಯಕದಲ್ಲಿ ತೊಡಗಿದ್ದು ಅಲ್ಲದೇ ಈಗಾಗಲೇ ಹಳಿಯಾಳದಲ್ಲಿ ನಡೆಯುವ ಅಂದರ್-ಬಾಹರ್ ಜೂಜು ಅಡ್ಡೆಗಳ ಬಗ್ಗೆ ರಾಜ್ಯಾದ್ಯಂತ ಪ್ರಸಿದ್ದಿ ಪಡೆದಿದ್ದು ಸದ್ಯ ನಡೆಯುತ್ತಿರುವ ಈ ಆಟಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಜನ ಆಗಮಿಸುತ್ತಿದ್ದು ಕೊಟ್ಯಂತರ ರೂ. ವ್ಯವಹಾರ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 8 ಗುಂಪುಗಳಿಂದ ಜೂಜಾಟಕ್ಕೆ ನಡೆಸಲು ಲಾಭಿ, ಅಕ್ರಮ ಪರವಾನಿಗೆ, ಅಕ್ರಮ ಸರಾಯಿ ಮಾರಾಟ, ಅಂದರ ಬಾಹರ್-ಮಟ್ಕಾ, ಅಲಿಖಿತ, ಇಸ್ಪೀಟ್ ಆಟದಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ, ಇಸ್ಫೀಟ್ ಅಡ್ಡೆಗಳ ದರ್ಬಾರ, ಈಗಾಗಲೇ, ಕಾರ್ಮಿಕರನ್ನು, ಕೊಟ್ಯಂತರ ರೂ ಅಕ್ರಮ ವ್ಯವಹಾರ, ಕೊಟ್ಯಂತರ ರೂ ವಹಿವಾಟು, ಕ್ರಿಕೇಟ ಬೆಟ್ಟಿಂಗ್, ಗ್ರಾಮಾಂತರ ಭಾಗ, ದೀಪಾವಳಿ ಜೂಜಾಟ, ನಡೆದಿದೆ ತಯಾರಿ, ನಾಲ್ಕೈದು ದಿನಗಳಲ್ಲೇ ಆಗುತ್ತೆ, ಪಡೆದು, ಬೀದಿಗೆ ತಳ್ಳುವ ದಂಧೆಗೆ, ಭರ್ಜರಿ ತಯಾರಿ, ಯುವಕರು, ವೀಶೇಷ ಇಸ್ಪೀಟ್ ಅಡ್ಡೆಗಳ ಶಿಬಿರ, ವೈಶ್ಯಾವಾಟಿಕೆ, ಸಂಬಂಧ ಪಟ್ಟವರಿಂದ, ಹಳಿಯಾಳ ಪಟ್ಟಣದಲ್ಲಿ, ಹಾಡು ಹಗಲೇ ರಾಜಾರೋಷ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar