ಹಳಿಯಾಳ:- 63 ನೇಯ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಳಿಯಾಳ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ತಾಲೂಕಾ ಘಟಕದವರು ಇದೆ ಪ್ರಥಮ ಬಾರಿಗೆ ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ಹಳಿಯಾಳ ಜನರ ಪ್ರಶಂಸೆಗೆ ಪಾತ್ರರಾದರು.
ವಿಶೇಷತೆ :- ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬುಡಕಟ್ಟು ಸಿದ್ದಿ ಸಮುದಾಯದವರ ಸಾಂಪ್ರದಾಯಿಕ ನೃತ್ಯ, ಹೈನುಗಾರಿಕೆಯನ್ನೇ ಕುಲಕಸುಬನ್ನಾಗಿಸಿಕೊಂಡಿರುವ ಗೌಳಿ ಜನಾಂಗದವರ ಸಾಂಪ್ರದಾಯಿಕ ನೃತ್ಯ, ಬೇಡರ ವೇಷ, ಯಕ್ಷವೇಷ, ಹುಲಿವೇಷ ಧಾರಿಗಳು, ಗಾಳಿಪಟ ತಂಡ, ಗೊಂದಳಿ ದೇವರ ತಂಡ, ಯಲ್ಲಮ್ಮಾದೇವಿ ಆರಾಧಕರಾದ ದುರ್ಗಮರಗಿಯರ ತಂಡಗಳು ಹಾಗೂ ಇತರ ವೇಷಧಾರಿಗಳು ಪಟ್ಟಣದಲ್ಲಿ ಜಾಥಾ ನಡೆಸಿದರು.
ಹಳಿಯಾಳ ಗ್ರಾಮದೇವಿ ಉಡಚಮ್ಮಾ ದೇವಿ ದೇವಸ್ಥಾನದಿಂದ ಹಳಿಯಾಳ ಆದಿಶಕ್ತಿ ಪಿಠದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮಿಜಿಗಳು ಈ ಭವ್ಯ ಜಾಥಾಗೆ ಚಾಲನೆ ನೀಡಿದರು. ಶೆಟ್ಟಿಗಲ್ಲಿ, ಕಿಲ್ಲಾ ಪ್ರದೇಶ, ಮೇದಾರಗಲ್ಲಿ, ಬಸ್ ನಿಲ್ದಾಣ ರಸ್ತೆ, ವನಶ್ರೀ ವೃತ್ತ, ಶೀವಾಜಿ ವೃತ್ತ, ಮುಖ್ಯ ಬೀದಿ, ಯಲ್ಲಾಪೂರ ನಾಕಾ ಹೀಗೆ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ಸಾಂಸ್ಕøತೀಕ ಸೊಬಗನ್ನು ಅನಾವರಣಗೊಳಿಸಿದ ಜಾಥಾ ನೂರಾರು ಯುವಕರು ಕನ್ನಡದ ಹಾಡಿಗಳಿಗೆ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು.
ಕರವೇಯ ಅಧ್ಯಕ್ಷ ಬಸವರಾಜ ಬೇಂಡಿಗೇರಿಮಠ, ಚಂದ್ರಕಾಂತ ಗೊಂಧಳಿ, ಮಹೇಶ ಆನೆಗುಂದಿ, ವಿನೋದ ದೊಡ್ಮನಿ, ಸುಧಾಕರ ಕುಂಬಾರ, ಚಂದ್ರಕಾಂತ ಅರಿಶೀನಗೇರಿ, ಶ್ರೀಶೈಲ ಮಠದೇವರು, ವಿಜಯ ಫಡ್ನಿಸ್, ನಂದು, ಸಚಿನ, ಪ್ರಶಾಂತ, ರಾಮಾ, ಸುರೇಶ, ಮಂಜು, ಶೀವು, ಈರಣ್ಣಾ, ಶೀವಾನಂದ ಮೊದಲಾದವರು ಇದ್ದರು.
ಜಯ ಕರ್ನಾಟಕ ಸಂಘಟನೆಯಿಂದಲೂ ಮೇರವಣ ಗೆ:- ಕನ್ನಡ ರಾಜ್ಯೋತ್ಸವ ಅಂಗವಾಗಿ ಇದೆ ಮೋದಲ ಬಾರಿಗೆ ಪಟ್ಟಣದಲ್ಲಿ ಭಾರಿ ಡಿಜೆ ಸಂಗೀತದೊಂದಿಗೆ ನೂರಾರು ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ನಾಡಿನ ಬಗೆಗಿನ ಸಂಗೀತಕ್ಕೆ ಹೆಜ್ಜೆ ಹಾಕುವುದರ ಮೂಲಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿದರು. ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪಟ್ಟಣದ ಯಲ್ಲಾಪೂರ ನಾಕಾದಿಂದ ಹೋರಟ ಮೇರವಣ ಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಜಯ ಕರ್ನಾಟಕ ಸಂಘದ ಅಧ್ಯಕ್ಷ ವಿಲಾಸ ಕಣಗಲಿ, ಶಿರಾಜ ಮುನವಳ್ಳಿ, ಗಣೇಶ ಗೊಸಪ್ಪನವರ, ವಿಕ್ರಾಂತ ಶೆಟ್ಟಿ, ಗೋಪಿ ಮೊದಲಾವರು ಇದ್ದರು.
Leave a Comment