ಹಳಿಯಾಳ :- ಭಾರತೀಯನಲ್ಲದ ಹಾಗೂ ಕ್ರೂರಿ ಟಿಪ್ಪು ಸುಲ್ತಾನ ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೆನರಾ ಸಂಸದ ಅನಂತಕುಮಾರ ಹೆಗಡೆ ನಿಲುವಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದ್ದಾರೆ.
ಸೋಮವಾರ ಪಟ್ಟಣದಲ್ಲಿ ಬಿಜೆಪಿ ಹಳಿಯಾಳ ಘಟಕದಿಂದ ನಡೆಸಲಾದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಸದರ ನಿಲುವು ಸರಿಯಾಗಿದ್ದು ಹಳಿಯಾಳ ಬಿಜೆಪಿ ಘಟಕ ಅವರ ನಿಲುವಿಗೆ ಬದ್ದವಿದೆ ಹಾಗೂ ಹಳಿಯಾಳದಲ್ಲೂ ಕೂಡ ಟಿಪ್ಪು ಜಯಂತಿ ಆಚರಣೆಗೆ ತಮ್ಮ ಪ್ರಭಲ ವಿರೋಧವಿದೆ ಎಂದು ಎಚ್ಚರಿಕೆ ನೀಡಿದರು.
ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆಗೆ ಅವಕಾಶವಿಲ್ಲ ಹೀಗಿರುವಾಗ ಕಾಂಗ್ರೇಸ್ಸಿಗರು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು, ಓಟಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಂ ಸಮುದಾಯದವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆಪಾದಿಸಿದ ಅವರು ಕುರಾನ್ ಅನ್ನು ಗೌರವಿಸುವ ನೀಜವಾದ ಮುಸ್ಲಿಮರು ಯಾರು ಜಯಂತಿ ಆಚರಣೆಯಲ್ಲಿ ಭಾಗವಹಿಸುವುದಿಲ್ಲ ಎಂದರು.
ಹಳಿಯಾಳ ಕ್ಷೇತ್ರದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಪೂರ್ಣ ವಿರೋಧವಿದೆ ಎಂದು ಒತ್ತಿ ಹೇಳಿದ ಅವರು ಈ ವಿಷಯದಲ್ಲಿ ಆ ದಿನ ಬಿಜೆಪಿ ಪಕ್ಷದ ಆದೇಶದ ಪ್ರಕಾರ ಪ್ರತಿಭಟನೆ ನಡೆಸಲಾಗುವುದು. ಇದನ್ನು ಸಂಬಂಧಪಟ್ಟವರು ತಿಳಿದುಕೊಳ್ಳಬೇಕು ಶಾಂತಿ ಸುವ್ಯವಸ್ಥೆ ಹಾಳಾದರೇ ಅವರೇ ಜವಾಬ್ದಾರರು ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.
ಪ್ಯಾರಿಯವರು ರೈತರ ಬಾಕಿ ಹಣ ಪಾವತಿಸಲಿ :- ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 2750ರೂ. ದರ ನಿಗದಿಪಡಿಸಿದ್ದು ಕೂಡಲೇ ಸ್ಥಳೀಯ ಸಕ್ಕರೆ ಕಾರ್ಖಾನೆ ಈ ಆದೇಶವನ್ನು ಪಾಲಿಸಬೇಕು. ಒಂದಾನುವೇಳೆ ಆದೇಶ ಪಾಲಿಸದೆ ಇದ್ದಲ್ಲಿ ಕೇಂದ್ರ ಸರ್ಕಾರಕ್ಕೆ ಕಂಪೆನಿಯ ವಿರುದ್ದ ದೂರು ನೀಡಲಾಗುವುದು ಎಂದು ಹೇಳಿದ ಹೆಗಡೆ ರೈತರು ಬದುಕಿದರೇ ಕಾರ್ಖಾನೆ ಬದುಕುತ್ತೆ ಎನ್ನುವುದನ್ನು ಕಂಪೆನಿ ಅರಿಯಬೇಕು. ಅಲ್ಲದೇ ರೈತರ ಬಾಕಿ ಹಣ 305ರೂ ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು ಇಲ್ಲವಾದಲ್ಲಿ ಪ್ಯಾರಿ ಕಾರ್ಖಾನೆಯ ವಿರುದ್ದ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗುತ್ತದೆ ಎಂದರು.
ಕಸಾಯಿಖಾನೆ ವಿರುದ್ದ ಹೋರಾಟ:- ಹಳಿಯಾಳದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗೋವಧಾಲಯ(ಕಸಾಯಿಖಾನೆ) ಹಾಗೂ ಎಲ್ಲೆಂದರಲ್ಲಿ ತಲೆ ಎತ್ತಿರುವ ಪರವಾನಿಗೆ ಇಲ್ಲದ ಚಿಕನ್,ಮಟನ್ ಅಂಗಡಿಗಳನ್ನು ತೆರವುಗೊಳಿಸುವಂತೆ ನೀಡಿದ ಮನವಿಗೆ ಪುರಸಭೆಯವರು ಈವರೆಗೆ ಸ್ಪಂದಿಸಿಲ್ಲ ದೀಪಾವಳಿ ಹಬ್ಬ ಮುಗಿದ ಬಳಿಕ ಬಿಜೆಪಿ ಪಕ್ಷದಿಂದ ಈ ಕುರಿತು ಊಗ್ರ ಹೋರಾಟ ನಡೆಸಲಾಗುವುದೆಂದರು.
ಮಂದಿರ ನಿರ್ಮಾಣ ಶತಸಿದ್ದ :- ರಾಮಮಂದಿರ ವಿಚಾರ ದೇಶದ ಕೊಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಯ ವಿಚಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವುದು ಶತಸಿದ್ದ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪುರಸಭೆ ಸದಸ್ಯರಾದ ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಸಂತೋಷ ಘಟಕಾಂಬಳೆ ಮುಖಂಡರಾದ ವಿಜಯ ಬೋಬಾಟಿ, ಸಂತಾನ ಸಾವಂತ, ಯಲ್ಲಪ್ಪಾ ಹೊನ್ನೊಜಿ, ಆನಂದ ಕಂಚನಾಳಕರ, ರಾಜು ಹಳ್ಳುಕರ ಇತರರು ಇದ್ದರು.
Leave a Comment