ಹಳಿಯಾಳ:- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಟಿಪ್ಪು ಸುಲ್ತಾನ ಜಯಂತಿಗೆ ಹಳಿಯಾಳ ಬಿಜೆಪಿ ಪಕ್ಷದಿಂದ ತೀವೃ ವಿರೋಧವಿದೆ ಅಲ್ಲದೇ ಬಹಿರಂಗ ಕಾರ್ಯಕ್ರಮ ನಡೆಸಿ ಏನಾದರೂ ಅನಾಹುತಗಳಾದರೇ ಅದಕ್ಕೆ ತಾಲೂಕಾಡಳಿತವೇ ಹೊಣೆ ಎಂದು ಬಿಜೆಪಿ ಪಕ್ಷ ಎಚ್ಚರಿಕೆ ನೀಡಿದೆ.
ಬಿಜೆಪಿ ತಾಲೂಕಾಧ್ಯಕ್ಷ ಶೀವಾಜಿ ನರಸಾನಿ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದ ಬಿಜೆಪಿ ನಿಯೋಗ ಹಳಿಯಾಳ ತಹಶೀಲ್ದಾರ್ ಹಾಗೂ ಪೋಲಿಸ್ ಇಲಾಖೆಗೆ ಈ ಕುರಿತು ಲಿಖಿತ ಮನವಿ ಸಲ್ಲಿಸಿದೆ.
ಮನವಿಯಲ್ಲಿ ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿರುವ ಟಿಪ್ಪು ಜಯಂತಿಗೆ ತಮ್ಮ ತೀವೃ ವಿರೋಧವಿದೆ ಹಾಗೂ ಬಹಿರಂಗವಾಗಿ ಮೇರವಣ ಗೆ, ಡಾಲಬಿ ಸೌಂಡ್ ಸಿಸ್ಟಮ್ ಮೂಲಕ ಜಯಂತಿ ಆಚರಣೆಗೆ ಅವಕಾಶ ನೀಡಬಾರದು. ಒಂದಾನುವೇಳೆ ಬಹಿರಂಗ ಕಾರ್ಯಕ್ರಮ ನಡೆದರೇ ಬಿಜೆಪಿಯಿಂದ ಕಪ್ಪು ಪಟ್ಟಿ ಧರಿಸಿ ತೀವೃ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಏನಾದರೂ ಅನಾಹುತಗಳಾದರೇ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತವೇ ಹೋಣೆಗಾರರಾಗಬೇಕಾಗುತ್ತದೆ ಎಂದು ಬಹಿರಂಗ ಎಚ್ಚರಿಕೆ ನೀಡಲಾಗಿದೆ.
ಮನವಿ ಸಲ್ಲಿಸುವಾಗ ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಅನಿಲ ಮುತ್ನಾಳ, ವಿಲಾಸ ಯಡವಿ, ಆನಂದ ಕಂಚನಾಳಕರ, ಯಲ್ಲಪ್ಪಾ ಹೊನ್ನೊಜಿ, ವಾಸುದೇವ ಪೂಜಾರಿ, ಕಿರಣ ಭಜಂತ್ರಿ, ವಿಜಯ ಬೋಬಾಟಿ, ಹನುಮಂತ, ಉಲ್ಲಾಸ, ಸಿದ್ದು, ರಾಜು, ನಾಗರಾಜ ಮೊದಲಾದವರು ಇದ್ದರು.
Leave a Comment