ದಾಂಡೇಲಿ : ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ನಗರದ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ನಡೆದ ದಾಂಡೇಲಿ, ಹಳಿಯಾಳ, ಜೊಯಿಡಾ ತಾಲ್ಲೂಕು ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಡಿದ ಪತ್ರಕರ್ತ ಹಾಗೂ ಗ್ರೀನ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಬಿ.ಪಿ.ಮಹೇಂದ್ರಕುಮಾರ್ ಅವರು ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಜನಮುಖಿ ಕಾರ್ಯಗಳು ವಿಭಿನ್ನವಾಗಿದೆ. ಸಾಮಾಜಿಕ ಸ್ಪಂದನೆಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯ. ಜಿಲ್ಲೆಯಲ್ಲೆ ಮೊದಲ ಬಾರಿಗೆ ಪತಿ-ಪತ್ನಿಯರಿಗಾಗಿ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಿ ಗಮನ ಸೆಳೆದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಕಾರ್ಯವನ್ನು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಪ್ರವಾಸೋದ್ಯಮಿ ಹಾಗೂ ರೋಟರಿ ಕ್ಲಬಿನ ನಿಕಟಪೂರ್ವ ಅಧ್ಯಕ್ಷ ರವಿಕುಮಾರ್.ಜಿ.ನಾಯಕ ಅವರು ಮಾತನಾಡಿ ಕಷ್ಪಪಟ್ಟು ಜನರಿಗೆ ಇಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ ದಾಂಡೇಲಿಗೆ ಹೆಮ್ಮೆ ತರುವ ಕೆಲಸ ಮಾಡುತ್ತಿದೆ ಎಂದರು.
ಇನ್ನೋರ್ವ ಅತಿಥಿ ಪ್ರಸಾದ ಹುಣ್ಸವಾಡಕರ ಅವರು ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಕಾರ್ಯವನ್ನು ಕೊಂಡಾಡಿದರು. ವೇದಿಕೆಯಲ್ಲಿ ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್.ವಾಸರೆ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಪದಾಧಿಕಾರಿಗಳಾದ ಕುಮಾರ್ ಕರಗಯ್ಯ, ಇಮಾಮ್ ಸರ್ವರ್, ಸುರೇಶ ಕಾಮತ್, ಗುರು ಮಠಪತಿ, ವಿನೋದ ಬಾಂದೇಕರ, ನವೀನ ಕಾಮತ್, ಉದ್ಯಮಿ ಪ್ರೇಮಾನಂದ ಗವಸ, ಪ್ರವಾಸೋದ್ಯಮಿ ಸ್ಟ್ಯಾನ್ಲಿ ಪೆಡ್ರಿಕ್ ಪಿಂಟೊ, ಮಾಜಿ ರಾಷ್ಟ್ರೀಯ ವಾಲಿಬಾಲ್ ಆಟಗಾರ ಮುರಳಿಧರ ಗುರವ, ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್.ಎಂ.ಗುರವ ಹಾಗೂ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ಯುವಕ ಮಂಡಳದ ಅಧ್ಯಕ್ಷ ಸಂದೇಶ್.ಎಸ್.ಜೈನ್ ಸ್ವಾಗತಿಸಿದರು. ಕುಮಾರ್ ಕರಗಯ್ಯ ವಿಜೇತರ ಯಾದಿಯನ್ನು ಪ್ರಕಟಿಸಿದರು. ಚಂದ್ರು ಆರ್ಯ ವಂದಿಸಿದರು. ಅಬ್ಬಸಾಲಿ ಮತ್ತು ಮುರುಗೇಶ ನಾಯರ್ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಳದ ಪ್ರಚಾರ ರಾಯಭಾರಿ ಸತ್ತುರಾಮ ಧರೇಕರ ಹಾಗೂ ಪದಾಧಿಕಾರಿಗಳಾದ ಪ್ರಶಾಂತ ಶಿಳ್ಳಿನ, ಡಿ.ಜೆ.ಪ್ರಕಾಶ, ಪಾಸ್ಕಲ್ ಪರ್ನಾಂಡೀಸ್, ಯಾಹೋನಾ.ಓ.ಹರಿಜನ, ಮನೋಜ್.ಪಿ.ಕುರುಬಗಟ್ಟಿ, ಸಚ್ಚಿನ್ ಜಾಧವ, ಶುಭಂ, ಪ್ರಜ್ವಲ್ ಮೊದಲಾದವರು ಸಹಕರಿಸಿದರು.
ಪಂದ್ಯಾವಳಿಯ ವಿಜೇತರು :
12 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ: ನವನೀತ ನವೀನ ಕಾಮತ್, ದ್ವಿತೀಯ: ಯುವರಾಜ ಹೊಸಮಠ, 15 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ: ತರುಣ್ ಮುರುಗೋಡಣ್ಣನವರ, ದ್ವಿತೀಯ: ಪ್ರಥಮ ರಾವ್ ಹಾಗೂ 15 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ : ಸ್ಮøತಿ ನಾಯ್ಕ, ದ್ವಿತೀಯ: ಆರ್ಯ ಅವರುಗಳು ಬಹುಮಾನವನ್ನು ತನ್ನದಾಗಿಸಿಕೊಂಡರು.
ಪತಿ-ಪತ್ನಿಯರಿಗಾಗಿ ನಡೆದ ಮಿಕ್ಸೆಡ್ ಡಬ್ಬಲ್ಸ್ ಪಂದ್ಯಾವಳಿಯಲ್ಲಿ ಪ್ರಥಮ: ಶರಣ್ ಹೆಬ್ಬಳ್ಳಿಮಠ ದಾಂಡೇಲಿ ಹಾಗೂ ಪ್ರಿಯಾ.ಎಸ್.ಹೆಬ್ಬಳ್ಳಿಮಠ, ದ್ವಿತೀಯ: ನಿತೀನ್ ದೇಶಪಾಂಡೆ ಹಳಿಯಾಳ ಹಾಗೂ ನವ್ಯ.ಎನ್.ದೇಶಪಾಂಡೆಯವರು ಬಹುಮಾನವನ್ನು ಪಡೆದರು. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳಲ್ಲಿ ಅತ್ಯಂತ ಹಿರಿಯ ಜೋಡಿ ತಂಡಕ್ಕಾಗಿ ನೀಡಲಾದ ಬಹುಮಾನವನ್ನು ಹಿರಿಯ ಆಟಗಾರ ಇನಾಜ್ ವಾಜ್ ಹಾಗೂ ಅನ್ಲಿನ್.ಐ. ವಾಜ್ ಮತ್ತು ಕಿರಿಯ ಜೋಡಿ ಬಹುಮಾನವನ್ನು ಪ್ರತೀಕ ಹುಣ್ಸವಾಡಕರ ಹಾಗೂ ಸುರಭಿ.ಪಿ.ಹುಣ್ಸವಾಡಕರ ಅವರುಗಳ ತಂಡ ತನ್ನದಾಗಿಸಿಕೊಂಡಿತು.
Leave a Comment