• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಾಲಕರು ನೀಡುವ ಒತ್ತಾಯದ ಪಠ್ಯಾಧಾರಿತ ಶೀಕ್ಷಣಕ್ಕೆ‌ ಪ್ರತಿಭೆಗಳು ಕಮರಿ ಹೊಗುತ್ತಿವೆ – ಎಸಿಎಫ್ ಸಂತೋಷ ಕೆಂಚಪ್ಪನವರ

November 13, 2018 by Yogaraj SK Leave a Comment

Kusti krida patugala palakara samavesh

ಹಳಿಯಾಳ:- ಕ್ರೀಡೆಯಿಂದಲೂ ಉಜ್ವಲ ಭವಿಷ್ಯ ರೂಪಿಸಲು ಹಾಗೂ ದೇಶ ಸೇವೆಯನ್ನು ಮಾಡಲು ಸಾಕಷ್ಟು ಅವಕಾಶವಿದೆ. ಈ ಸತ್ಯವನ್ನು ಪಾಲಕರು ಹಾಗೂ ಮಕ್ಕಳು ಅರಿಯುತ್ತಿಲ್ಲ ಆದ ಕಾರಣವೇ ನಮ್ಮಲ್ಲಿರುವ ಸಾಕಷ್ಟು ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ, ಪಾಲಕರ ನೀಡುವ ಒತ್ತಾಯದ ಪಠ್ಯಾಧಾರಿತ ಶಿಕ್ಷಣಕ್ಕೆ ಪ್ರತಿಭೆಗಳು ಕಮರಿ ಹೋಗುತ್ತಿವೆ ಎಂದು ಹಳಿಯಾಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಹೇಳಿದರು.
ಪಟ್ಟಣದ ಕ್ರೀಡಾಭವನದಲ್ಲಿ ಅರ್ಬನ್ ಯುಥ್ ಕ್ಲಬ್ ಹಳಿಯಾಳ, ಉತ್ತರಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನ ಕಾರವಾರ ಇವರ ಜಂಟೀ ಆಶ್ರಯದಲ್ಲಿ ಆಯೋಜಿಸಿದ ಕುಸ್ತಿ ಕ್ರೀಡಾಪಟುಗಳ ಪಾಲಕರ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಹಿಂದೇ ನಮ್ಮ ಮಕ್ಕಳ ಮನಸ್ಸು, ಆರೋಗ್ಯ ಹಾಗೂ ಶರೀರವನ್ನು ಆರೋಗ್ಯಕರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಗರಡಿಮನೆಗಳ ಬಗ್ಗೆ ಈಗಿನ ಪೀಳಿಗೆಯಲ್ಲಿ ಹಾಗೂ ಅವರ ಪಾಲಕರಲ್ಲಿ ಆಸಕ್ತಿ ಕಡಿಮೆಯಾಗಲಾರಂಭಿಸಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಬೇರೆಡೆ ಹೊಲಿಸಿದರೆ ಹಳಿಯಾಳ ತಾಲೂಕಿನಲ್ಲಿ ಇನ್ನೂ ಗರಡಿಮನೆಗಳ ಸಂಸ್ಕøತಿ ಜೀವಂತವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈಗಿನ ಮಕ್ಕಳು ಹಾಗೂ ಯುವಪೀಳಿಗೆ ಗರಡಿಮನೆಯ ಬದಲು ಇಂಟರನೆಟ್ ಸೆಂಟರ್‍ಗಳಲ್ಲಿ ಕಾಲಹರಣ ಮಾಡುತ್ತಿರುವುದು ಉತ್ತಮ ಬೆಳವಣ ಗೆಯಲ್ಲ ಎಂದರು.
ಅರ್ಬನ್ ಯುಥ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಹಿರಿಯ ಕ್ರೀಡಾಪಟು ರಾಮಚಂದ್ರ ಕೆ ಲಾಡ ಸಮಾವೇಶಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕುಸ್ತಿಯಲ್ಲಿ ಸಾಧನೆಗೈದ ಕೆಲ ಕುಸ್ತಿ ಕ್ರೀಡಾಪಟುಗಳ ಪಾಲಕರನ್ನು ಹಾಗೂ ಹಿರಿಯ ಕುಸ್ತಿಪಟುಗಳನ್ನು ಸನ್ಮಾನಿಸಲಾಯಿತು.
ಧಾರವಾಡ ಕಿಮ್ಸ್ ಸಹ ಪ್ರಾಧ್ಯಾಪಕ ಡಾ.ಎಂ.ಎಸ್.ಅಷ್ಟಗಿಮಠ ಮಾತನಾಡಿ ಕ್ರೀಡಾಪಟುಗಳ ಬೆಳವಣ ಗೆಗೆ ಹಾಗೂ ಸಾಮಥ್ರ್ಯ ಪ್ರದರ್ಶನಕ್ಕೆ ಅವಶ್ಯಕವಾದ ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ, ಮಾನಸಿಕ ಸದೃಡತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಧಾರವಾಡ ಕ್ರೀಡಾ ಪ್ರಾಧಿಕಾರ ಕುಸ್ತಿ ತರಬೇತುದಾರ ಬಿ. ಶಂಕರಪ್ಪಾ ಮಾತನಾಡಿ ಕುಸ್ತಿ ಕ್ರೀಡೆಯಲ್ಲಿ ಬದಲಾದ ನಿಯಮಾವಳಿ, ಕುಸ್ತಿ ಪಟುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳು, ಕುಸ್ತಿ ಪಟುವಾಗಿಸಲು ಪಾಲಕರು ಮಾಡಬೇಕಾದ ಕರ್ತವ್ಯ ಜವಾಬ್ದಾರಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಹಿರಿಯ ಮಾಜಿ ಕುಸ್ತಿ ಪಟು ಡೋಂಗ್ರ ವಾಲೇಕರ, ಯುಥ ಕ್ಲಬ್ ನಿದೇರ್ಶಕ ಅನಿಲ ಲಾಡ, ರಾಮು ಐತಾಳ, ಉದಯ ಜಾದವ, ಜಗದೀಶ ಉಪ್ಪಿನ, ಟಿ ಬಿ ಗೌಡಾ, ಎಮ್ ಎಸ್ ತೋರಸ್ಕರ, ಕೆ.ಎಸ್ ಜೋಶಿ, ಅಂತರಾಷ್ರ್ಟೀಯ ಮಟ್ಟದ ಕ್ರೀಡಾಪಟು ಮಮತಾ ಕೇಳೋಜೀ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಾಂತೇಶ ಓಶೀಮಠ ಹಾಗೂ ಕಾವ್ಯಾ ಓಶಿಮಠ ಕಾರ್ಯಕ್ರಮ ನಿರ್ವಹಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News, Karwar News Tagged With: ಅರ್ಬನ್ ಯುಥ್ ಕ್ಲಬ್ ಹಳಿಯಾಳ, ಉತ್ತರಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನ ಕಾರವಾರ, ಎಸಿಎಫ್‌‌‌ ಸಂತೋಷ‌‌ ಕೆಂಚಪ್ಪನವರ, ಒತ್ತಾಯದ ಪಠ್ಯಾಧಾರಿತ ಶೀಕ್ಷಣ, ಕುಸ್ತಿ ಕ್ರೀಡಾಪಟು, ಕ್ರೀಡೆಯಿಂದಲೂ ಉಜ್ವಲ ಭವಿಷ್ಯ ರೂಪಿಸಲು, ಜಂಟೀ ಆಶ್ರಯದಲ್ಲಿ ಆಯೋಜಿಸಿದ, ದೇಶ ಸೇವೆಯನ್ನು ಮಾಡಲು ಸಾಕಷ್ಟು ಅವಕಾಶವಿದೆ, ಪಾಲಕರು ನೀಡುವ, ಪ್ರತಿಭೆಗಳು ಕಮರಿ ಹೊಗುತ್ತಿವೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...