ಹಳಿಯಾಳ: ಮಕ್ಕಳು ದೇಶದ ಅತ್ಯಮೂಲ್ಯವಾದ ಸಂಪತ್ತು ಆಗಿದ್ದು, ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡುವಲ್ಲಿ ಅವರ ಅರೋಗ್ಯದ ವಿಷಯದಲ್ಲಿ ಹೆಚ್ಚಿನ ಮಹತ್ವ ಕೊಡಬೇಕೆಂದು ಹಳಿಯಾಳ ತಾಲೂಕಿನ ಸಾಂಬ್ರಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯ ಡಾ. ಅನಿಲಕುಮಾರ ನಾಯ್ಕ ಕರೆ ನೀಡಿದರು.
ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ ಹಳಿಯಾಳ ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ ಆರೋಗ್ಯವಂತ ಮಕ್ಕಳ ಸ್ಪರ್ಧೆ ಹಾಗೂ ಮಕ್ಕಳ ತಪಾಸಣೆ ಮತ್ತು ಚಿಕಿತ್ಸೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಇಂದಿನ ಔದ್ಯೋಗಿಕ ಜೀವನದಲ್ಲಿ ಪಾಲಕರು ಮಕ್ಕಳ ಆರೈಕೆಯಲ್ಲಿ ನಿಷ್ಕಾಳಜಿ ಮಾಡುತ್ತಿರುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಇದರಿಂದ ಮಕ್ಕಳಿಗೆ ತಂದೆ-ತಾಯಿ ಪ್ರೀತಿ ವಾತ್ಸಲ್ಯ ಸಿಗದೆ ಎಷ್ಟೋ ಮಕ್ಕಳ ಬೆಳವಣ ಗೆಯಲ್ಲಿ ಕುಂಠಿತವಾಗುತ್ತಿದೆ. ಮಕ್ಕಳಿಗೆ ಸರಿಯಾದ ಆರೈಕೆ ಮತ್ತು ಪೂಷಣೆ ನೀಡಬೇಕಾಗಿದ್ದು ತಂದೆ-ತಾಯಿಯವರ ಆಧ್ಯ ಕರ್ತವ್ಯ ನಂತರ ಅವರಿಗೆ ಬೆಳೆಯುವ ವಯಸ್ಸಿನಲ್ಲಿ ಲಸಿಕೆ ಮತ್ತು ಪೌಷ್ಠಿಕಾಂಶಗಳನ್ನು ಸರಿಯಾಗಿ ಕೊಡಬೇಕು ಎಂದು ಸಲಹೆ ನೀಡಿದರು.
ಶಿಶು ಮತ್ತು ಮಕ್ಕಳ ಅಭಿವೈದ್ಧಿ ಇಲಾಖೆಯ ಮೇಲ್ವೀಚಾರಕಿ ರಾಜೇಶ್ವರಿ ಗವಿಮಠ ಮಾತನಾಡಿ ಸಿಡಿಪಿಓ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮತ್ತು ಮಕ್ಕಳ ಪಾಲನೆ ಪೋಷನೆ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇಂದಿನ ಮಕ್ಕಳು ನಾಳಿನ ಬಾಳಿಗೆ ಆಶಾಕಿರಣ ಮತ್ತು ಮಕ್ಕಳ ಶ್ರೋಯೋಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕೆಂದು ತಿಳಿಸಿ, ಸಂಸ್ಥೆ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆದು ಮಾದರಿ ಗ್ರಾಮವನ್ನಾಗಿ ಮಾಡಲು ಸಹಕರಿಸಿ ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.
ಈ ಆರೋಗ್ಯವಂತ ಮಕ್ಕಳ ಸ್ಪರ್ಧೆಯನ್ನು ಒಂದು ತಿಂಗಳು ಮಗುವಿನಿಂದ 1 ವರ್ಷ ಹಾಗೂ ಒಂದು ವರ್ಷ ಮೇಲ್ಪಟ್ಟು ಮಗುವಿನಿಂದ ದಿಂದ 3 ವರ್ಷದೊಳಗಿನವರಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮದೇವಿ ಗ್ರಾಮಾಭಿವೃದ್ಧಿ ಸಮಿತಿ ದೊಡ್ಡಕೊಪ್ಪ ಅಧ್ಯಕ್ಷ ಮಹಾದೇವ ಪವಾರ, ಸಂಸ್ಥೆಯ ಯೋಜನಾಧಿಕಾರಿ ವಿನಾಯಕ ಚವ್ಹಾಣ, ಕ್ಷೇತ್ರ ಮೇಲ್ಚೀಚಾರಕ ಉಳವಯ್ಯಾ ಬೆಂಡಿಗೇರಿ, ಅಂಗನವಾಡಿ ಶಿಕ್ಷಕಿ ಚನ್ನಮ್ಮ ತೊರಲ್ಕೇರ, ಸಂತೋಷ ಪರಿಟ ಇದ್ದರು.
Leave a Comment