• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂಬಿಗ ಸಮಾಜದವರಿಗೆ ಹದಿನೆಂಟು ಹಳ್ಳಿಯ ಮುಖಂಡರು ಜಾತಿ ಬಹಿಷ್ಕಾರ,ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮನವಿ

November 21, 2018 by Gaju Gokarna Leave a Comment

watermarked hnr 18 ab Copy 1.

ಹೊನ್ನಾವರ
ತಾಲೂಕಿನ ಬಳ್ಕೂರು ಗ್ರಾಮದ ಅಂಬಿಗ ಸಮಾಜದವರಿಗೆ ಹದಿನೆಂಟು ಹಳ್ಳಿಯ ಮುಖಂಡರು ಜಾತಿ ಬಹಿಷ್ಕಾರ ಹಾಕಿದ್ದು ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಗಂಗಾಂಬಿಕಾ ಟ್ರಸ್ಟ್ ವತಿಯಿಂದ ಅಂಬಿಗ ಸಮಾಜದವರು ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದರು.

ಕುಮಟಾ ತಾಲೂಕಿನ ಗಂಗೆಕೊಳ್ಳದ ಅಂಬಿಗ ಸಮಾಜದ 18 ಹಳ್ಳಿ ಮುಖಂಡರು ಕಾನೂನು ವಿರುದ್ದವಾಗಿ ಹಾಕಿದ ಜಾತಿ ಬಹಿಷ್ಕಾರ ಪದ್ದತಿಯನ್ನು ರದ್ದುಗೊಳಿಸಬೇಕು. ಸಮಾಜ ಬಾಂಧವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಜಾತಿ ಬಹಿಷ್ಕಾರ ಹೇರಿ ಸಮಾಜದಲ್ಲಿ ಕಾನೂನು ವಿರುದ್ದ ವರ್ತಿಸುತ್ತಿರುವ 18 ಹಳ್ಳಿಯ 7 ಮುಖಂಡರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ದೀವಗಿಯ ಲಕ್ಷ್ಮಣ ಶುಕ್ರು ಅಂಬಿಗ, ಮೋಳ್ಕೋಡದ ನಾರಾಯಣ ನಾಗಪ್ಪ ಅಂಬಿಗ, ಗಂಗಾವಳಿಯ ಗಣಪತಿ ವೆಂಕಟ್ ಅಂಬಿಗ, ಕತಗಾಲದ ನಾರಾಯಣ ಹನ್ಮಂತ ಅಂಬಿಗ ಕತಗಾಲ, ಮಿರ್ಜಾನದ ರಾಮಚಂದ್ರ ನಾಗಪ್ಪ ಅಂಬಿಗ, ಧಾರೇಶ್ವರದ ಕೇಶವ ಈಶ್ವರ ಅಂಬಿಗ, ಅನಿಲಗೋಡದ ದೇವಪ್ಪ ಕನ್ಯಾ ಅಂಬಿಗ ಇವರಿಂದ ತೀವ್ರ ಶೋಷಣೆಗೆ ಒಳಪಟ್ಟಿದ್ದೇವೆ ಎಂದು ಬಳಕೂರಿನ ಅಂಬಿಗ ಸಮಾಜದವರು ತಹಸೀಲ್ದಾರರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲೂ ಅಂಬಿಗ ಸಮಾಜದವರು ಜಾತಿ ಬಹಿಷ್ಕಾರದ ಅನ್ಯಾಯವನ್ನು ್ಲ ಅನುಭವಿಸುತ್ತ ಬಂದಿದ್ದಾರೆ. ಇದೇ ರೀತಿಯಲ್ಲಿ ಬಳಕೂರು ಗ್ರಾಮದ ಅಂಬಿಗ ಸಮಾಜದವರಿಗೂ ಜಾತಿ ಬಹಿಷ್ಕಾರರ ಹಾಕಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಕೃಷಿ ಕೂಲಿ ಮಾಡಿಕೊಂಡು ಬಂದಿರುವ ಅಂಬಿಗ ಸಮಾಜವು ಅನಾದಿಕಾಲದಿಂದಲೂ ಗಂಗಾವಳಿಯ ಗಂಗಾಮಾತೆಯನ್ನು ಕುಲದೇವರನ್ನಾಗಿ ನಡೆದುಕೊಳ್ಳುತ್ತ ಬಂದಿದೆ. ಇದಕ್ಕೆ ಪೂರಕವಾಗಿ ಸಮಾಜದ ಆಗು-ಹೋಗುಗಳ ಬಗ್ಗೆ ಹಿಂದಿನಿಂದಲೂ ಜಿಲ್ಲಾ ಮಟ್ಟದ ಅಂಬಿಗ ಸಮಾಜದ ಸಮಸ್ಯೆಗಳ ಕುರಿತು 18 ಹಳ್ಳಿಯ ಮುಖಂಡರು ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ ಎಂದುಮನವಿಯಲ್ಲಿ ತಿಳಿಸಿದ್ದಾರೆ.
ಅಂಬಿಗ ಸಮಾಜವು ಶೈಕ್ಷಣ ಕವಾಗಿ ತುಂಬ ಹಿಂದುಳಿದಿದೆ. ಇದರ ಬಲ ಹೀನತೆಯನ್ನು ಉಪಯೋಗಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿರುವ 18 ಹಳ್ಳಿಯ ಮುಖಂಡರು ಕೆಲವು ವರ್ಷಗಳಿಂದ ತಮ್ಮ ಸ್ವಾರ್ಥಕ್ಕಾಗಿ ಅಂಬಿಗ ಸಮಾಜದವರಿಗೆ ಜಾತಿ ಬಹಿಷ್ಕಾರ ಮಾಡುತ್ತ ಬಂದಿದ್ದಾರೆ ಎಂದು ತಹಸೀಲ್ದಾರರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ನಾರಾಯಣ ಅಂಬಿಗ, ಗಂಗಾಧರ ಅಂಬಿಗ, ನಾಗರಾಜ ಅಂಬಿಗ, ಮಾರುತಿ ಅಂಬಿಗ, ಮಹೇಶ ಅಂಬಿಗ, ಧರ್ಮ ಅಂಬಿಗ, ದೇವಿ ಅಂಬಿಗ ಮತ್ತಿತರರು ಮನವಿ ಸಲ್ಲಿಸಿದರು. ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಉಪತಹಸೀಲ್ದಾರ ಸತೀಶ ಗೌಡ ಮನವಿ ಸ್ವೀಕರಿಸಿದರು.
ಫೋಟೋ ಇದೆ 18 ಹೆಚ್ ಎನ್ ಆರ್ 1ಎ: ಜಾತಿ ಬಹಿಷ್ಕಾರ ಹಾಕಿದವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಹೊನ್ನಾವರದಲ್ಲಿ ಬಳಕೂರಿನ ಅಂಬಿಗ ಸಮಾಜದವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಅಂಬಿಗ ಸಮಾಜದವರಿಗೆ, ಅವರ ವಿರುದ್ದ, ಆಗ್ರಹಿಸಿ ಮನವಿ, ಕ್ರಮ ತೆಗೆದುಕೊಳ್ಳಬೇಕು, ಹದಿನೆಂಟು ಹಳ್ಳಿಯ ಮುಖಂಡರು ಜಾತಿ ಬಹಿಷ್ಕಾರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...