ಹಳಿಯಾಳ:- ಹಳಿಯಾಳ ಲಯನ್ಸ್ ಕ್ಲಬ್ ನವರ ಆಶ್ರಯದಲ್ಲಿ ಪಟ್ಟಣದ ಧಾರವಾಡ ರಸ್ತೆಯಲ್ಲಿರುವ ಲಯನ್ಸ್ ಹೆಲ್ತಕೇರ್ ಸೆಂಟರ್ನಲ್ಲಿ 7 ದಿನಗಳ ಕಾಲ ನಡೆಯಲಿರುವ ಆಕ್ಯೂಪ್ರಶರ್ ಮತ್ತು ಸುಜೋಕ್ ತೆರೆಪಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಲಯನ್ಸ್ ಕ್ಲಬ್ನ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ. ಆರೋಗ್ಯದ ವಿಷಯದಲ್ಲಿ ಲಯನ್ಸ್ನವರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ ಎಲ್ಲ ತರಹದ ಆರೋಗ್ಯ ಶಿಭಿರಗಳನ್ನು ನಡೆಸುವ ಮೂಲಕ ಸಮಾಜ ಸೇವೆ ಮಾತ್ರವಲ್ಲದೇ ಜಾಗೃತಿಯನ್ನು ಮೂಡಿಸುತ್ತಿರುವುದು ಅಭಿನಂದನಾರ್ಹ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹಾಗೂ ಲಯನ್ಸ್ ಪದಾಧಿಕಾರಿ ಬಸವರಾಜ ಬೆಂಡಿಗೇರಿಮಠ ಮಾತನಾಡಿ ರಾಜಸ್ಥಾನದ ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ಅವರ ಆಕ್ಯೂಪ್ರಶರ್ ಟ್ರೇನಿಂಗ್, ಟ್ರೀಟಮೆಂಟ್ ಮತ್ತು ರೀಸರ್ಚ ಸೆಂಟರ್ ನ ಮೂವರು ನುರಿತ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕೆಂದರು.
ತಜ್ಞ ವೈದ್ಯ ಡಾ.ಮಹೇಶ ಎನ್ ಮಾತನಾಡಿ ಆಕ್ಯೂಪ್ರಶರ್ ಮತ್ತು ಸುಜೋಕ್ ತೆರೆಪಿ ಚಿಕಿತ್ಸೆ ಸಂಪೂರ್ಣ ಪ್ರಾಕೃತಿಕ ಚಿಕಿತ್ಸೆಯಾಗಿದ್ದು ಯಾವುದೇ ರೀತಿಯ ಸೈಡ್ ಎಫೆಕ್ಟ್ಗಳಿಲ್ಲ ಎಂದು ಚಿಕಿತ್ಸೆಯ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಆರ್.ಹಿರೆಮಠ, ಆರ್ ವೈ ಘಟಕಾಂಬಳೆ, ಜಿಡಿ ಗಂಗಾಧರ, ಮಂಜುನಾಥ, ಡಿಎಮ್ ಸಾವಂತ ಇತರರು ಇದ್ದರು.
Leave a Comment