ಹಳಿಯಾಳ : ತಾಲೂಕಿನ ತೇರಗಾಂವ ಹಾಗೂ ನಾಗಶೇಟ್ಟಿಕೊಪ್ಪ ಗ್ರಾಮಗಳಲ್ಲಿ ಶಿವಾಜಿ ಪುತ್ತಳಿ ನಿರ್ಮಿಸಲು ರಾಜ್ಯ ಸಚಿವ ಸಂಪೂಟದಲ್ಲಿ ಒಪ್ಪಿಗೆ ದೊರೆಯುತ್ತಿದ್ದು ಶೀಘ್ರದಲ್ಲಿ ಪುತ್ತಳಿ ನಿರ್ಮಾಣ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ ಹೇಳಿದ ರಲ್ಲದೇ ಯಾವುದೇ ಸಮಾಜದ ಪುತ್ತಳಿ ನಿರ್ಮಾಣಕ್ಕೆ ತಮ್ಮ ಬೆಂಬಲ ಸದಾ ಇರುವುದಾಗಿ ತಿಳಿಸಿದರು.
ತಮ್ಮ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಮರಾಠಾ ಮಿಸಲಾತಿ ನೀಡುವ ಕುರಿತು ಕರ್ನಾಟಕದಲ್ಲಿ ಏಕ ಮರಾಠಾ ಲಾಖ ಮರಾಠಾ ಹೋರಾಟದಡಿಯಲ್ಲಿ ಮರಾಠಾ ಸಮಾಜವನ್ನು 3ಬಿ ಇಂದ 2ಎ ವರ್ಗಕ್ಕೆ ಸೇರಿಸಲು ಆಗ್ರಹಿಸಲಾಗಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಶೇ16% ಮಿಸಲಾತಿ ಹಿಂದುಳಿದ ಮರಾಠರಿಗೆ ನೀಡಲು ನಿರ್ಧರಿಸಿದ್ದು ಅದೇ ರೀತಿ ಕರ್ನಾಟಕ ಸರ್ಕಾರ ಹಿಂದೂಳಿದ ಮರಾಠಾ ಜನಾಂಗಕ್ಕೆ ಮೀಸಲಾತಿ ನೀಡಬೇಕು. ಇಲ್ಲದಿದ್ದಲ್ಲಿ ತಮ್ಮ ಹೋರಾಟವನ್ನು ಮತ್ತೇ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಆಯೋಧ್ಯೆಯಲ್ಲಿ ರಾಮಮಂಧಿರ ನಿರ್ಮಾಣಕ್ಕೆ ನಮ್ಮ ದಾಗಲಿ ಕಾಂಗ್ರೇಸ ಪಕ್ಷದಾಗಲಿ ವಿರೋಧವಿಲ್ಲ. ಬಿಜೆಪಿ ಪಕ್ಷ ರಾಮಮಂಧಿರ ನಿರ್ಮಾಣ ವಿವಾದವನ್ನು ತನ್ನ ರಾಜಕಾರಣಕ್ಕೆ ಬಳಸಿಕೊಂಡು ಜಿವಂತವಾಗಿಡಲು ಪ್ರಯತ್ನಿಸುತ್ತಿದೆ. ಆದಕ್ಕಾಗಿ ಶೀಘ್ರದಲ್ಲಿ ರಾಮಮಂಧಿರ ನಿರ್ಮಿಸಿ ಈ ಪ್ರಕರಣಕ್ಕೆ ಇತೀ ಶ್ರೀ ಹಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಲ್ ಎಸ್ ಅರಶಿಣಗೇರಿ, ಬಿ ಡಿ ಚೌಗುಲೆ, ಕೃಷ್ಣಾ ಶಹಾಪುರಕರ, ಅಪ್ಪಾರಾವ ಪೂಜಾರಿ, ಮಂಗಲಾ ಕಶೀಲಕರ, ಅಶೋಕ ಘೋಟ್ನೇಕರ, ಇನ್ನಿತರರು ಉಪಸ್ಥೀತರಿದ್ದರು.
Leave a Comment