ಹಳಿಯಾಳ : ಪಟ್ಟಣದ ಯಲ್ಲಾಪೂರ ನಾಕಾದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ ಪುಥ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅಂಬೇಡ್ಕರ ಅವರ 63ನೇಯ ಮಹಾಪರಿನಿರ್ವಾಣ ದಿನವನ್ನು ಹಳಿಯಾಳ ಬಿಜೆಪಿ ಘಟಕದವರು ಅಚರಿಸಿದರು.
ಮಾಜಿ ಶಾಸಕ ಸುನೀಲ್ ಹೆಗಡೆ, ಹಿರಿಯ ಮುಖಂಡ ಮಂಗೇಶ ದೇಶಪಾಂಡೆ, ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ, ಮುಖಂಡರಾದ ಅನಿಲ ಮುತ್ನಾಳ್, ಹನುಮಂತ, ಯಲ್ಲಪ್ಪಾ ಹೊನ್ನೊಜಿ, ಅಪ್ಪು ಚರಂತಿಮಠ ಮೊದಲಾದವರು ಇದ್ದರು.
Leave a Comment