ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ಮುಂದಾಳತ್ವದಲ್ಲಿ ಹಳಿಯಾಳದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಎಂದು ಹಳಿಯಾಳ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಮ್ಸಿ) ಸಮೀತಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ ಹೇಳಿದರು.
2017-18 ನೇ ಸಾಲಿನ ಆರ್.ಐ.ಡಿ.ಎಫ್.-23 ಯೋಜನೆಯಡಿ ಹಳಿಯಾಳದ ಎಪಿಎಮ್ಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 1 ಕೋಟಿ ರೂ. ಮೊತ್ತದ ಸಿಮೆಂಟ್ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಪಿಎಮ್ಸಿ ಸದಸ್ಯರಾದ ಸುರೇಶ ಶೀವಣ್ಣವರ, ರತ್ನಾಕರ, ಸಂತೋಷ ಮಿರಾಶಿ, ಶೋಭಾ ರಾವಳ ಮೊದಲಾವರು ಇದ್ದರು.
Leave a Comment