ಹಳಿಯಾಳ:- ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣ ಸಬೇಕು ಜೊತೆಗೆ ಪಿಂಚಣ ಸಹಿತ ಎಲ್ಲ ಸವಲತ್ತುಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಹಳಿಯಾಳ ಸಾರಿಗೆ ಸಂಸ್ಥೆ ನೌಕರರು ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಅವರನ್ನು ಭೇಟಿಯಾದ ಸಾರಿಗೆ ಇಲಾಖೆ ನೌಕರರ ನಿಯೋಗ ಮನವಿ ಸಲ್ಲಿಸಿದರು.
ಸಾರಿಗೆ ನಿಗಮದ ನೌಕರರು, ಚಾಲಕರು, ನಿರ್ವಾಹಕರು ಸಾರಿಗೆ ನೌಕರರಾಗಿದ್ದರೂ ಸರ್ಕಾರದ ಇತರ ಇಲಾಖೆಗಳ ಚಾಲಕರಿಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರಲ್ಲದೇ ಸರ್ಕಾರದ ಹಲವು ಸೌಲತ್ತುಗಳು ಮರಿಚಿಕೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಗಮದ ಚಾಲಕರು ರಾತ್ರಿ ಪಾಳಿಯಲ್ಲೂ ಕರ್ತವ್ಯ ನಿರ್ವಹಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ತಂಗುವಾಗ ಸೊಳ್ಳೆಗಳ ಕಾಟದ ಮಧ್ಯೆ ಬಸನಲ್ಲೇ ಮಲಗಬೇಕು. ಆದರೇ ವೇತನದಲ್ಲಿ ಮಾತ್ರ ತಾರತಮ್ಯ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೀಸಿದ್ದು ಈ ವಿಷಯದ ಕುರಿತು ಅಧಿವೇಶನದಲ್ಲಿ ಚರ್ಚಿಸಿ ಮೈತ್ರಿ ಸರ್ಕಾರದ ಗಮನ ಸೆಳೆದು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವಾಗ ಪಿಎಮ್ ಅಗಸಿಮನಿ, ಕದಂ, ಜಿಎಮ್ ಹನುಮಂತ, ಕದರಳ್ಳಿ, ತಿರಕಪ್ಪನವರ, ಸಂತೋಷ, ಮಹದೇವ ಮಿಶಾಳಿ, ಪಿಎನ್ ಚಳಗಿ, ಸಿಎಚ್ ಯಳವಾರ, ಎಮ್ಡಿ ಹಂಚನಾಳ, ಉಜ್ಜಿನಪ್ಪ ಇತರರು ಇದ್ದರು.
Leave a Comment