• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಂತಹ ಯೋಜನೆಗಳು ಜನರಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ದರಾಗಿಸುವ ಜೊತೆಗೆ ಬದುಕುವ ಕಲೆಯನ್ನು ರೂಪಿಸಿಕೊಟ್ಟಿದೆ;ಕೃಷ್ಣಮೂರ್ತಿ ಭಟ್ ಶಿವಾನಿ

December 18, 2018 by Gaju Gokarna Leave a Comment

watermarked 18 hnr ds.

ಹೊನ್ನಾವರ: “ಮನುಷ್ಯನಾದವನು ದ್ವೇಶಿಸುವ ಗುಣವನ್ನು ಹೊಂದಬಾರದು ಸ್ವಾರ್ಥ ಬಿಟ್ಟು ಪ್ರೀತಿಸುವ ಗುಣವನ್ನು ಹೊಂದಬೇಕು ಈಮೂಲಕ ಸಮಾಜ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಂತಹ ಯೋಜನೆಗಳು ಜನರಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ದರಾಗಿಸುವ ಜೊತೆಗೆ ಬದುಕುವ ಕಲೆಯನ್ನು ರೂಪಿಸಿಕೊಟ್ಟಿದೆ” ಎಂದು ಕೃಷ್ಣಮೂರ್ತಿ ಭಟ್ ಶಿವಾನಿ ಅಭಿಪ್ರಾಯಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ-ಭಟ್ಕಳ,ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಭಂದು ಸ್ವಸಹಾಯ ಸಂಘಗಳ ಒಕ್ಕುಟ ಖರ್ವಾ,ಕೊಳಗದ್ದೆ ಇವರ ಆಶ್ರಯದಲ್ಲಿ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ಶ್ರೀ ಸಿದ್ದಿವಿನಾಯಕ ದೇವಾಲಯದ ಸಭಾಭವನದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಅವರು ಮಾತನಾಡುತ್ತಿದ್ದರು.
ಮನಸ್ಸು ದುರ್ಬಲವಾಗಿದ್ದಾಗ ಸನ್ನಿವೇಶಗಳು ಸಮಸ್ಯೆಯಾಗುತ್ತದೆ,ಸಮತೋಲನದಲ್ಲಿದ್ದಾಗ ಸನ್ನಿವೇಶಗಳು ಸವಾಲಾಗುತ್ತದೆ. ಪ್ರಭಲವಾದಾಗ ಯಾವ ಕೆಲಸದಿಂದಲು ಹಿಂದಿರುಗುವ ಪ್ರಮೇಯವೇ ಎದುರಾಗುವುದಿಲ್ಲ.ನಮ್ಮ ಹ್ರದಯದಲ್ಲಿ ಪ್ರೀತಿ ತುಂಬಿದ್ದಾಗ ವೈರಿಗಳು ನಮ್ಮನ್ನು ಪ್ರೀತಿಸುತ್ತಾರೆ. ಎಲ್ಲರನ್ನು ಗೌರವಿಸಿ,ಪ್ರೀತಿಸಿದಾಗ ನಮ್ಮನ್ನು ಗೌರವಿಸುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಂತಹ ಸಂಗಟನೆಗಳಿಂದ ಜನರಲ್ಲಿ ಸಂಸ್ಕ್ರತಿ,ಸಂಸ್ಕಾರವನ್ನು ಕಲಿಸುತ್ತದೆ ಎಂದು ಸಂಘಟನೆ ಕಾರ್ಯವೈಖÀರಿ ಕುರಿತು ಹರ್ಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊನ್ನಾವರ-ಭಟ್ಕಳ ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಎಮ್.ಎಸ್ ಈಶ್ವರ್ ಮಾತನಾಡಿ ಹೊನ್ನಾವರ-ಭಟ್ಕಳ ವಿಭಾಗದಿಂದ ಇದುವರೆಗೆ 3500 ಸಂಘಟನೆ ರಚನೆಯಾಗಿ 19ಕೋಟಿ ಉಳಿತಾಯವಾಗಿದ್ದು 670 ಕೋಟಿ ಪ್ರಗತಿ ನಿಧಿಯನ್ನು ಹೊನ್ನಾವರ-ಭಟ್ಕಳ ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ಅಭಿವ್ರದ್ದಿ ಕೆಲಸಗಳಿಗೆ ವಿತರಿಸಲಾಗಿದೆ ಎಂದರು.ರಾಜ್ಯದ 30 ಜಿಲ್ಲೆಗಳಲ್ಲು ಯೋಜನೆ ವಿಸ್ತರಣೆಯಾಗಿದ್ದು ಮುಂದಿನ ದಿನಗಳಲ್ಲಿ ಅಂತರಾಜ್ಯಗಳಲ್ಲು ವಿಸ್ತರಣೆಯಾಗುವ ಹಂತದಲ್ಲಿದೆ ಎಂದು ತಿಳಿಸಿದರು.
ಇನ್ನೊರ್ವ ಮುಖ್ಯ ಅತಿತಿಯಾಗಿ ಆಗಮಿಸಿದ ಹೊನ್ನಾವರ ಎಸ್.ಡಿ.ಎಮ್ ಪದವಿ ಕಾಲೇಜಿನ ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಮಾತನಾಡಿ, ಬದುಕು ಬಹಳ ಸುಲುಭವಾಗಿದ್ದು ನಾವು ಅದನ್ನು ಸಂಕಿರ್ಣ ಮಾಡಿಕೊಳ್ಳುತ್ತಿದ್ದೆವೆ.ಇಂದಿನ ಕೆಲವು ಧಾರವಾಹಿಗಳು ಸಂಸಾರವನ್ನು ಹಾಳುಗೆಡವುತ್ತಿದೆ.ಅಶ್ಲಿಲತೆಯನ್ನು, ಅನೈತಿಕ ಸಂಭಂದಗಳು,ವಿಚ್ಚೆದನಗಳನ್ನು ವಿಡಂಬನಾತ್ಮಕವಾಗಿ ಬಿಂಬಿಸಿ ಕುಟುಂಬಗಳ ಮೇಲೆ ಪರಿಣಾಮ ಬೀರುವತ್ತ ಸಾಗಿದೆ. ಹೆಣ್ಣನ್ನು ಗೌರವಿಸಿ,ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ. ಮಾತ್ರಶ್ರೀ ಹೇಮಾವತಿ ಹಾಗೂ ಪರಮಪೂಜ್ಯ ವಿರೇಂದ್ರಹೆಗ್ಗಡೆ ದಂಪತಿಗಳಿಂದ ಧರ್ಮಸ್ಥಳದ ಹೆಸರಿನಲ್ಲಿ ಗ್ರಾಮಾಭಿವ್ರದ್ದಿ ಯೋಜನೆ ನಡೆಸಿರುವುದು ಅತ್ಯಂತ ಶ್ಲಾಘನೀಯವಾದದು. ಅರ್ಥಪೂರ್ಣವಾದ ರೀತಿಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳು ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪೂಜಾ ಸಮಿತಿಯ ಅದ್ಯಕ್ಷ ಈಶ್ವರ್ ಎಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀಸಿದ್ದಿವಿನಾಯಕ ದೇವಾಲಯದ ಮೊಕ್ತೆಸರ ಅಣ್ಣಯ್ಯ ಹೆಗಡೆ, ಸಂಜೀವ ಆಚಾರಿ, ಖರ್ವಾ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಗೌಡ ಉಪಸ್ಥಿತರಿದ್ದರು. ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸದೇ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ವೇದಿಕೆಯನ್ನು ಶೃÀ್ರಂಗರಿಸಿದ್ದು ಎಲ್ಲರ ಗಮನ ಸೆಳೆಯಿತು. ಸಭಾ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಿತು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಆಶ್ರಯ, ಉತ್ತಮ ಸಮಾಜ ನಿರ್ಮಾಣ, ಕೃಷ್ಣಮೂರ್ತಿ ಭಟ್ ಶಿವಾನಿ, ಕೊಳಗದ್ದೆ, ಖರ್ವಾ, ಗುಣವನ್ನು, ಜನರಿಗೆ, ಬದುಕುವ ಕಲೆಯನ್ನು ರೂಪಿಸಿಕೊಟ್ಟಿದೆ, ಬದ್ದರಾಗಿಸುವ ಜೊತೆಗೆ, ಮನುಷ್ಯನಾದವನು ದ್ವೇಶಿಸುವ, ಯೋಜನೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ, ಹೊಂದಬಾರದು ಸ್ವಾರ್ಥ ಬಿಟ್ಟು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...