ಹಳಿಯಾಳ :- ಹಳಿಯಾಳದ ‘ಹಳೆಯ ಚಿತ್ರ-ಸಂಗೀತ ಪ್ರೆಮಿಗಳ ಸಂಘ’ (ಹಚಿಸಂಪ್ರೇಸಂ) ರವರಿಂದ ಡಿಸೆಂಬರ್ 29 ರಂದು ಭವ್ಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಶ್ರೀದುರ್ಗಾದೇವಿ ಕಲಾಭವನ ರಂಗಮಂಚದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಾಧ್ಯಕ್ಷ ಬಿ.ಆರ್.ವಿಭೂತೆ ತಿಳಿಸಿದ್ದಾರೆ.
2000 ಇಸವಿಯಲ್ಲಿ ಸ್ಥಾಪಿಸಲಾದ ಸಂಘದಿಂದ ಪ್ರತಿ ವರ್ಷ ರಫೀರವರನ್ನು ನೆನಪಿಸಲಾಗುತ್ತಿದ್ದು ಈ ವರ್ಷ ರಫೀಯೊಂದಿಗೆ ನಮ್ಮನ್ನು ಅಗಲಿದ ಮಹಾನ್ ಗಾಯಕರಾದ ಕಿಶೋರಕುಮಾರ, ಮುಕೇಶ, ಮನ್ನಾಡೆ, ತಲತ ಮೆಹಮೂದ್, ಹೇಮಂತ ಕುಮಾರ, ಮಹೇಂದ್ರ ಕಫುರ ಹಾಗೂ ಗೀತಾ ದತ್ ಮುಂತಾದವರನ್ನು ಅವರು ಹಾಡಿದ ಗೀತೆಗಳನ್ನು ಸಾದರ ಪಡಿಸಿ ಶೃದ್ದಾಂಜಲಿ ಸಲ್ಲಿಸಲಾಗುವುದು ವಿಶೇಷ ಎಂಧು ಅವರು ವಿವರಿಸಿದ್ದಾರೆ.
ಸಂಘದ ಹವ್ಯಸಿ ಗಾಯಕ ಡಾ.ಸಿಎಸ್.ಓಶೀಮಠ, ಡಾ. ಎಚ್.ಎ.ಇಳಕಲ್, ಅರುಣ ಗೋಂಧಳೆ, ರವಿ ನಯ್ಯರ್, ಶೌಕತ ಅಲಿ ರೋಣ, ಅನಿಲ ಭದ್ರಿ, ರಾಜು ಮುಳೆ, ರಾಧಾ ಪೂಜಾರ, ರೂಪಾಲಿ, ಪ್ರೇಮಾ ಸಿದ್ದಿ, ಗೀತಾ ಬೋಗರಮ್ ಹಾಗು ಶರ್ಮಿಳಾ ಮನಕವಾಡ ಗೀತೆಗಳನ್ನು ಸಾದರಪಡಿಸಲಿದ್ದಾರೆ. ಖ್ಯಾತ ಕಿ-ಬೋರ್ಡ ವಾದಕ ಅನಿಲ ಜೋಶಿ ಹಾಗು ಸಂಗಡಿಗರಿಂದ ಹಿನ್ನೆಲೆ ಸಂಗೀತ ನೀಡಲಾಗುತ್ತಿದೆ. ನಿರೂಪಣೆ ಸಂಘದ ಕಾರ್ಯಾಧ್ಯಕ್ಷ ಬಿ.ಅರ್.ವಿಭೂತೆ ಹಾಗÀು ಯಲ್ಲಾಪುರದ ಹವ್ಯಾಸಿ ಕಲಾವಿದ ಇಬ್ರಾಹಿಂ ಶೇಖ ಮಾಡಲಿದ್ದಾರೆ.
ಕಾರ್ಯಕ್ರಮ ಇಲ್ಲಿಯ ಶ್ರೀದುರ್ಗಾದೇವಿ ಕಲಾಭವನದ ರಂಗಮಂಚದಲ್ಲಿ ನಡೆಯುತ್ತಿದ್ದು ಕಂದಾಯ ಹಾಗು ಕೌಶಲ್ಯಾಭಿವೃದ್ದಿ ಸಚಿವರಾದ ಆರ್.ವಿ.ದೇಶಪಾಂಡೆ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಎಂಎಲ್ಸಿ ಎಸ್.ಎಲ್.ಘೋಟ್ನೆಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಿಪ್ಪಾಣ ಯ ಖ್ಯಾತ ವ್ಯಾಪರಿ ಹಾಗು ಸಮಾಜ ಸೇವಕ ಪ್ರವೀಣ ಶಾ ಹಾಗು ನಿವೃತ್ತ ಆರ್.ಬಿಐ ಅಧಿಕಾರಿ ವಿಜಯ ನಾಫಡೆ, ದಾಂಡೇಲಿ ಕಾಗದ ಕಾರ್ಖಾನೆಯ ಹಿರಿಯ ಉಪ-ಪ್ರಧಾನ ಅಧಿಕಾರಿ ಗಿರಿರಾಜ ಆಗಮಿಸಲಿದ್ದಾರೆ. ಈ ಅಪರೂಪದ ಕಾರ್ಯಕ್ರ್ರಮಕ್ಕೆ ಯಾವದೇ ರೀತಿಯ ಪ್ರವೇಶ ದರ ಇಲ್ಲ. ಆದ್ದರಿಂದ ಹಳೆಯ ಸಂಗೀತ ಗೀತೆಗಳ ಪ್ರೇಮಿಗಳು ಕಾರ್ಯಕ್ರಮಕ್ಕೆ ಅವಶ್ಯ ಆಗಮಿಸಬೇಕಾಗಿ ಸಂಘಟಕರು ಕೋರಿದ್ದಾರೆ.
Leave a Comment