ಹಳಿಯಾಳ :- ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸರ್ಕಾರ ರಚನೆಯಾದಾಗ ಮರಾಠಾ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಈವರೆಗೆ ಸಿಕ್ಕಿಲ್ಲ ಎಂದು ಹಳಿಯಾಳ ಮರಾಠಾ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೇರವಣ ಗೆ ನಡೆಸಿ ಮರಾಠಾ ಸಮುದಾಯದ ಜನಪ್ರತಿನಿಧಿಯಾದ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಲಿಖಿತ ಮನವಿಯ ಮೂಲಕ ಆಗ್ರಹಿಸಿದ್ದಾರೆ.
ಪ್ರತಿಭಟನಾ ಮೆರವಣ ಗೆ-ಮನವಿ ಸಲ್ಲಿಕೆ:– ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ನೇತೃತ್ವದಲ್ಲಿ ಪಟ್ಟಣದ ಮರಾಠಾ ಭವನದಿಂದ ಮರಾಠಾ ಸಮುದಾಯದವರು ಪ್ರತಿಭಟನಾ ಮೇರವಣ ಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೇರವಣ ಗೆ ನಡೆಸಿ ಇಲ್ಲಿಯ ಶಿವಾಜಿ ವೃತ್ತಕ್ಕೆ ಆಗಮಿಸಿ ಅಶ್ವಾರೂಢ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಿನಿ ವಿಧಾನ ಸೌಧದ ಆವರಣದಲ್ಲಿ ಧರಣ ನಡೆಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು.
ರಾಜಕೀಯವಾಗಿ ನಿರ್ಲಕ್ಷ್ಯ:- ಮನವಿಯಲ್ಲಿ ರಾಜ್ಯದಲ್ಲಿ 45 ಲಕ್ಷ ಮರಾಠಾ ಸಮುದಾಯದವರಿದ್ದಾರೆ ಅಲ್ಲದೇ ವಿಶೇಷವಾಗಿ ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಶೇ.75 ರಷ್ಟು ಮರಾಠರಿದ್ದರೂ ರಾಜಕೀಯವಾಗಿ ನಿರ್ಲಕ್ಷಿಸಲ್ಪಟ್ಟಿದ್ದಾರೆ. ರಾಜ್ಯದಲ್ಲಿ ಅನೇಕ ಸರ್ಕಾರಗಳು ರಚನೆಯಾದ ಸಂದರ್ಭದಲ್ಲಿ ಕೂಡ ಮರಾಠಾ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಘೊಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ:-
ಸಚಿವ ಆರ್.ವಿ.ದೇಶಪಾಂಡೆ ಅವರು ಹಳಿಯಾಳ ಕ್ಷೇತ್ರದಿಂದ 8 ಬಾರಿ ಆಯ್ಕೆಯಾಗುವಲ್ಲಿ ಸಿಂಹಪಾಲು ಮರಾಠಾ ಸಮುದಾಯದ ಪಾತ್ರ ಬಹುದೊಡ್ಡದಿದೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ದೇಶಪಾಂಡೆ ಅವರ ಬೆನ್ನೆಲುಬಾಗಿ ನಿಂತಿದ್ದು ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ಕ್ಷೀಪ್ರಗತಿಯಲ್ಲಿ ನಡೆಯಲು ಕಾರಣ ಭೂತರಾಗಿದ್ದಾರೆ. ಎಲ್ಲ ರಂಗಗಳಲ್ಲಿಯೂ ಅತಿ ಹಿಂದೂಳಿದ ರೈತಾಪಿ ಸಮಾಜವಾಗಿರುವ ಮರಾಠಾ ಸಮಾಜದ ಏಳ್ಗೆಗಾಗಿ ಸರ್ಕಾರದಲ್ಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲೇಬೇಕು ಎಂದು ಒತ್ತಾಯಿಸಿರುವ ಪ್ರತಿಭಟನಾಕಾರರು ಘೋಟ್ನೇಕರ ಅವರಿಗೆ ಸರ್ಕರದ ಯಾವುದೇ ನಿಗಮ ಅಥವಾ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ಮರಾಠಾ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಅವರಲ್ಲಿ ಮನವಿಯ ಮೂಲಕ ಆಗ್ರಹಿಸಲಾಗಿದೆ.
ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ಉಪಾಧ್ಯಕ್ಷೆ ಮಂಗಲಾ ಕಶೀಲಕರಮ, ಬಿಪಿ ಶಹಾಪೂರಕರ, ಪ್ರಮುಖರಾದ ಎಲ್.ಎಸ್.ಅರಿಶೀನಗೇರಿ, ಅಪ್ಪಾರಾವ ಪೂಜಾರಿ, ಯಲ್ಲಪ್ಪಾ ಮಾಲವನಕರ, ಗಣಪತಿ ಬೆಕಣ , ತುಕಾರಾಮ ಗೌಡಾ, ಮಂಜುನಾಥ ಅಳ್ನಾವರಕರ, ಅನಿಲ ಚವ್ವಾಣ, ಎಮ್.ವಿ.ಘಾಡಿ, ಸುಂದರ ಕಾನಕತ್ರಿ, ಸಂತೋಷ ಮಿರಾಶಿ, ಜೀವಪ್ಪ ಭಂಡಾರಿ, ಗೊಕುಳ ಶಿರೋಡಕರ, ಅಶೋಕ ಘೋಟ್ನೇಕರ ಮೊದಲಾವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅನುಪಸ್ಥಿತಿ :– ಇನ್ನೂ ಪ್ರಮುಖವಾಗಿ ಪ್ರತಿಭಟನೆಯಲ್ಲಿ ಮರಾಠಾ ಸಮುದಾಯದವರಾದ ಕಾಂಗ್ರೇಸ್ ಪಕ್ಷದಲ್ಲಿ ಜನಪ್ರತಿನಿಧಿ ಹಾಗೂ ಮುಖಂಡರಾಗಿರುವ ಅನೇಕ ಪ್ರಮುಖರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
Leave a Comment