• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಿದ್ಧಗಂಗಾ ಶ್ರೀಗಳದೇಹತ್ಯಾಗದಿಂದ ಯುಗಾಂತ್ಯ: ಕಂದಾಯಸಚಿವದೇಶಪಾಂಡೆಅಶ್ರುತರ್ಪಣ

January 21, 2019 by Yogaraj SK Leave a Comment

ಹಳಿಯಾಳ:- “ನಡೆದಾಡುವ ದೇವರು” ಎಂದೇ ಹೆಸರಾಗಿದ್ದಶತಾಯುಷಿ, ತ್ರಿವಿಧದಾಸೋಹಿ, ಆಧುನಿಕ ಜಗತ್ತಿನ ಶ್ರೇಷ್ಟ ಸಂತ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ದೇಹತ್ಯಾಗದಿಂದ ಜ್ಞಾನ, ಸೇವೆ ಮತ್ತು ದಾಸೋಹಗಳ ಯುಗವೊಂದು ಅಂತ್ಯಗೊಂಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.
ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿರುವುದಕ್ಕೆ ತೀವ್ರ ಶೋಕವ್ಯಕ್ತಪಡಿ, “ತುತ್ತು ಅನ್ನದ ಹಿಂದೆ ಇರುವ ಸಾವಿರಾರು ಮಂದಿಯ ಶ್ರಮದ ನಿಜ ಅರ್ಥವನ್ನು ಸಮಸ್ತ ಭಕ್ತಸಮೂಹ, ಅಭಿಮಾನಿ ಬಳಗ ಹಾಗೂವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿಜವಾದ ನೆಲೆಯಲ್ಲಿ ಬಿತ್ತಿದ ಈ ಮಹಾನ್ಚೇತನ” ಸಮಾಜದಲ್ಲಿನ ಸಕಲರನ್ನೂ ಸಮಾನವಾಗಿ ಕಾಣುತ್ತಿದ್ದರಲ್ಲದೆ,ದೀನ ದಲಿತರಿಗೆ ಆತ್ಮ ಶಕ್ತಿ ತುಂಬುವ ಮೂಲಕ ಅವರೆಲ್ಲರ ಸಮಗ್ರ ಸಬಲೀಕರಣಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡಿದ್ದರು.
ಜ್ಞಾನ, ಆಶ್ರಯ ಮತ್ತು ಅನ್ನದಾಸೋಹದ ನಿಜವಾದ ಅರ್ಥದ ಕ್ರಾಂತಿ ಪುರುಷರಾಗಿದ್ದ ಶ್ರೀಯುತರು ಬಡತನದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಂಥವರನ್ನು ಶ್ರೀಮಠಕ್ಕೆ ಕರೆತಂದು, ಅವರನ್ನುಸಕಲವಿಧಗಳಲ್ಲೂಪೋಷಿಸುತ್ತಿದ್ದರು.
ಅವರಂತಹ ಮಹಾನ್ಮಾನವತಾವಾದಿಯ ಮಾರ್ಗದರ್ಶನ ಇಷ್ಟು ದೀರ್ಘ ಕಾಲ ನಮ್ಮೆಲ್ಲರಿಗೂ ಸಿಕ್ಕಿದ್ದು ಸಮಾಜದ ಸುದೈವ. ದಶಕಗಳ ಹಿಂದೆಯೇ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ-ಕಾಲೇಜುಗಳನ್ನು ತೆರೆಯುವ ಮೂಲಕ ಅವರು ಸಮಾಜದ ಉನ್ನತಿಗೆ ಅಸ್ತಿ ಭಾರ ಹಾಕಿದರು. ಶ್ರೀಗಳ ದೂರದರ್ಶಿತ್ವದಫಲವನ್ನುಇಂದು ದೇಶ-ವಿದೇಶಗಳಲ್ಲೆಲ್ಲ ಕಾಣಬಹುದಾಗಿದೆ,’’ ಎಂದುದೇಶಪಾಂಡೆ ಶ್ರೀಗಳನ್ನು ನೆನಪಿಸಿಕೊಂಡಿದ್ದಾರೆ.
“ಶ್ರೀಗಳುತನು-ಮನಪೂರ್ವಕವಾದ, ಅಂತಃಕರಣದ ಆರ್ದ್ರತೆಯಿಂದ ಪ್ರೇರಣೆ ಪಡೆದಂತಹ ಸೇವೆಗೆ ಮಾದರಿಯಾಗಿದ್ದರು. ಅವರಿಂದಾಗಿ ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆ ಸಾಧ್ಯವಾಯಿತು. ಇದರ ಜತೆಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪುನರುತ್ಥಾನ ಸಾಧ್ಯವಾಯಿತು. ಇದಕ್ಕಾಗಿ ಇಡೀ ನಾಡು ಅವರಿಗೆ ಚಿರಋಣಿಯಾಗಿರಲಿದೆ.
ಶ್ರೀಯುತರು ಶಿವೈಕ್ಯರಾಗಿರುವುದರಿಂದ ಅಪಾರಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದ್ದು ಸಮಾಜದ ಪ್ರತಿಯೊಬ್ಬರೂ ಅನಾಥಭಾವವನ್ನು ಅನುಭವಿಸುತ್ತಿದ್ದಾರೆ,’’ ಎಂದು ಸಚಿವರು ಶೋಕಿಸಿದ್ದಾರೆ.
“ಪರಮಾತ್ಮನು ಶ್ರೀಗಳ ಆತ್ಮಕ್ಕೆ ಶಾಂತಿಯನ್ನು ನೀಡಲಿ ಮತ್ತು ಶ್ರೀಗಳ ಅಪಾರ ಭಕ್ತವೃಂದಕ್ಕೆ ಅವರ ದೇಹತ್ಯಾಗದ ನೋವನ್ನು ಭರಿಸಿಕೊಳ್ಳುವ ಶಕ್ತಿಯನ್ನುನೀಡಲಿ ಮತ್ತು ಅವರ ಮಹಾನ್ಚೇತನ ನಮ್ಮೆಲ್ಲಗೂ ಸದಾ ದಾರಿದೀಪವಾಗಿರಲೆಂದು ಪ್ರಾರ್ಥಿಸುತ್ತೇನೆ’’ ಎಂದು ದೇಶಪಾಂಡೆ ಕೋರಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Canara News Tagged With: Siddhagangashri, the charity, the death of the deceased, the God of walking ", the revenue minister, the saint, the trio of the modern world

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar