ಹಳಿಯಾಳ :- ಬಡವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಹಾಗೂ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸುವ ಸೇರಿದಂತೆ ಅನೇಕ ವಿವಿಧ ಬಡವರ ಪರ ಉತ್ತಮ ಯೋಜನೆಗಳನ್ನು ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ತಾಲೂಕಿನ ತೆರಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಆಯ್ಕೆಯಾದ ಪಾಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್, ಸ್ಟೋವ್ ವನ್ನು ಸಾಂಕೇತಿಕವಾಗಿ ವಿತರಣೆ ಮಾಡಿ ಸಚಿವರು ಮಾತನಾಡಿದರು.
ಮೋದಿಜಿಯವರು ದೇಶದಲ್ಲಿ ಮಹಿಳೆಯರು ಅಡುಗೆ ಮನೆಯಲ್ಲಿ
ಕಣ್ಣಿರು ಹಾಕಬಾರದು ಅವರಿಗೆ ಅನುಕೂಲವಾಗಬೇಕೆಂದ ಸದುದ್ದೇಶದಿಂದ ಕೊಟ್ಯಂತರ ಜನರಿಗೆ ಉಚಿತ ಗ್ಯಾಸ ಸಿಲಿಂಡರ್ ಅವರ ಮನೆಗಳಿಗೆ ತಲುಪಿಸುವ ಪಾರದರ್ಶಕ ಕಾರ್ಯ ಮಾಡಲಾಗುತ್ತಿದೆ.
ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ 30ಸಾವಿರ ಗ್ಯಾಸ ಸಿಲಿಂಡರ್ ಫಲಾನುಭವಿಗಳ ಮನೆಗೆ ತಲುಪಿಸಲಾಗಿದೆ. ಉಳಿದ ಫಲಾನುಭವಿಗಳಿಗೂ ಹಂತ ಹಂತವಾಗಿ ಯೋಜನೆಯ ಲಾಭ ದೊರೆಯಲಿದೆ ಎಂದು ಭರವಸೆ ನೀಡಿದರು.
ಇನ್ನೂ ಆಯುಷ್ಮಾನ್ ಭಾರತದಂತಹ ಯೋಜನೆ ಯಲ್ಲಿ ಬಿಪಿಎಲ್ ಕಾರ್ಡ ಹೊಂದಿದವರಿಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ ಹೊಂದಿದವರಿಗೆ ೫ ಲಕ್ಷದ ವರೆಗೆ ಮಿತಿ ಇದ್ದು ಇಂತಹ ಯೋಜನೆ ಜಗತ್ತಿನಲ್ಲೆ ಮೊದಲು ಅದು ಮೊದಿ ಅವರಿಂದ ಜಾರಿ ಆಗಿರುವುದು ದೇಶದ ಸೌಭಾಗ್ಯ ಎಂದರು.
ಅಲ್ಲದೇ ಬೆಳೆವಿಮೆ ಈಗ ರೈತರ ಖಾತೆಗೆ ನೇರವಾಗಿ ತಲುಪುತ್ತಿದ್ದು ವಿಮೆ ಮೊತ್ತ ಕೂಡ ಹೆಚ್ಚಾಗಿರುವುದು.
ವಿವಿಧ ನೂತನ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
ಹಳಿಯಾಳ ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳು ಮೊದಿಜಿಯವರನ್ನು ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪ್ರಮುಖರಾದ ಮಂಗೇಶ ದೇಶಪಾಂಡೆ, ವಿಎಮ್ ಪಾಟಿಲ, ಅನಿಲ ಮುತ್ನಾಳ್, ಶಂಕರ ಕಾಜಗಾರ, ಈರಣ್ಣಾ ನಾವಲಗಿ, ಗೋಪಾಲ ಧೂಳಿ, ಸಿದ್ದು ಪಾಟಣಕರ, ಸಂಜು ಕರಡಿ, ಸುನಿಲ ಮಡಿವಾಳ, ರಾಜು ಮಿಂಡೊಳಕರ, ಪ್ರವೀಣ ರಗಟೆ,ಅಂಗಡಿ ಗ್ಯಾಸ ಸೇವಾ ಸಂಸ್ಥೆಯ ಚಂದ್ರಕಾಂತ ಅಂಗಡಿ, ಸಂತಾನ ಸಾವಂತ, ಶಂಕರ ಗಳಗಿ ಮೊದಲಾದವರು ಇದ್ದರು..
Leave a Comment