ಹಳಿಯಾಳ: ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚಂದವಾಗಿಡುವ ಜೊತೆಗೆ ಪ್ರತಿಯೊಬ್ಬರು ಮರಡಿಗ-ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಲೋಕೊಪಯೊಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಛತ್ರಪತಿ ಶಿವಾಜಿ ಮಹಾರಾಜರ ಕೊಟೆ ಪ್ರದೇಶದಲ್ಲಿ 150 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಿಲ್ಲಾ ಪ್ರವಾಸಿ ಸೌಧ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಂದು ಜನಾಂಗದ ಶ್ರೇಯೊಭಿವೃದ್ದಿಗಾಗಿ ರಾಜ್ಯ ಸಮ್ಮಿಶ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪ್ರತಿಯೊಬ್ಬರು ಸರ್ಕಾರದ ಯೋಜನೆಗಳ ಲಾಭ ಪಡೆದು ಜೀವನದಲ್ಲಿ ಮುಂದೆ ಬರಬೇಕು. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದು ಕರೆ ನೀಡಿದ ಸಚಿವರು ಸರ್ಕಾರದ ವಿವಿಧ ಯೋಜನೆಗಳು, ಸಾಧನೆಗಳ ಕುರಿತು ವಿವರಿಸಿ ಸಚಿವರು ಎಸ್ಸಿಎಸ್ಟಿ ರೈತರಿಗೆ 3 ವರ್ಷ ಉಚಿತ ವಿಮೆಯನ್ನು ಸರ್ಕಾರ ಘೊಷಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಕಾಲುಬಾಯಿ ಬೆನೆ ಲಸಿಕೆ ಕೊಡುವುದಕ್ಕೆ ಚಾಲನೆ, ಕುರಿ ಸಾಗಾಣ ಕೆ ಮತ್ತು ಹೈನುಗಾರಿಕೆಗೆ ಪರಿಶಿಷ್ಠ ಪಂಗಡದ ಆಯ್ದ ಫಲಾನುಭವಿಗಳಿಗೆ ಜಾನುವಾರುಗಳನ್ನು ನೀಡಲು ಚಾಲನೆ ಹಾಗೂ ರೈತರಿಗೆ ಮೇವು- ಬೀಜ ವಿತರಣೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು. 6 ವರ್ಷ ಮೇಲ್ಪಟ್ಟ ಕರುಗಳಿಗೆ ಪೌಷ್ಠಿಕ ಆಹಾರ ಹಾಗೂ ಔಷದಿಯನ್ನು ವಿತರಿಸಲಾಯಿತು.
ಲೋಕೊಪಯೋಗಿ ಇಲಾಖೆಯಿಂದ ಹಳಿಯಾಳ-ದಾಂಡೇಲಿಯಲ್ಲಿ ಸುಮಾರು 59 ಕೋಟಿಯ ವಿವಿಧ ಕಾಮಗಾರಿಗಳು ನಡೆದು ಉಧ್ಗಾಟನೆಯುಗೊಂಡಿದ್ದು ಇನ್ನು ಹಲವು ಕಾಮಗಾರಿಗಳು ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಮಹೇಶ್ರಿ ಮಿಶ್ಯಾಳೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಡಿಎಫ್ಓ ಯತೀಶಕುಮಾರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಪಿಡಬ್ಲೂಡಿ ಅಧಿಕಾರಿ ಆರ್.ಎಚ್.ಕುಲಕಣ ್, ಕೃಷಿ ಅಧಿಕಾರಿ ನಾಗೇಶ ನಾಯ್ಕ, ಪಶು ಸಂಗೋಪನಾ ಇಲಾಖೆ ಅಧಿಕಾರಿ ನದಾಫ ಇತರರು ಇದ್ದರು.
Leave a Comment