• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶ್ರಮವಿರದ ಬದುಕಿಗೆ ಅರ್ಥವಿಲ್ಲ – ಹಳಿಯಾಳದ ಹವಗಿ ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಭಿಪ್ರಾಯ

January 25, 2019 by Yogaraj SK Leave a Comment

Anantkumar hegde samvada

ಹಳಿಯಾಳ: ಯಾರ ಬದುಕಲ್ಲಿ ಶ್ರಮವಿಲ್ಲ ಅವರ ಬದುಕಿಗೆ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟ ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಕಠಿಣ ಶ್ರಮಪಟ್ಟು ಜೀವನದಲ್ಲಿ ಯಶಸ್ಸು ಗಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹವಗಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವರು ದೇಶದಲ್ಲಿ ಹಲವು ದಶಕಗಳಿಂದ ನೈಜ ಇತಿಹಾಸವನ್ನು ತಿರುಚಿ ಮೇಕಾಲೆ ಶಿಕ್ಷಣ ಪದ್ದತಿಯನ್ನು ಜಾರಿಗೊಳಿಸಿದ್ದರಿಂದ ಇಂದು ಮಹನಿಯರ ಬಗ್ಗೆ ಮಹಾನ್ ಸಾಧಕರು, ಕ್ರಾಂತಿಕಾರಿಗಳು ಹಾಗೂ ಹಲವು ನಿಜವಾದ ಪುಣ್ಯ ಕ್ಷೇತ್ರಗಳು, ಇತಿಹಾಸ ಪ್ರಸಿದ್ದ ಪ್ರವಾಸಿ ಸ್ಥಳಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದರು.
ಬದುಕಿನ ಲೆಕ್ಕಾಚಾರ ಯಾರಿಗೆ ಸರಿಯಾಗಿ ಅರ್ಥ ಆಗುತ್ತೊ ಅದು ಕೊಮರ್ಸ ಆಗಿದ್ದು ಜೀವನದ ಏಣ ಆಟವನ್ನು ಸರಿಯಾಗಿ ಅರಿತು ಜೀವನ ನಡೆಸಬೇಕು. ಕೇವಲ ಸರ್ಟಿಪಿಕೇಟ್‍ಗಾಗಿ ಶಿಕ್ಷಣ ಪಡೆಯಬೇಡಿ ಸಾಮಾಜಿಕ ಜ್ಞಾನ ಹೊಂದಲು ನಿಮ್ಮಲ್ಲಿರುವ ಮೌಲ್ಯಾಧಾರಿತ ಕೌಶಲ್ಯಗಳ ತಿಳಿದು ಪ್ರಪಂಚದಲ್ಲಿ ಆಗುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ನಿರಂತರ ತಿಳಿದುಕೊಂಡರೇ ಉತ್ತಮ ಜ್ಞಾನ ಹೊಂದಿ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯವೆಂದರು.
ಕೃಷಿ ಪ್ರಧಾನವಾಗಿರುವ ಭಾರತ ದೇಶದಲ್ಲಿ ಇಂದು ಭೂಮಿ ತಾಯಿಗೆ ವಿಷ ಉಣ ಸಲಾಗುತ್ತಿದೆ. ಇದರಿಂದ ಭೂಮಿ ತಾಯಿಯ ಶಾಪಕ್ಕೆ ಇಂದು ಪ್ರಕೃತಿ ವಿಕೋಪಗಳು, ಅತಿವೃಷ್ಠಿ-ಅನಾವೃಷ್ಟಿಗಳು ಸಂಭವಿಸುತ್ತಿದೆ ಎಂದ ಹೆಗಡೆ ನೀಜವಾದ ರೈತರು ಭೂಮಿಯಲ್ಲಿ ಮಣ ್ಣನೊಂದಿಗೆ ಮಾತನಾಡುವಂತಾಗಬೇಕು ಅವರೇ ನೀಜ ಅರ್ಥದಲ್ಲಿ ರೈತರು ಎಂದ ಅವರು ಮಣ ್ಣನ ಗುಣಲಕ್ಷಣಗಳನ್ನು ತಿಳಿದು ಅದಕ್ಕೆ ರಾಸಾಯಣ ಕ ರಸಗೊಬ್ಬರಗಳನ್ನು ಬಳಸದೆ ಮಣ ್ಣನ ಹಾಗೂ ಬೇವರಿನ ಮೇಲೆ ವಿಶ್ವಾಸವಿಟ್ಟು ನಡೆದರೇ ಉತ್ತಮ ಫಸಲು ಕಂಡುಕೊಳ್ಳಲು ಸಾಧ್ಯವೆಂದರು.
ಇನ್ನೂ ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸದರ್ಶನ, ಕೌಶಲ್ಯ ಅಭಿವೃದ್ದಿ ಕೇಂದ್ರ, ವಿವಿಧ ವಿಷಯಗಳ ತರಬೇತಿ ಕೇಂದ್ರಗಳನ್ನು ಹಳಿಯಾಳದಲ್ಲಿ ಆರಂಭಿಸುವಂತೆ ಹಾಗೂ ಸಾರಿಗೆ ಸಂಸ್ಥೆಯ ಬಸ್ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಇತರ ವಿವಿಧ ವಿಷಯಗಳು ಹಾಗೂ ಬೇಡಿಕೆಗಳನ್ನು ಮುಂದಿಟ್ಟು ಸಚಿವರೊಂದಿಗೆ ಸಂವಾದ ನಡೆಸಿದರು.
ಸಚಿವ ಅನಂತಕುಮಾರ ಅವರು ವಿದ್ಯಾರ್ಥಿಗಳ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದು ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕೆಂದು ಕರೆ ನೀಡಿದರು.
ಮಾಜಿ ಶಾಸಕ ಸುನೀಲ್ ಹೆಗಡೆ, ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡ ಮಂಗೇಶ ದೇಶಪಾಂಡೆ, ತುಕಾರಾಮ ಮಾಂಜ್ರೆಕರ, ಅನಿಲ ಮುತ್ನಾಳ್, ವಿಜಯ ಬೊಬಾಟಿ, ಸಂತಾನ ಸಾವಂತ, ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಲಮಾಣ ಇತರರು ಇದ್ದರು.

IMG 20190126 WA0143

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Canara News Tagged With: First Class Mahavidyalaya, Havagi Village, Hawagi Degree College, Historical Festivals, In a conversation with the students, Lack of Life, Success in Life, Tough Stress, Union Minister Ananthkumar Hegde said

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...