ಹಳಿಯಾಳ: ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮೊತಿಕೆರೆ ಪಕ್ಕದ ಜಿಲ್ಲಾ ಕುಸ್ತಿ ಅಖಾಡದಲ್ಲಿ ದಿ.28 ರವರೆಗೆ ನಡೆಯಲಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗೆ ವಿಜೃಂಭಣೆಯ ಚಾಲನೆ ದೊರೆತಿದೆ.
ಪಟ್ಟಣದಲ್ಲಿಯ ಶ್ರೀ ತುಳಜಾಭವಾನಿ ದೇವಸ್ಥಾನದಿಂದ ಕುಸ್ತಿ ಪಟುಗಳಿಂದ ಆರಂಭಿಸಲಾದ ಕ್ರೀಡಾ ಜ್ಯೋತಿಯನ್ನು ರಾಯಣ್ಣ ವೃತ್ತ, ಬಜಾರ, ಶಿವಾಜಿ ಸರ್ಕಲ್ , ವನಶ್ರೀ ಸರ್ಕಲ್ ಮಾರ್ಗದ ಮೂಲಕ ಕುಸ್ತಿ ಆಖಾಡಾಕ್ಕೆ ತಲುಪಿ ಕ್ರೀಡಾಂಗಣದಲ್ಲಿ ಜ್ಯೋತಿಯನ್ನು ಬೆಳಗಿಸಿ, ಕುಸ್ತಿ ಅಖಾಡಾದಲ್ಲಿ ಹನುಮಾನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ವಿದ್ಯುಕ್ತವಾಗಿ ಕ್ರೀಡೆಗೆ ಚಾಲನೆ ನೀಡಲಾಯಿತು.
ಕುಸ್ತಿ ಪಟುಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಬೆಳಗಾವಿಯ ಮಹಿಳೆಯರ ಜಾಂಝ ಪಥಕದ ಮೂಲಕ ಸಾಂಪ್ರದಾಯಿಕ ಮೇರವಣ ೀಗೆ ನಡೆಸುವ ಮೂಲಕ ಜನರ ಗಮನ ಸೆಳೆದರು.
ಹೆಮ್ಮೆಯ ಸಂಗತಿ :– ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಿ.ಆರ್.ಡಿಎಮ್ ಟ್ರಸ್ಟ್ ನ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಜ್ಯೋತಿ ಬೆಳಗಿಸುವ ಮೂಲಕ ವೇದಿಕೆಯ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ಕುಸ್ತಿ ಕ್ರೀಡೆಯಲ್ಲಿ ಇಂದು ಹಳಿಯಾಳ ಕ್ಷೇತ್ರದ ಯುವಕ-ಯುವತಿಯರು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಯುವ ಪ್ರತಿಭೆಗಳಿಗೆ ವಿ.ಆರ್.ಡಿಎಮ್ ಟ್ರಸ್ಟ್ನಿಂದ ಸದಾಕಾಲ ಪ್ರೊತ್ಸಾಹ ದೊರೆಯಲಿದೆ ಎಂದು ಕುಸ್ತಿ ಪಟುಗಳಿಗೆ ಶುಭ ಹಾರೈಸಿದರು.
ಕೆಕೆ ಹಳ್ಳಿ ನಿತ್ಯಾನಂದ ಮಠದ ಸುಬ್ರಹ್ಮಣ್ಯ ಸ್ವಾಮಿಜಿ, ಆದಿಶಕ್ತಿ ಪಿಠದ ಕೃಷ್ಣಾನಂದ ಭಾರತಿ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕುಸ್ತಿ ಸಂಘಟಕ ಯಶವಂತ ಸ್ವಾಮೀಜಿ, ದಾಂಡೇಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೈಯದ ತಂಗಳ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟಿಲ್, ಟ್ರಸ್ಟ್ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮೊದಲಾದವರು ಇದ್ದರು.
18 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನ ಘೊಷಿಸಲಾಗಿರುವ 27 ಪ್ರಶಸ್ತಿಗಳಿಗಾಗಿ ನಡೆಯುತ್ತಿರುವ ಈ ಕುಸ್ತಿ ಪಂದ್ಯಾವಳಿಗೆ ಈಗಾಗಲೇ ಶನಿವಾರ ಕಿರಿಯರ ವಿಭಾಗದಲ್ಲಿ 297 ಬಾಲಕರು, 87 ಬಾಲಕಿಯರು ಹೀಗೆ 380 ಕ್ಕೂ ಅಧಿಕ ಕಿರಿಯ ಪೈಲ್ವಾನರು ಹೆಸರನ್ನು ನೊಂದಾಯಿಸಿದ್ದು. ದಿ.28 ರಂದು ನಡೆಯಲಿರುವ ಹಿರಿಯ ವಿಭಾಗದ ಕುಸ್ತಿ ಪಂದ್ಯಾವಳಿಗೆ ಭಾನುವಾರ ಸಾಯಂಕಾಲ ರಾಜ್ಯ-ರಾಷ್ಟ್ರಮಟ್ಟದ ಕುಸ್ತಿ ಕಲಿಗಳು ಹೆಸರು ನೊಂದಾಯಿಸಿಕೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕುಸ್ತಿ ಕ್ರಿಡೆಗಾಗಿ ಹೆಸರುವಾಸಿಯಾಗಿರುವ ಹಳಿಯಾಳವು ಕುಸ್ತಿಯ ತವರುರೆಂದು ಪ್ರಸಿದ್ದಿಯಾಗಿದ್ದು 2 ದಿನಗಳ ಕಾಲ ಪಟ್ಟಣದಲ್ಲಿ ನಡೆಯಲಿರುವ ಕುಸ್ತಿ ಕಲಿಗಳ ಕದನವನ್ನು ವಿಕ್ಷಿಸಲು ಸಾವಿರಾರು ಜನತೆ ರಾಜ್ಯದ ವಿವಿದೆಡೆಯಿಂದ ಹಾಗೂ ಹೊರ ರಾಜ್ಯಗಳಿಂದ ಆಗಮಿಸುತ್ತಿರುವುದು ಪಂದ್ಯಾವಳಿಯ ಮೆರಗನ್ನು ಹೆಚ್ಚಿಸಿದೆ. ಅಲ್ಲದೇ ಸಂಘಟಕರು ಪಟ್ಟಣದ ಬಸ್ ನಿಲ್ದಾಣ, ಶಿವಾಜಿ ವೃತ್ತ ಸೇರಿದಂತೆ ಪ್ರಮುಖ ಭಾಗದಲ್ಲಿ ಸಾರ್ವಜನೀಕರಿಗೆ ಕುಸ್ತಿ ಪಂದ್ಯಾವಳಿ ವಿಕ್ಷಣೆಗೆ ಬೃಹತ್ ಎಲ್ಇಡಿ ಸ್ಕ್ರಿನ್ ವ್ಯವಸ್ಥೆ ಮಾಡಿದ್ದು ಎಲ್ಲರು ಕುಸ್ತಿಯನ್ನು ವಿಕ್ಷೀಸಲು ಅವಕಾಶ ಮಾಡಿಕೊಡಲಾಗಿದೆ.
Leave a Comment