ಹಳಿಯಾಳ:- ಹಳಿಯಾಳದ ಮೊತಿಕೆರೆ ಪಕ್ಕದ ಜಿಲ್ಲಾ ಕುಸ್ತಿ ಅಖಾಡದಲ್ಲಿ ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ಬಾಲಕ-ಬಾಲಕಿಯರ ಕಿರಿಯರ ವಿವಿಧ ವಿಭಾಗದ ಕುಸ್ತಿ ಪಂದ್ಯಾವಳಿಗಳು ಮುಕ್ತಾಯಗೊಂಡಿವೆ.
ಬಾಲಕರ 29 ಕೆಜಿ ವಿಭಾಗದಲ್ಲಿ ದಾವಣಗೆರೆಯ ಕೆಂಚು ಎನ್ ಪ್ರಥಮ ಬಂಗಾರದ ಪದಕ, ಶ್ರೀ ಘಾಡಿ(ಬೆಳಗಾವಿ) ಬೆಳ್ಳಿ, ಎಸ್ಎಚ್. ಗದಗನ ಕಿರಣ ಮತ್ತು ಬೆಳಗಾವಿಯ ದೆವಿದಾಸ ಕಾಮಕರ ಕಂಚಿನ ಪದಕ.
32 ಕೆಜಿ ವಿಭಾಗದಲ್ಲಿ ಬಾಗಲಕೊಟನ ಬಾಬುರಾವ ಮಾನೆ-ಬಂಗಾರ, ಶಿವಾನಂದ ಬೊವಿ(ಗದಗ)- ಬೆಳ್ಳಿ, ವರುಣ ಕುಂಬಾಕಲೆ(ಬಾಗಲಕೊಟ) ಮತ್ತು ಮುಟಗಾದ ಆರ್ಯನ ಚೌಗಲೆ-ಕಂಚಿನ ಪದಕ.
35 ಕೆಜಿ ವಿಭಾಗದಲ್ಲಿ ಮುಧೋಳದ ನಿಂಗಪ್ಪ ಜಿಎನ್ -ಬಂಗಾರ, ಹಳಿಯಾಳದ ನಾಮದೇವ ಮಲ್ಲಿಕ-ಬೆಳ್ಳಿ, ಗದಗನ ಅದಗೊಂಡ ಬಿಳಗಿ ಮತ್ತು ಬನಹಟ್ಟಿಯ ರಾಘವೇಂದ್ರ ನಾಯ್ಕ ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ
29 ಕೆಜಿ ವಿಭಾಗ:- ಬೆಳಗಾವಿಯ ರುತುಜಾ ಗುರುವ- ಬಂಗಾರದ ಪದಕ, ಹಳಿಯಾಳದ ಗಂಗೋತ್ರಿ ಹುಲಕೊಪ್ಪ-ಬೆಳ್ಳಿ, ಗದಗನ ವಿದ್ಯಾಶ್ರೀ ಮತ್ತು ಬಾಗಲಕೊಟನ ರಂಜಿನಿ ಅಡಗಲ್- ಕಂಚಿನ ಪದಕಗಳು.
32 ಕೆಜಿ ವಿಭಾಗ:- ಬೆಳಗಾವಿಯ ಅಮೂಲ್ಯ ಕುಂದರಗಿ-ಬಂಗಾರ, ಹಳಿಯಾಳದ ಮನಿಶಾ ಸಿದ್ದಿ- ಬೆಳ್ಳಿ, ಬೆಳಗಾವಿಯ ಶ್ರೇಯಾ ಪಾಟೀಲ್ ಮತ್ತು ಭುವನೇಶ್ವರಿ- ಕಂಚಿನ ಪದಕಗಳು.
35 ಕೆಜಿ ವಿಭಾಗದಲ್ಲಿ :- ಸವಿತಾ ಅನ್ನಿಕೆರಿ-ಹಳಿಯಾಳ- ಬಂಗಾರದ ಪದಕ, ಬಾಗಲಕೊಟನ ಪ್ರತೀಕ್ಷಾ ಎಸ್.ಬಿ-ಬೆಳ್ಳಿ, ಬಾಗಲಕೊಟನ ಕಲ್ಪನಾ ಕೆ ಮತ್ತು ಹಳಿಯಾಳದ ಅನನ್ಯಾ ಘಾಡಿ ನಾಲ್ಕನೆ ಸ್ಥಾನಗಳನ್ನು ಪಡೆದು ಕಂಚಿನ ಪದಕಗಳನ್ನು ಪಡೆದಿದ್ದಾರೆ ಎಂದು ಕುಸ್ತಿ ಸಂಘಟಕರು ತಿಳಿಸಿದ್ದಾರೆ.
Leave a Comment