• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರ್ ವಿ ದೇಶಪಾಂಡೆ ಕುರಿತು ಅನಂತಕುಮಾರ ಹೆಗಡೆ ಹೇಳಿಕೆಗೆ ತಮ್ಮ ಸಹಮತವಿದೆ – ಮಾಜಿ ಶಾಸಕ ಸುನೀಲ್‌ ಹೆಗಡೆ

February 1, 2019 by Yogaraj SK Leave a Comment

sunil hegde

ಹಳಿಯಾಳ:- ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಪರ್ಸಂಟೆಜ್ ದೇಶಪಾಂಡೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ನೀಡಿರುವ ಹೇಳಿಕೆಗೆ ತಮ್ಮ ಅನುಮೋದನೆ ಇದ್ದು ದೇಶಪಾಂಡೆ ಅವರು ಆರೋಪ ಸುಳ್ಳು ಎನ್ನುವಂತಿದ್ದರೇ ಮಂಪರು ಪರೀಕ್ಷೆಗೆ ಸಿದ್ದರಾಗಲಿ ಹಾಗೂ ತಾಯಿ ತುಳಜಾಭವಾನಿ ದೇವಿಯ ಮೇಲೆ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಸವಾಲ್ ಹಾಕಿದ್ದಾರೆ.
ಪಟ್ಟಣದಲ್ಲಿ ಹಳಿಯಾಳ ಬಿಜೆಪಿ ಘಟಕದವರು ಕರೆದಿದ್ದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತ ದೇಶಪಾಂಡೆ ಅವರ ವಿರುದ್ದ ಯಾವುದಾದರೊಂದು ಹೇಳಿಕೆ ಅಥವಾ ಆರೋಪಗಳು ಬಂದ ತಕ್ಷಣ ಅವರ ಮುಖಂಡರು ಹಾಗೂ ಚೆಲಾಗಳು ದೇಶಪಾಂಡೆ ಪರವಾಗಿ ವಾದಿಸುತ್ತಾರೆ ಎಂದು ಕಿಡಿಕಾರಿದ ಹೆಗಡೆ ಅವರದೇ ಅಧ್ಯಕ್ಷತೆಯಲ್ಲಿರುವ ವಿ.ಆರ್.ಡಿಎಮ್ ಟ್ರಸ್ಟ್‍ಗೆ ಈವರೆಗೆ ಎಷ್ಟು ಹಣ ಯಾವ ಯಾವ ಉದ್ಯಮಿಗಳಿಂದ ಬರುತ್ತೆ ಹಾಗೂ ಇತರೆ ಎಲ್ಲ ವಿವರಗಳನ್ನು ಸಾರ್ವಜನೀಕವಾಗಿ ಬಹಿರಂಗ ಪಡಿಸಲಿ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಗುತ್ತಿಗೆ ಕೆಲಸ ನೀಡಲು ಬರಗಾಲ ಘೋಷಿಸುವ ಸಚಿವ ದೇಶಪಾಂಡೆ ಅವರು ಈವರೆಗೆ ಬರಗಾಲ ಘೋಷಣೆಗಾಗಿ ಎಷ್ಟು ಹಣ ಬಂದಿದೆ. ಅನುದಾನ ಹೇಗೆ ಬಳಸಿಕೊಳ್ಳಲಾಗಿದೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲ್ ಹಾಕಿದರು.
ಎಸಿಬಿ ಅವರು ಇತ್ತೀಚೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದ ಸ್ವಾಮಿ ಎನ್ನುವಾತ ನೀಡಿರುವ ಹೇಳಿಕೆಗಳ ಬಗ್ಗೆ ತನಿಖೆ ಮಾಡಿಸಬೇಕು. ದೇಶಪಾಂಡೆ ಅವರು 40 ವರ್ಷಗಳಲ್ಲಿ ಜಿಲ್ಲೆಗೆ ತಂದ ಅನುದಾನ, ಕಾಮಗಾರಿಗಳ ಬಗ್ಗೆ ಸಂಪೂರ್ಣ ತನಿಖೆಗೆ ತಾವೆ ಆದೇಶ ಹೊರಡಿಸಲಿ ಎಂದರು.
ಜೋಯಿಡಾ ಭಾಗದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಲ್ಲೆಡೆ ಕಳಪೆ ಕಾಮಗಾರಿಗಳು ನಡೆದಿದೆ. ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಕಾಮಗಾರಿಯ ಮೊತ್ತಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಅನುದಾನವನ್ನು ತರಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಎನ್.ಎಸ್.ನಾಯ್ಕ ಎನ್ನುವ ಗುತ್ತಿಗೆದಾರನಿಗೆ ನೀಡಲಾಗುತ್ತಿರುವುದರ ಹಿಂದಿನ ಒಳಗುಟ್ಟೇನು ಎಂದು ಪ್ರಶ್ನೀಸಿದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಯಾರ ಕ್ಷಮೆ ಕೆಳೋ ಅಗತ್ಯವಿಲ್ಲ ಎಂದ ಸುನೀಲ್ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜಿಲ್ಲೆಯಾದ್ಯಂತ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ದೇಶಪಾಂಡೆ ಅವರು ಚುನಾವಣೆ ರಾಜಕೀಯ ಬಿಟ್ಟು ಜನರ ಧ್ವನಿಯಾಗಿ ಪ್ರಾಮಾಣ ಕವಾಗಿ ಜನರ ಸೇವೆ ಮಾಡಲಿ ಎಂದರು.
ಇನ್ನೂ ಮರಾಠಾ ಸಮಾಜದ ಮುಖಂಡರೊಬ್ಬರು ಜಿಲ್ಲಾಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಸಮಾಜದ ಹೆಸರಿನಲ್ಲಿ ಅನುದಾನ ತಂದು ಭ್ರಷ್ಟಾಚಾರ ನಡೆಸಿದ್ದು ಹಣದ ದುರ್ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇದು ಸಚಿವರಿಗೆ ಕಾಣ ಸುತ್ತಿಲ್ಲವೇ ನೀವು ಭ್ರಷ್ಟಾಚಾರ ವಿರೋಧಿಗಳಾಗಿದ್ದರೇ ಮೆಲ್ನೋಟಕ್ಕೆ ಹಣ ದುರ್ಬಳಕೆ ಆಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು ತನಿಖೆಗೆ ಆದೇಶ ನೀಡಬೇಕಿತ್ತು.
ಆದರೇ ತಾವು ಭ್ರಷ್ಟರನ್ನು ಕಾಪಾಡುವವರು ಎಂದು ವ್ಯಂಗ್ಯವಾಡಿದ ಸುನೀಲ್ ಹೆಗಡೆ ಘೋಟ್ನೇಕರ ಅವರು ತನಿಖೆಗೆ ಸಹಕರಿಸಬೇಕು. ಜಿಲ್ಲಾಧಿಕಾರಿಗಳ ತನಿಖೆ ಪೂರ್ಣಗೊಂಡ ಬಳಿಕ ಒಂದಾನುವೇಳೆ ಸಮರ್ಪಕ ನ್ಯಾಯ ದೊರೆಯದೆ ಇದ್ದರೇ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಅನಿಲ್ ಮುತ್ನಾಳ್, ಉದಯ ಹುಲಿ, ಸಂತೋಷ ಘಟಕಾಂಬಳೆ, ಚಂದ್ರು ಕೆ ಇತರರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Canara News Tagged With: Ananthakumar Hegde, Former MLA Sunil Hegde, has been named as the Minister of State for Human Resource Development, Minister of State in charge of Rural Development, rv deshpande, who is also a member of the Lok Sabha

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...