ಹಳಿಯಾಳ: ಭಾರತ ದೇಶದ ಹತ್ತನೇ ಮತ್ತು ಕರ್ನಾಟಕ ರಾಜ್ಯದ ಏಕೈಕ ಹಳಿಯಾಳದ ತಾಲೂಕಿನ ಕರ್ಲಕಟ್ಟಾದಲ್ಲಿರುವ ಶನಿಧಾಮ, ಬಾಬಾ ಖೇಥಾನಾಥಜಿ ಆಶ್ರಮದ 4ನೇ ವಾರ್ಷಿಕೋತ್ಸವ ಹಾಗೂ ಗುರುನಾಥ ಮಹಾರಾಜರ 5ನೇ ಪುಣ್ಯಸ್ಮರಣೆ ಕಾರ್ಯಕ್ರಮ ಶ್ರಧ್ಧಾ ಭಕ್ತಿಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪುನಾ ಮಂಚರನ ಯೋಗಿ ಕಿಶನನಾಥಜಿ ಸ್ವಾಮೀಜಿ ಪ್ರಾಚಿನ, ಸನಾತನ ಹಿಂದೂ ಧರ್ಮದ ಸಂಸ್ಕøತಿಯನ್ನು ಯಾರು ಮರೆಯಬಾರದು, ಧರ್ಮ ನೀತಿಯಿಂದ ನಡೆಯಬೇಕು, ಗೋ ಹತ್ಯೆ ನಿಲ್ಲಬೇಕು, ದಾನ-ಧರ್ಮ ಮಾರ್ಗದಲ್ಲಿ ಎಲ್ಲರೂ ನಡೆಯುವಂತಾಗಬೇಕಾಗಿದೆ ಎಂದರು.
ದ್ವಾದಶ(12) ಜ್ಯೋತಿರ್ಲಿಂಗÀಗಳು, ಹನುಮಾನ್ ಮಂದಿರ ಹೊಂದಿರುವ ಶನಿಧಾಮದಲ್ಲಿ 4ನೇ ವಾರ್ಷಿಕೋತ್ಸವದ ನಿಮಿತ್ತ ಶನಿದೇವರ ಅಭಿಷೇಕ, ಹೋಮ-ಹವನ, ಪೂಜಾ ವಿಧಿ ವಿಧಾನಗಳು, ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆದವು.
ಮಾಜಿ ಶಾಸಕ ಸುನೀಲ್ ಹೆಗಡೆ, ಸಾಂಬ್ರಾಣ ಗ್ರಾ.ಪಂ.ಅಧ್ಯಕ್ಷ ಐಸಿ ಕಾಮಕರ, ಜಿಪಂ ಸದಸ್ಯ ಕೃಷ್ಣಾ ಪಾಟೀಲ್, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು, ಸಿಬ್ಬಂದಿಗಳು, ಶನಿಧಾಮದ ಯೋಗಿ ಮೇಘನಾಥಜಿ, ಮಾಯಿ ಚಂದ್ರಿಕಾನಾಥಜೀ, ಮಾಯಿ ಶಾಂತಿನಾಥಜೀ, ಎವಿಎಮ್ ಗ್ರಾನೈಟ್ಸ್ನ ಮಹಾವೀರ ಪ್ರಸಾದ ಮಲಾನಿ, ಶ್ಯಾಮಾ, ವಿವೇಕ ಮಲಾನಿ ಸೇರಿದಂತೆ ರಾಜಸ್ಥಾನಿ, ಮಾರವಾಡಿ ಸಮಾಜದವರು ಸೇರಿದಂತೆ ಸಾವಿರಾರು ಭಕ್ತರು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
Leave a Comment