ಹಳಿಯಾಳ : ಕೆನರಾ ಲೋಕಸಭಾ ಸಂಸದ ಅನಂತಕುಮಾರ ಹೆಗಡೆ 5 ಬಾರಿ ಸಂಸದರಾಗಿದ್ದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯು ಶಾಂತಿಯುತವಾಗಿದೆ ಇಲ್ಲದಿದ್ದರೇ ಇಡೀ ಜಿಲ್ಲೆಯೇ ಭಟ್ಕಳವಾಗಿ ಮಾರ್ಪಾಡಾಗುತ್ತಿತ್ತು ಎನ್ನುವ ಸತ್ಯವನ್ನು ಕಾಂಗ್ರೇಸ್ ಮತ್ತು ಸಚಿವ ದೇಶಪಾಂಡೆ ತಿಳಿದುಕೊಳ್ಳಲಿ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ತೀರುಗೆಟು ನೀಡಿದ್ದಾರೆ.
ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 8 ತಿಂಗಳ ನಂತರ ಪ್ರಚೋಧನಾಕಾರಿ ಭಾಷಣ ಮಾಡಲಾಗಿದೆ ಎಂದು ಆರೋಪಿಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಸರ್ಕಾರವು ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣಗಳನ್ನು ದಾಖಲು ಮಾಡುವುದರ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ವರ್ಚಸ್ಸನ್ನು ಕಡಿಮೇ ಮಾಡುವ ಪ್ರಯತ್ನ ನಡೆಸಿದ್ದು ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆಂದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೃದಯದಿಂದ ಹಿಂದೂವಾಗಿದ್ದು, ಹಿಂದೂ ಸಂಸ್ಕøತಿಯನ್ನು ರಕ್ಷಿಸುವಲ್ಲಿಯೇ ಶ್ರಮಿಸುತ್ತಿದ್ದು ಅವರ ಮೇಲೆ ಡೊಂಗಿ ಹಿಂದೂತ್ವವಾದಿಯಾಗಿರುವ ಸಚಿವ ಆರ್.ವಿ.ದೇಶಪಾಂಡೆ ಕುಮ್ಮಕ್ಕಿನಿಂದ ರಾಜ್ಯ ಸರ್ಕಾರ ಎಷ್ಟೇ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿದರು ಜನರ ಮನಸ್ಸಿಂದ ಸಂಸದರ ವರ್ಚಸ್ಸನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೆಂದು ಸುನೀಲ್ ಹೇಳಿದರು.
ಸಿಬರ್ಡ ನಿರಾಶ್ರಿತರಿಗೆ ದಶಕಗಳ ಕಾಲ ಪರಿಹಾರ ನೀಡುವ ನಾಟಕವಾಡಿದ ದೇಶಪಾಂಡೆ ಅವರ ಸಂಕಷ್ಟಗಳಿಗೆ ಸ್ಪಂದಿಸದೇ ಇದ್ದಾಗ ಸಚಿವ ಅನಂತಕುಮಾರ ಅವರು ಅಂದಿನ ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರನ್ನು ಭೇಟಿ ಮಾಡಿ ಅಂತಿಮವಾಗಿ ಕೇಂದ್ರದ ಬಿಜೆಪಿ ಸರ್ಕಾರದಿಂದ ನಿರಾಶ್ರಿತರಿಗೆ ಪರಿಹಾರ ಒದಗಿಸಲಾಯಿತು. ದೇಶಪಾಂಡೆ ದಾಂಡೇಲಿಗೆ ರೈಲು ತರುವುದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನೀಡಿದ ಭರವಸೆ ಇನ್ನೂವರೆಗೂ ಈಡೇರಿಲ್ಲ. ಕೇವಲ ಮಾತಿನಲ್ಲಿಯೇ ರೈಲು ಬೀಡುವ ಕಲೆಯನ್ನು ದೇಶಪಾಂಡೆ ಕರಗತ ಮಾಡಿಕೊಂಡಿದ್ದಾರೆಂದು ಹೆಗಡೆ ಟಿಕಿಸಿದರು.
ಸಚಿವ ಅನಂತಕುಮಾರ ಅವರು ನೀಡಿದ ಹೇಳಿಕೆಗಳನ್ನು ರಾಜ್ಯದ ಸಮಿಶ್ರ ಸರ್ಕಾರದವರು ತಿರುಚಿ ನೀಡುವುದರ ಜೊತೆಗೆ ಅವರ ಪ್ರತಿಷ್ಠೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಕಾಂಗ್ರೇಸ್ ಪಕ್ಷದವರು ಜಾತಿ ಜಾತಿಗಳ ಮಧ್ಯೆ ಮತಗಳ ಸಲುವಾಗಿ ವಿಷ ಬೀಜಗಳನ್ನು ಬಿತ್ತುತ್ತಿದ್ದಾರೆ. ಕಾಂಗ್ರೇಸ್ ಪಕ್ಷದಿಂದ ಅಲ್ಪಸಂಖ್ಯಾತರ ಅಭಿವೃದ್ದಿ ಅಸಾಧ್ಯವಾಗಿದ್ದು, ಹಿಂದೂ ಮತ್ತು ಮುಸ್ಲಿಂ ನಡುವೆ ಸಂಘರ್ಷಕ್ಕೆ ಮೂಲ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಅನಂತಕುಮಾರ ಹೆಗಡೆ ಅವರ ವಿರುದ್ದ ಸತ್ಯಕ್ಕೆ ದೂರವಾದ ಹೇಳಿಕೆ, ಅನವಶ್ಯಕ ಕೇಸ್ಗಳನ್ನು ಹಾಕಲು ಮುಂದಾದಲ್ಲಿ ರಾಜ್ಯಾದಂತ ಬಿಜೆಪಿ ಪಕ್ಷದಿಂದ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ ಸುನೀಲ್ ಹೆಗಡೆ ರಾಜ್ಯ ಸರ್ಕಾರವು ಅನಂತಕುಮಾರ ಅವರ ಮೇಲೆ ಹಾಕಿದ ಪ್ರಕರಣಗಳ ಕುರಿತು ಮರುಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.
ದಾಂಡೇಲಿಯ ಅಲ್ಪಸಂಖ್ಯಾತ ಸಮಾಜದ ಮಹಿಳಾ ಮುಖಂಡೆ ಈ ಹಿಂದೆ ಅನಂತಕುಮಾರ ಹಾಗೂ ಬಿಜೆಪಿಯವರ ಮತ ಪಡೆದು ಅಧಿಕಾರಕ್ಕೆ ಬರುವಾಗ ಅವರು ಕೊಮುವಾದಿ ಏನಿಸಲಿಲ್ಲವೇ ಸಚಿವರಿಂದ ಲಾಭ ಪಡೆದು ಈಗ ಅವರು ನಿಮಗೆ ಕೊಮುವಾದಿಯಾದರೇ ಎಂದು ಸುನೀಲ್ ಹೆಗಡೆ ಪರೋಕ್ಷವಾಗಿ ಯಾಸ್ಮೀನ್ ಕಿತ್ತೂರ ಅವರನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ಉದಯ ಹೂಲಿ ಮುಖಂಡರಾದ ಅಪ್ಪು ಚರಂತಿಮಠ, ಅನಿಲ್ ಮುತ್ನಾಳೆ, ವಿಜಯಕುಮಾರ ಬೊಬಾಟಿ, ಸಂತಾನ ಸಾವಂತ, ಕುಮಾರ ಕಲಭಾವಿ ಇದ್ದರು.
Leave a Comment