
ಹಳಿಯಾಳ:- ಹಳಿಯಾಳ ಹಬ್ಬದ ಅಂಗವಾಗಿ ಪಟ್ಟಣದ ತಾಲೂಕಾ ಆಸ್ಪತ್ರೆ ಹಾಗೂ ಹವಗಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಪ್ರತ್ಯೇಕ ರಕ್ತದಾನ ಶೀಬಿರಗಳಲ್ಲಿ ನೂರಾರು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರ ಮೂಲಕ ಸಾರ್ವಜನೀಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
-:ಕರ್ನಾಟಕ ರಕ್ಷಣಾ ವೇದಿಕೆಯಿಂದ :-
ಹಳಿಯಾಳದ ವಿ.ಆರ್.ಡಿಎಮ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ 9 ಜನ ಸಿಬ್ಬಂದಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ 22 ಜನ ಕಾರ್ಯಕರ್ತರು ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಶಿರಸಿಯ ಪಂಡಿತ ಸಾರ್ವಜನೀಕ ಆಸ್ಪತ್ರೆಯ ಐಎಂಎ ಲೈಫ್ ಲೈನ್ ಬ್ಲಡ್ ಬ್ಯಾಂಕ್ ನವರ ಜಂಟಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ 31 ಜನರು ರಕ್ತದಾನ ಮಾಡಿದ್ದು 31 ಯುನಿಟ್ ರಕ್ತ ಸಂಗ್ರಹವಾಗಿದೆ.
-: ಜಯ ಕರ್ನಾಟಕ ಸಂಘಟನೆ ಮತ್ತು ವಿದ್ಯಾರ್ಥಿಗಳಿಂದ :-
ಇನ್ನೂ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಮಹಾವಿದ್ಯಾಲಯ, ಜಯ ಕರ್ನಾಟಕ ಸಂಘಟನೆ, ಯುವ ರೇಡ್ ಕ್ರಾಸ್ ಘಟಕ, ಎನ್ ಸಿಸಿ, ಕ್ರೀಡಾ, ಸ್ಕೌಟ್ ಮತ್ತು ಗೈಡ್ಸ್, ಐಕ್ಯೂಎಸ್ಸಿ ಹಾಗೂ ಜಿಲ್ಲಾ ಆಸ್ಪತ್ರೆ ಕಾರವಾರ, ಪದ್ಮಶ್ರೀ ಡಾ.ಆರ್.ಬಿ ಪಾಟೀಲ್ ಕ್ಯಾನ್ಸ್ರ್ ಆಸ್ಪತ್ರೆ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ 129 ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ದಾಖಲೆಯ 129 ಯುನಿಟ್ ಹಾಗೂ ತಾಲೂಕಾ ಆಸ್ಪತ್ರೆಯ 31 ಯುನಿಟ್ ಒಟ್ಟೂ 156 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಯುವಕರು ಉತ್ಸಾಹದಿಂದ ರಕ್ತದಾನ ಮಾಡಿರುವುದು ಸಾರ್ವಜನೀಕ ವಲಯದಲ್ಲಿ ಶ್ಲಾಘನೆಯ ಮಾತುಗಳು ಕೇಳಿ ಬರುತ್ತಿವೆ.

-:ಹಣ ಕೆಳದೆ ರಕ್ತ ಪೂರೈಸಿ:-
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ನೇತೃತ್ವದಲ್ಲಿ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ ದಾನಿಗಳಿಗೆ ಅವಶ್ಯಕತೆ ಇದ್ದಲ್ಲಿ ಈ ರಕ್ತದಾನಿಗಳಿಂದ ಯಾವುದೇ ರೀತಿಯ ಹಣ ಪಡೆಯದೆ ರಕ್ತದ ಪೂರೈಕೆ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ ಕ್ಯಾನ್ಸ್ರ್ ಆಸ್ಪತ್ರೆಯ ವೈದ್ಯ ಡಾ.ಉಮೇಶ ಹಳ್ಳಿಕೆರಿಯವರಿಗೆ ಮನವಿ ಅರ್ಪಿಸಲಾಯಿತು.
ಮನವಿ ಸಲ್ಲಿಸುವಾಗ ಗೋಪಿ ಗರಗ, ನಾಗರಾಜ, ಸುಭಾಷ ಇದ್ದರೇ ತಾಲೂಕಾ ಆಸ್ಪತ್ರೆಯ ಶಿಬಿರದಲ್ಲಿ ಕರವೇಯ ಚಂದ್ರಕಾಂತ ಗೊಂಧಳಿ, ವಿನೋದ ದೊಡ್ಮನಿ, ಮಹೇಶ ಆನೆಗುಂದಿ, ಸುಧಾಕರ ಕುಂಬಾರ, ರುಡಸೆಟ್ನ ವಿನಾಯಕ ಚವ್ವಾಣ ಇದ್ದರು.


Leave a Comment