ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರಿಂದ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಹಳಿಯಾಳದೆಲ್ಲೆಡೆ ಆಕ್ರೋಶ- ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದು- ಪಟ್ಟಣ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲೂ ಪಂಜಿನ ಮೆರವಣ ಗೆ- ಮೆಣದ ಬತ್ತಿಗಳನ್ನು ಬೆಳಗಿಸಿ ಹುತಾತ್ಮರಿಗೆ ಶೃದ್ದಾಂಜಲಿ ಸಲ್ಲಿಸಲಾಗುತ್ತಿದೆ.
ಹಳಿಯಾಳ ಪೋಲಿಸರು ಪಿಎಸ್ಐ ಆನಂದಮೂರ್ತಿ ನೇತೃತ್ವದಲ್ಲಿ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿಯ ಧ್ವಜ ಸ್ತಂಭದ ಮೇಲೆ ಮೆಣದ ಬತ್ತಿಗಳನ್ನು ಬೆಳಗಿಸಿ ಹುತಾತ್ಮರಿಗೆ ಶೃಧ್ದಾಂಜಲಿ ಸಲ್ಲಿಸಿದರು.
ಪಟ್ಟಣದ ಕಿಲ್ಲಾ ಭಾಗದ ಜನರು ಕಿಲ್ಲಾ ತರುಣ ಯುವಕ ಮಂಡಳ ನೇತೃತ್ವದಲ್ಲಿ ಶೀವಾಜಿ ಪುಥ್ಥಳಿ ಎದುರಿನ ವೃತ್ತದಲ್ಲಿ ಮೆಣದ ಬತ್ತಿಗಳನ್ನು ಬೆಳಗಿಸಿ ಭಾರತದ ಪರ ಹಾಗೂ ಪಾಕಿಸ್ತಾನ ವಿರೋಧಿ ಘೋಷಣೆ ಕೂಗಿ -ಸೈನಿಕರಿಗೆ ಶೃದ್ದಾಂಜಲಿ ಅರ್ಪಿಸಿದರು.
ಮಾಜಿ ಸೈನಿಕರ ಸಂಘದವರು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಅಂಜುಮನ್ ಸಂಸ್ಥೆ, ಲಾಯನ್ಸ್ ಕ್ಲಬ್, ಕ್ಷತ್ರೀಯ ಜೀಜಾಮಾತಾ ಮಹಿಳಾ ಸಂಘಟನೆ, ವ್ಯಾಪಾರಸ್ಥರ ಸಂಘ-ಹೊಟೆಲ್ ಮಾಲಿಕರ ಸಂಘ, ಮಂಜು ಕರಾಟೆ ಸ್ಕೂಲ್, ನಿವೃತ್ತ ನೌಕರರ ಸಂಘ, ಮಡಿವಾಳ ಸಮಾಜದವರು, ಮಾರಾಠಾ ಸಮಾಜದವರು, ಆರ್.ಎಸ್.ಎಸ್, ಎಲ್ಲ ಪಕ್ಷದವರು, ಇಂದಿರಾ ನಗರದಲ್ಲಿ ಬಡಾವಣೆಯವರು, ತಾಲೂಕಿನ ತೆರಗಾಂವ ಗ್ರಾಮದಲ್ಲಿ ಕೂಡ ಪಂಜಿನ ಮೆರವಣ ಗೆ ಮಾಡಿ ಬಳಿಕ ಮೆಣದ ಬತ್ತಿಗಳನ್ನು ಬೆಳಗಿಸಿ ಹುತಾತ್ಮ ವೀರ ಯೋಧರಿಗೆ ಗೌರವ ಶೃದ್ದಾಂಜಲಿ ಸಲ್ಲಿಸಲಾಗಿದೆ.
ಪಾಕಿಸ್ತಾನ ಧ್ವಜ ಸುಟ್ಟ ಭಜರಂಗದಳ ಕಾರ್ಯಕರ್ತರು :- ಇನ್ನೂ ಹಳಿಯಾಳದಲ್ಲಿ ವಿಶ್ವಹಿಂದೂ ಪರಿಷದ್ ಭಜರಂಗದಳದವರು ನಗರ ಅಧ್ಯಕ್ಷ ಸವೇಶ್ ಎಸ್.ಕೆ. ನೇತೃತ್ವದಲ್ಲಿ ಕಾರ್ಯಕರ್ತರು ಪಾಕಿಸ್ತಾನ ಧ್ಬಜಕ್ಕೆ ಚಪ್ಪಲಿ ಹಾರ ಹಾಕಿ ಪಟ್ಟಣದಲ್ಲಿ ಪಂಜಿನ ಮೆರವಣ ಗೆ ನಡೆಸಿದರು. ಬಳಿಕ ಶೀವಾಜಿ ವೃತ್ತದಲ್ಲಿ ಸೇರಿ ಪಾಕಿಸ್ತಾನ ಧ್ವಜಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ತಕ್ತಪಡಿಸಿದರು. ಪಾಕಿಸ್ತಾನ ವಿರೋಧೀ ಘೊಷಣೆಗಳು ಮೊಳಗಿದವು. ದೇಶಕ್ಕಾಗಿ ಹೋರಾಡಲು ನಾವು ಸಿದ್ದ ಎಂಬ ಮಾತುಗಳನ್ನು ಈ ಸಂದರ್ಭದಲ್ಲಿ ಕಾರ್ಯಕರ್ತರು ಹೇಳಿದರು. ಬಳಿಕ ಮೌನಾಚರಣೆ ಮಾಡಿ ಹುತಾತ್ಮರಿಗೆ ಶೃದ್ದಾಂಜಲಿಯನ್ನು ಸಲ್ಲಿಸಿದರು.
Leave a Comment