ಹಳಿಯಾಳ:- ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಪಕ್ಷದ ಧ್ವಜ ಕಟ್ಟುವುದರ ಮೂಲಕ “ನನ್ನ ಮನೆ ಬಿಜೆಪಿ ಪರಿವಾರ ಮನೆ” ಕಾರ್ಯಕ್ರಮಕ್ಕೆ ಹಳಿಯಾಳದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಚಾಲನೆ ನೀಡಿದರು.
ಶುಕ್ರವಾರ ಪಟ್ಟಣದ ಸುಭಾಷಗಲ್ಲಿಯಲ್ಲಿರುವ ತಮ್ಮ ಮನೆಗೆ ಮೊದಲು ಬಿಜೆಪಿ ಪಕ್ಷದ ಧ್ವಜ ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಬಳಿಕ ಬಿಜೆಪಿ ಪುರಸಭಾ ಸದಸ್ಯರು, ದಲಿತ ಮುಖಂಡರು, ಮುಸ್ಲಿಂ, ಕ್ರೀಶ್ಚಿಯನ್ ಹೀಗೆ ಎಲ್ಲ ವರ್ಗದ ಜನರ ಮನೆಯ ಮೇಲೆ ಧ್ವಜ ಕಟ್ಟಿ ಅಭಿಯಾನ ಆರಂಭಿಸಿದ್ದು ಗ್ರಾಮೀಣ ಭಾಗದಲ್ಲೂ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಬಿಜೆಪಿ ತಾಲೂಕಾಧ್ಯಕ್ಷ ಶೀವಾಜಿ ನರಸಾನಿ, ಉಪಾದ್ಯಕ್ಷ ವಾಸು ಪೂಜಾರಿ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ಮುಖಂಡರಾದ ಅನಿಲ ಮುತ್ನಾಳ, ವಿಜಯ ಬೋಬಾಟಿ, ಮೊಹನ ಮಾವಲಂಗಿ, ಸಂತಾನ ಸಾವಂತ, ಯಲ್ಲಪ್ಪಾ ಹೊನ್ನೊಜಿ, ರಾಯಪ್ಪ, ಹನುಮಂತ ಚಲವಾದಿ, ಅನಿಲ ಗಿರಿ, ರಾಜು ಹಳ್ಳುಕರ ಮೊದಲಾದವರು ಇದ್ದರು.
Leave a Comment