ಹಳಿಯಾಳ:- ವಿಜಯಪುರದ ಜ್ಞಾನ ಯೋಗಾಶ್ರಮದ ಜ್ಞಾನ ಯೋಗಿ ಸಿದ್ದೇಶ್ವರ ಸ್ವಾಮಿಜಿಗಳನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಭೆಟಿ ಮಾಡಿ ಆಶೀರ್ವಾದ ಪಡೆದರು.
ಹಳಿಯಾಳದಲ್ಲಿ ಫೆ.೧೯ ರಿಂದ ಆರಂಭವಾಗಿರುವ ಸಿದ್ದೇಶ್ವರ ಸ್ವಾಮಿಜಿಗಳ ಆಧ್ಯಾತ್ಮಿಕ ಪ್ರವಚನ ಒಂದು ತಿಂಗಳ ಕಾಲ ನಡೆಯಲಿದ್ದು ಶ್ರೀಗಳು ಹಳಿಯಾಳದಲ್ಲಿ ತಂಗಿದ್ದಾರೆ.
ಅವರನ್ನು ಶನಿವಾರ ಹಳಿಯಾಳದ ಕಿಲ್ಲಾ ಪ್ರವಾಸಿ ಮಂದಿರದಲ್ಲಿರುವ ಸ್ವಾಮೀಜಿಗಳ ವಿಶ್ರಾಂತಿಧಾಮದಲ್ಲಿ ಭೇಟಿಯಾದ ಅವರು ಶ್ರೀಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.
ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡರಾದ ಮಂಗೇಶ ದೇಶಪಾಂಡೆ, ಪುರಸಭಾ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.
Leave a Comment