ಸಿದ್ದಾಪುರ (ಉ.ಕ) ;ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಜನರ ಏಳಿಗೆಗಾಗಿ, ಬಡವರ ಸಹಾಯ ಮಾಡುವ ಕೆಲಸ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಅವರು ತಾಲೂಕಿನ ಸಂಸ್ಥಾನ ತರಳೀಮಠದಲ್ಲಿ 31ನೇ ವರ್ಷದ 1008 ಶ್ರೀ ಸತ್ಯನಾರಾಯಣ ವೃತ ಕಳಸಾ ಪೂಜಾ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ನಾರಾಯಣ ಗುರು ಸಮುದಾಯ ಭವನವನ್ನು ಉದ್ಘಾಟಿಸಿ, ತರಳಿ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಗಳು ಸಮಾಜದ ಏಳಿಗೆಗಾಗಿ ಕಾರ್ಯನಿರ್ವಹಿಸಬೇಕು. ಅವಕಾಶಗಳು ಸಿಗುವುದು ವಿರಳ. ಸಿಕ್ಕ ಅವಕಾಶದಲ್ಲಿ ಉತ್ತಮ ಸಾಧನೆ ಮಾಡಬೇಕು. ದೇವಸ್ಥಾನಗಳ ಪುನರುತ್ಥಾನ ಆಗಬೇಕಾದುದ್ದು ಅವಶ್ಯಕವಾಗಿದೆ. ಎಲ್ಲಾ ಸಮಾಜಕ್ಕೂ ಸಮಾನವಾದ ಕೆಲಸಗಳು ಆಗಬೇಕು ಎಂದರು.
ತರಳಿಶ್ರೀ ಪ್ರಶಸ್ತಿ ಪುರಸ್ಕøತರಾದ ಇತಿಹಾಸ ತಜ್ಞ ಪ್ರೋ. ಪಿ.ವಿ ನಂಜರಾಜೇ ಅರಸ್ ಮಾತನಾಡಿ ಮೂಢನಂಬಿಕೆಗಳನ್ನು ಹುಟ್ಟು ಹಾಕುವ ಗುರು ಅಲ್ಲಾ. ಎಲ್ಲರಿಗೂ ಬೆಳಕನ್ನು ತೋರುವವನು ಗುರು. ಇಂದಿನ ದಿನಗಳಲ್ಲಿ ಮಾನವೀಯ ಜ್ಞಾನವನ್ನು ನಾವೇ ಕಲಿಯಬೇಕು. ದೇವರೆನ್ನುವುದು ನನ್ನ ದೃಷ್ಟಿಯಲ್ಲಿ ನಮ್ಮ ಭಾವನೆ. ಮಾನವೀಯತೆ ಇದ್ದಲ್ಲಿ ದೇವರಿದ್ದಾನೆ ಎಂದರು.
ಪ್ರತಿಭಾ ಪುರಸ್ಕಾರ ಪಡೆದ ವಿಜಯಲಕ್ಷ್ಮೀ ನಾಯ್ಕ ಮಾತನಾಡಿ ಉಳಿಪೆಟ್ಟು ತಿಂದಮೇಲೆ ಕಲ್ಲು ಮೂರ್ತಿಯಾಗುವಂತೆ ಶ್ರಮ ಪಟ್ಟರೆ ಸಾಧನೆ ಸಾಧ್ಯವಾಗುತ್ತದೆ ಎಂದರು.
ತರಳೀಮಠದ ಶ್ರೀ ಶ್ರೀಶ್ರೀ ಬಾಲಕೃಷ್ಣ ಸ್ವಾಮೀಜಿ, ಜಡೆ ಮಹಾ ಸಂಸ್ಥಾನ ಮಠದ ಶ್ರೀಶ್ರೀಶ್ರೀ ಮು.ನಿ.ಪ್ರ.ಡಾ.ಮಹಾಂತ ಸ್ವಾಮಿಗಳು ಧರ್ಮ ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದರು.
ಇತಿಹಾಸ ತಜ್ಞ ಪ್ರೋ. ಪಿ.ವಿ ನಂಜರಾಜೇ ಅರಸ್, ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ,ಚಿನ್ನೇಗೌಡ, ವಿಭಾಗೀಯ ಅರಣ್ಯಾಧಿಕಾರಿ ಆರ್. ಸುರೇಶ, ರಾಷ್ಟ್ರಪ್ರಶಸ್ತಿ ಪುರಸ್ಕøತ ಅಗ್ನಿಶಾಮಕ ಅಧಿಕಾರಿ ಈಶ್ವರ ಕೆ. ನಾಯ್ಕ ಸುಂಕತ್ತಿರವರಿಗೆ 2019 ರ ತರಳಿಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತ ತಂಡದ ಜ್ಯೂನಿಯರ್ ವಾಲಿಬಾಲ್ ಆಟಗಾರ್ತಿ ಕಾನಗೋಡಿನ ಲಲಿತಾ ಅಜ್ಜಪ್ಪ ನಾಯ್ಕ, ಪ್ರತಿಭಾನ್ವಿತ ವಿದ್ಯಾರ್ಥಿನಿ ಪಲ್ಲವಿ ವಿಷ್ಣು ನಾಯ್ಕ, ಸಬ್ ಇನ್ಸ್ಪೆಕ್ಟರ್ ಪ್ರವೀಣ ಎಸ್. ಪೂಜಾರಿ, ಹಂಜಕ್ಕಿಯ ವಿಜಯಲಕ್ಷ್ಮೀ ಜಿ. ನಾಯ್ಕ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎನ್,ಡಬ್ಲು,ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಹಾಗೂ ಯಲ್ಲಾಪುರ ಶಾಸಕರಾದ ಶಿವರಾಮ್ ಹೆಬ್ಬಾರ್, ಸಾಮಾಜಿಕ ಚಿಂತಕರಾದ ಪಿ. ಸೋಮಶೇಖರ, ಎ.ಕೆ.ಕರುಣಾಕರ, ಉದ್ಯಮಿಗಳಾದ ಮಂಜುನಾಥ ನಾಯ್ಕ, ಪ್ರಕಾಶ ಎಂ. ವೇದಿಕೆಯಲ್ಲಿದ್ದರು.
ತರಳಿಮಠದ ಆಡಳಿತ ಕಮಿಟಿಯ ಅಧ್ಯಕ್ಷ ಎನ್.ಡಿ.ನಾಯ್ಕ ಸ್ವಾಗತಿಸಿದರು. ಉಪನ್ಯಾಸಕ ಎಂ.ಕೆ.ನಾಯ್ಕ ಹೊಸಳ್ಳಿ ನಿರೂಪಿಸಿದರು. ವೃತ ಸಮಿತಿಯ ಅಧ್ಯಕ್ಷ ಆಯ್.ಕೆ.ನಾಯ್ಕ ಸಂಗೋಳಿಮನೆ ವಂದಿಸಿದರು.
Leave a Comment