ಹಳಿಯಾಳ :- ಪಟ್ಟಣದ ಧಾರವಾಡ ರಸ್ತೆಯ ತಾಲೂಕಾ ಆಸ್ಪತ್ರೆ ಎದುರುಗಡೆ ಇರುವ ಶ್ರೀ ನಾಗನಾಥ ಸುಬ್ರಮಣ್ಯ ದೇವರ ದ್ವಿತೀಯ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಕಾರ್ಯಕ್ರಮ ವಿಶೇಷ ಹೋಮ ಹವನಗಳ – ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆಯಿಂದ ವೇ.ಬ್ರ.ಶ್ರೀ ಶಂಕರ ಭಟ್ಟ ಜೋಶಿ ಗುರುಗಳ ಸಾನಿಧ್ಯದಲ್ಲಿ ಬೆಳಿಗ್ಗೆ 8 ಗಂಟೆಗೆ ದೇವತಾರ್ಚನೆ ಸ್ಥಾಪಿತ ದೇವತಾ ಪೂಜಾ, ಸಗ್ರಹಮಖ ಸುಬ್ರಮಣ್ಯ ನಾಗದೇವತಾ ಹವನ, ಮೃತ್ಯುಂಜಯ ಹೋಮ. 9 ಗಂಟೆಗೆ ಸಾಮೂಹಿತ ಸತ್ಯನಾರಾಯಣ ಪೂಜೆ, 12 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ ಬಳಿಕ ಮಹಾಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ನಾಗನಾಥ ಸುಬ್ರಮಣ್ಯ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷರು ಆಗಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರವ, ಎಪಿಎಮ್ ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ಸೇರಿದಂತೆ ಪ್ರಮುಖರು ಇದ್ದರು.
Leave a Comment