ಹಳಿಯಾಳ :- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳ ಹಾಗೂ ಮಹಿಳಾ ಸಂಘ ‘ಪ್ರೇರಣಾ’ದ ಆಶ್ರಯದಲ್ಲಿ ್ಲ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು,
ಧಾರವಾಡದ ಇನ್ನೇಟ್ ಡೈಪರ್ ಸಂಸ್ಥೆಯ ಸಂಸ್ಥಾಪಕರಾದ ಪ್ರಿಯಾ ತೋಳನವರ್ ಅವರು ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ತಾವು ರಾಸಾಯನಿಕ ರಹಿತ ಪರಿಸರ ಸ್ನೇಹಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಿ ಉದ್ಯಮದಲ್ಲಿ ಯಶಸ್ಸನ್ನು ಹೊಂದಿದ ಕುರಿತು ತಿಳಿಸಿದರು. ಮಹಿಳಾ ಉದ್ಯಮಿಗಳು ಎದುರಿಸಬೇಕಾದ ಸವಾಲುಗಳು ಹಾಗೂ ಎದುರಿಸುವ ಬಗೆಯನ್ನು ವಿವರಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಪುಣೆಯ ಎವಸ್ರ್ನಾ ಸಂಸ್ಥೆಯ ರಾಧಾಮಣಿ ಮೇಲಿನಮನಿ ಮಾತನಾಡಿ ಮಹಿಳೆ ಜನ್ಮತಃ ಪ್ರಗತಿಶೀಲ ಧೋರಣೆಯನ್ನು ಹೊಂದಿರುತ್ತಾಳೆ. ತನ್ನ ಜೊತೆಯಲ್ಲಿ ಕುಟುಂಬ, ಸಮಾಜ ಮತ್ತು ಸಮೂಹದ ಏಳ್ಗೆಯನ್ನು ಕೈಗೊಳ್ಳುತ್ತಾಳೆ ಎಂದು ನುಡಿದರು. ಸರ್ಜಿಕಲ್ ಸ್ಟ್ರೈಕ್ ಅಂತಹ ಸೇನಾ ಕಾರ್ಯಾಚರಣೆಯು ಒಬ್ಬ ಮಹಿಳೆಯಾದ ರಕ್ಷಣಾ ಸಚಿವರ ನೇತೃತ್ವದಲ್ಲೇ ನಡೆಯಿತು ಎಂದು ಶ್ಲಾಘನೆ ವ್ಯಕ್ತಪಡಿಸಿದರು,
ಮಹಾವಿದ್ಯಾಲಯದ ಪ್ರಾಶುಂಶುಪಾಲ ಡಾ|| ವಿ ವಿ ಕಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಚಿತ್ರಕಲೆ, ರಂಗೋಲಿ, ಕೇಶ ವಿನ್ಯಾಸ, ಮೆಹೆಂದಿ ವಿನ್ಯಾಸ, ನಿಬಂಧ ಮತ್ತು ಹೊಸರುಚಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಹಾಗೂ ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾವನ್ನು ವಿತರಿಸಲಾಯಿತು.
ಡಾ|| ಮೀನಲ್ ಕೆ ಮಹಿಳಾ ದಿನಾಚರಣೆಯ ಚಿತ್ರಣ ನೀಡಿದರು. ಪ್ರೊ. ರೋಹಿಣಿ ಕೆ ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ ವಿಭಾಗ ಮುಖ್ಯಸ್ಥರಾದ ಪ್ರೊ. ಪೂರ್ಣಿಮಾ ರಾಯ್ಕರ್ ಅವರು ವಂದಿಸಿದರು. ವಿದ್ಯಾರ್ಥಿನಿಯರಾದ ಅರುಣಾ ಮತ್ತು ಸ್ಮøತಿ ನಿರೂಪಿಸಿದರು.
Leave a Comment