ಹೊನ್ನಾವರ “ಆರ್ಥಿಕ ಸಮಾನತೆ ಉದ್ದೇಶ ಸಾಧನೆ ಸಂವಿಧಾನದ ಮೂಲ ಆಶಯವಾಗಿದ್ದು ಅದು ಈಡೇರಿದಾಗ ಮಾತ್ರವೇ ರಾಜಕೀಯ ಹಾಗೂ ಸಾಮಾಜಿಕ ಸಮಾನತೆಯ ಆಶಯಗಳು ಈಡೇರುತ್ತವೆ.” ಎಂದು ಸಿ.ಆರ್.ಶಾನಭಾಗ ಹೇಳಿದರು. ಅವರು ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ದೇಶದ ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟು ಮಹಿಳೆಯರಿದ್ದಾರೆ. ಶಿಕ್ಷಣದ ಅವಕಾಶಗಳನ್ನು ಉಪಯೋಗಿಸಿಕೊಂಡು ಮಹಿಳೆ ವಿವಿಧ ರಂಗಗಳಲ್ಲಿ ಸಕ್ರಿಯವಾಗಿದ್ದರೂ, ಇಂದಿಗೂ ಮಹಿಳಾ ಉದ್ಯೋಗ ಭಾಗವಹಿಸುವಿಕೆಯ ದರ ಕಡಿಮೆಯಿದೆ ಇದಕ್ಕೆ ಸಾಮಾಜಿಕ, ಆರ್ಥಿಕ ಆಯಾಮಗಳಿದೆ. ಇಂದಿಗೂ ಅತೀ ಕಡಿಮೆ ವೇತನಕ್ಕೆ ದುಡಿಯುತ್ತಿರುವುದು ಮಹಿಳೆ ಎಂದು ವಿಶ್ಲೇಷಿಸಿದರು.
ಸಮಾಜದಲ್ಲಿನ ಆರ್ಥಿಕ ಅಸಮಾನತೆಯು ವಿವಿಧ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಆದ್ದರಿಂದ ಕನಿಷ್ಟ ಕೂಲಿಕಾಯಿದೆಗಳು ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ.ಸುಮಂಗಲಾ ಬಿ ನಾಯಕ ಮಾv ನಾಡಿ “ಮಹಿಳಾ ಶಿಕ್ಷಣವು ಮಹಿಳಾ ಅಸಮಾನತೆಗೆ ಪರಿಹಾರ ಒದಗಿಸಬಲ್ಲದು ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
” ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಕಾವ್ಯಶ್ರೀ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿರೇಂದ್ರ ಶೆಟ್ಟಿ ವಂದಿಸಿದರು.ಶೋಭಾ ನಿರೂಪಿಸಿದರು. ಪ್ರಾಧ್ಯಾಪಕರುಗಳಾದ ಪ್ರೊ.ಜಿ.ಎನ್.ಭಟ್, ಪ್ರೊ.ಲಿಖಿತಾ,ಪ್ರೊ.ಮಹೇಶ, ಪ್ರೊ.ರೂಪಾ ಗೌಡ ಉಪಸ್ಥಿತರಿದ್ದರು.
Leave a Comment