ಹಳಿಯಾಳ:- ಕಲಾಶ್ರೀ ಯಕ್ಷರಂಗ ಬಳಗ ಜಲವಳ್ಳಿ ಮೇಳದ ಅತಿಥಿ ಕಲಾವಿದನಾಗಿ ಬಣ್ಣ ಹಚ್ಚಿದ ಚಂದ್ರಹಾಸ ಹುಡುಗೋಡು ಇವರು ಯಕ್ಷಗಾನ ಅಭಿನಯದ ಸಂದರ್ಭದಲ್ಲಿಯೇ ವೇದಿಕೆಯ ಮೇಲೆ ಹೃದಯಘಾತದಿಂದ ಕುಸಿದು ಬಿದ್ದು, ವಿಧಿವಶರಾದ ವಿಷಯ ತಿಳಿದು ತುಂಬಾ ದುಃಖವಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ.
ಯಕ್ಷಗಾನದ ಸಂದರ್ಭದಲ್ಲಿ ಗೆಜ್ಜೆ ಕಟ್ಟಿ ರಂಗ ಸಜ್ಜಿಕೆಯಲ್ಲಿ ಕುಣಿಯುತ್ತಲೆ ಕಲಾಮಾತೆಗೆ ಪ್ರಾಣ ಅರ್ಪಿಸಿದ “ಕಲಾಶ್ರೀ ಯಕ್ಷಬಳಗದ” ಯಜಮಾನನನ್ನು ಯಕ್ಷ್ಷಾಭಿಮಾನಿಗಳು ಕಳೆದುಕೊಂಡಂತಾಗಿದೆ. ಇವರ ನಿಧನದಿಂದ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇಶಪಾಂಡೆ ಪ್ರಾರ್ಥಿಸಿದ್ದಾರೆ.
Leave a Comment