ಹಳಿಯಾಳ:- ದೇಶದಲ್ಲಿ ಬಿಜೆಪಿ ಎರಡು ಮೂರಾಂಶ ಬಹುಮತದಿಂದ ಮತ್ತೋಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿಯ ಎನ್.ಡಿಎ ಮೈತ್ರಿ ಕೂಟ ಈ ಬಾರಿ ಭಾರಿ ಬಹುಮತದೊಂದಿಗೆ ಐತಿಹಾಸಿಕ ಗೆಲುವನ್ನು ದಾಖಲಿಸಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು.
ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮೋದಿಯವರು 5 ವರ್ಷದಲ್ಲಿ ಮಾಡಿರುವ ಸಾಧನೆಗಳಿಗೆ ದೇಶದ ಜನ ಮನಸೊತಿದ್ದು ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡುವ ಆಶಯ ವ್ತಕ್ತಪಡಿಸುತ್ತಿದ್ದು ಎಲ್ಲೆಡೆ ಸ್ಪೂರ್ತಿದಾಯಕ ಸ್ಪಂದನೆ ಬಿಜೆಪಿಗೆ ದೊರೆಯುತ್ತಿದೆ ಎಂದರು.
ಮೋದಿಯವರ ಅಪೇಕ್ಷೆಯಂತೆ ಕಾಂಗ್ರೇಸ್ ಮುಕ್ತ ಭಾರತವನ್ನು ಉತ್ತರ ಕನ್ನಡ ಜಿಲ್ಲೆಯಿಂದಲೇ ಪ್ರಾರಂಭಿಸಿದ್ದು ದೇಶದಲ್ಲಿ ಕಾಂಗ್ರೇಸ್ನವರು ಈಗಾಗಲೇ ಸೊತು ಶರಣಾಗಿದ್ದಾರೆಂದ ಹೆಗಡೆ ಪಕ್ಷದ ಸಂಘಟನೆ, ಕೊನೆಯ ಮಟ್ಟದ ವರೆಗೆ ಕಾರ್ಯಕರ್ತರ ಶ್ರಮ ಬಿಜೆಪಿಯ ಐತಿಹಾಸಿಕ ಗೆಲುವಿಗೆ ಕಾರಣವಾಗಲಿದೆ ಎಂದರು.
2014ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 28 ಸಾವಿರ ಹಾಗೂ ದೇಶದಲ್ಲಿ 3.75 ಕೊಟಿ ಬಿಜೆಪಿ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದರು. ಆದರೇ ಈಗ ಅದರಲ್ಲಿ ಗಣನೀಯ ಏರಿಕೆಯಾಗಿದ್ದು ತಾವೇ ಮುಂದೆ ಬಂದು ಮೋದಿಜಿಯವರ ಗೆಲುವಿಗಾಗಿ ಕೆನರಾ ಕ್ಷೇತ್ರದಲ್ಲಿ 1.17 ಲಕ್ಷ ಹಾಗೂ ದೇಶದಲ್ಲಿ 13.5 ಕೋಟಿ ಕಾರ್ಯಕರ್ತರು ಯಾವುದೇ ಫಲಾಫೇಕ್ಷೆ ಇಲ್ಲದೇ ಶ್ರಮಿಸುತ್ತಿದ್ದು ಇವರ ಕುಟುಂಬದ ಮತಗಳೇ ಬಿದ್ದರೇ ವಿಪಕ್ಷಗಳು ಧೂಳಿಪಟವಾಗಲಿವೆ ಎಂದರು ಹೆಗಡೆ.
ಭಾರತ ಈಗ ಬದಲಾಗಿದೆ ನಮ್ಮನ್ನು ಕೆಣಕಿದರೇ ನಾವು ಸುಮ್ಮನಿರಲ್ಲ ಎನ್ನುವುದನ್ನು ವಿಶ್ವಕ್ಕೆ ಮನವರಿಕೆ ಮಾಡಿ ಕೊಡಲಾಗಿದೆ. ದೇಶದಲ್ಲಿ ಈಗ ಹತಾಶೆ ನೋವು ಕಾಣಸಿಗುವುದಿಲ್ಲ –ದೇಶ ಬಲಾಢ್ಯವಾಗುತ್ತಿದೆ ಎಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಕೆನರಾ ಲೋಕಸಭಾ ಕ್ಷೇತ್ರದ ಭಾವಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರು ಈ ಬಾರಿ 3 ಲಕ್ಷಕ್ಕೂ ಅಧಿಕ ಬಹುಮತದೊಂದಿಗೆ ಮತ್ತೆ ಆಯ್ಕೆಯಾಗಲಿದ್ದಾರೆ. ಈ ಬಾರಿ ಹಳೀಯಾಳ ಕ್ಷೇತ್ರದಿಂದಲೇ 90 ಸಾವಿರಕ್ಕೂ ಅಧಿಕ ಮತಗಳು ಬಿಜೆಪಿ ಪಡೆಯಲಿದೆ ಎಂದರು.
Leave a Comment