ಹಳಿಯಾಳ:- ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಕಂದಾಯ ಸಚಿವ ಆರ್. ವಿ. ದೇಶಪಾಂಡೆಯವರ ಜನ್ಮದಿನದ ಪ್ರಯುಕ್ತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಹಳಿಯಾಳದ ವಿ.ಆರ್.ಡಿ.ಎಮ್. ಟ್ರಸ್ಟ್, ಲಾಯನ್ಸ್ ಕ್ಲಬ್, ಧಾರವಾಡ ನವನಗರದ ರೋಟರಿ ಬ್ಲಡ್ಬ್ಯಾಂಕ್ ಮತ್ತು ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ರಕ್ತದಾನ ಮಾಡಿದರು.
ಧಾರವಾಡ ನವನಗರದ ರೋಟರಿ ಬ್ಲಡ್ ಬ್ಯಾಂಕ್ನ ಡಾ|| ಉಮೇಶ ಹಳ್ಳಿಕೇರಿ, ಲಾಯನ್ಸ್ ಕ್ಲಬ್ ಅಧ್ಯಕ್ಷ ಎಮ್.ಆರ್ ಹಿರೇಮಠ, ಮಹಾವಿದ್ಯಾಲಯದ ಆಡಳಿತ ಮುಖ್ಯಸ್ಥ ಡಾ||ಎ.ಹೆಚ್.ಮಿಶ್ರಿಕೋಟಿ, ವಿ.ಆರ್.ಡಿ.ಎಮ್. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಪ್ರಾಂಶುಪಾಲ ಡಾ|| ವಿ.ವಿ ಕಟ್ಟಿ ಇದ್ದರು. ಪ್ರೊ|| ಮಂಜುನಾಥ ಡಿ, ಪ್ರೊ|| ವಿರೂಪಾಕ್ಷ ಚೌಗಲಾ ಹಾಗೂ ವಿದ್ಯಾರ್ಥಿನಿ ಸ್ನೇಹಲ್ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment