ಹಳಿಯಾಳ:- ಪಟ್ಟಣದ ಪ್ರಸಿದ್ದ ತುಳಜಾಭವಾನಿ ದೇವಸ್ಥಾನದಲ್ಲಿ ತುಳಜಾಭವಾನಿ, ಗಣಪತಿ, ಮಂಗೇಶ ಮಹಾಲಕ್ಷ್ಮೀ, ರಾಧಾಕೃಷ್ಣ, ನವಗ್ರಹ ಹಾಗೂ ನಾಗದೇವ ಮಂದಿರಗಳ 23 ನೇ ಪ್ರತಿಷ್ಠಾ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಹೋಮ ಹವನಗಳೊಂದಿಗೆ ಶೃದ್ದಾಭಕ್ತಿಯಿಂದ ನೆರವೆರಿತು.
ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆಯಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ದಿ, ಮಾತೃಕಾ ಪೂಜನ, ದೇವನಾಂದಿ, ಮಂಟಪ ಪ್ರತಿಷ್ಠಾ, ರುತ್ವಿಗ್ವರಣ, ಕಲಶಾಧಿವಾಸ, ಅಗ್ನಿ ಪ್ರತಿಷ್ಠಾ, ಗಣಪತಿ ಅಥರ್ವಶೀರ್ಷ, ಪವಮಾನ ರುದ್ರಾಧ್ಯಾಯ ಶ್ರೀ ಸೂಕ್ತ ಲಕ್ಷ್ಮೀನಾರಾಯಣ ಹೃದಯ, ದುರ್ಗಾ ಸಪ್ತಶತಿ ಪಾರಾಯಣ, ನವಚಂಡಿ ಹವನ, ಆವಾಹಿತ ದೇವತಾ ಪ್ರಸನ್ನ ಪೂಜಾ, ಪ್ರಧಾನ ದೇವರಿಗೆ ಪಂಚಾಮೃತ ಪುರಸ್ಸರ, ಕಲಶ ಅಭಿಷೇಕ, ಗಂಗಾಜಲ ಅಭಿಷೇಕ, ಮಂಗಲ ದ್ರವ್ಯ ನಿರೀಕ್ಷಣೆ, ಸಾನಿಧ್ಯ ಪ್ರಾರ್ಥನೆ ಹಾಗೂ ಪ್ರಮುಖವಾಗಿ ನವಚಂಡಿ ಹವನ, ಮಹಾ ಪೂರ್ಣಾಹುತಿ, ಕುಮಾರಿಕಾ ಪೂಜನ, ಬ್ರಾಹ್ಮಣ ಸುವಾಸಿನಿ ಪೂಜನ, ಶ್ರೀದೇವರಿಗೆ ಮಂಗಳಾರತಿ, ದಾನ ದಕ್ಷೀಣೆ-ವೇದೋಕ್ತ ಆಶೀರ್ವಾದ ಹಾಗೂ ಪ್ರಸಾದ ವಿತರಣೆ ನಡೆಯಿತು.
ಸಚಿವ ದೇಶಪಾಂಡೆ ಭಾಗಿ :- ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಸಚಿವರ ಪುತ್ರ ಹಾಗೂ ಕೆಪಿಸಿಸಿ ಸದಸ್ಯರಾಗಿರುವ ಪ್ರಶಾಂತ ದೇಶಪಾಂಡೆ ಹಾಗೂ ದಂಪತಿ ನವಚಂಡಿ ಹವನದಲ್ಲಿ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ರುಡಸೇಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್ ಇತರರು ಇದ್ದರು..
Leave a Comment