ಹಳಿಯಾಳ:- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಆಶ್ರಯದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ವಿವಿಧsÀ ಇಂಜನಿಯರಿಂಗ್ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ರಾಜ್ಯ ಮಟ್ಟದ ತಾಂತ್ರಿP-ಸಾಂಸ್ಕøತಿಕ ಉತ್ಸವ ಆವಿಷ್ಕಾರ್-19 ಕ್ಕೆ ತೆರೆ ಬಿದ್ದಿದೆ.
ಮೂರು ದಿನಗಳ ಕಾಲ ನಡೆದÀ ಈ ತಾಂತ್ರಿಕ ಉತ್ಸವದಲ್ಲಿ ತಾಂತ್ರಿಕ ಪ್ರಬಂಧ ಮಂಡನೆ, ರೋಬೋಟ್ ರೇಸ್, ಕಟ್ಟಡ ಮಾದರಿ ನಿರ್ಮಾಣ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಲಕ್ಷ್ಮೇಶ್ವರ, ಚಿಕ್ಕೋಡಿ, ನಿಡಸೋಸಿ, ಮುಧೋಳ, ಹುಲಕೋಟಿ ಮತ್ತು ಗದಗ ಭಾಗದ ವಿವಿಧsÀ ಇಂಜನಿಯರಿಂಗ್ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಹಾವಿದ್ಯಾಲಯದ ವಿಶ್ವೇಶ್ವರಯ್ಯ ಸೆಮಿನಾರ್ ಹಾಲ್ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿಯ ಲಿಯೋ ಇಂಜನಿಯರಿಂಗ್ ಮತ್ತು ಕನ್ಸÀಲ್ಟಂಟ ಸಂಸ್ಥೆಯ ನಿರ್ದೇಶಕರಾದ ಜಯದೀಪ ಬಿರ್ಜೆ ಮಾತನಾಡಿ ಆವಿಷ್ಕಾರದಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ತಾಂತ್ರಿಕ ಜ್ಞಾನದೊಂದಿಗೆ ಔದ್ಯಮಿಕ ಕ್ಷೇತ್ರಕ್ಕೆ ಅವಶ್ಯವಿರುವ ಕೌಶಲ್ಯಗಳಾದ ಸಂವಹನ, ನಾಯಕತ್ವ ಗುಣ, ನಿರ್ಧರಿಸುವ ಕಲೆ, ಆರ್ಥಿಕ ನಿರ್ಧಾರ, ಮಾರುಕಟ್ಟೆ ಜ್ಞಾನವನ್ನು ಹೊಂದಬಹುದೆಂದು ಹೇಳಿದರು. ಈ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಉದ್ಯಮಿಗಳಾಗಿ ಬೆಳೆದು ದೇಶದ ಅಭಿವೃದ್ಧಿಗೆ ಯೋಗದಾನ ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಎಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್ ವಿ ಗಣಾಚಾರಿ ಮಾತನಾಡಿ ಆವಿಷ್ಕಾರದಂಥಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಉನ್ನತಿ ಹೊಂದಬೇಕೆಂದರು.
ಪ್ರೊ.ಮಂಜುನಾಥ ಡಿ ಆವಿಷ್ಕಾರ-19ರ ಕಿರು ಚಿತ್ರಣ ನೀಡಿದರು. ಪ್ರಾಂಶುಪಾಲ ಡಾ||ವಿ.ವಿ ಕಟ್ಟಿ, ಪ್ರೊ. ಆರ್ ಎನ್ ಪಾಟೀಲ್, ಡಾ||ಎ ಎಚ್ ಮಿಶ್ರೀಕೋಟಿ, ಡಾ||ಆರ್ ಎಸ್ ಮುನ್ನೋಳಿ, ಡಾ||ಎನ್ ಎಸ್ ಸರದೇಶಪಾಂಡೆ, ಡಾ||ಅರುಣ ಕೆ, ಡಾ||ಸಮೀರ ಗಲಗಲಿ, ಡಾ||ಕೆ ಎಸ್ ಪೂಜಾರ, ಡಾ|| sಸಿ ಕೆ ಶ್ರೀಧರ್ ಇದ್ದರು. ವಿದ್ಯಾರ್ಥಿಗಳಾದ ಹೃಷಿಕೇಶÀ ಮತ್ತು ಕಾವ್ಯಾ ಕೆ ನಿರೂಪಿಸಿದರು.
ಸ್ಪರ್ಧಾ ವಿಜೇತರಿಗೆ ಇದೇ ಸಂದರ್ಭದಲ್ಲಿ ನಗದು ಬಹುಮಾನವನ್ನು ವಿತರಿಸಲಾಯಿತು. ಮಹಾವಿದ್ಯಾಲಯದ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ವಿಭಾಗಗಳು ಕಾರ್ಯಕ್ರಮದ ನಿರ್ವಹಣಾ ಉಸ್ತುವಾರಿಯನ್ನು ವಹಿಸಿದ್ದವು. ವಿದ್ಯಾರ್ಥಿಗಳಲ್ಲಡಗಿರುವ ಸೃಜನಾತ್ಮಕ ಹಾಗೂ ತಾಂತ್ರಿಕ ಕೌಶಲ್ಯಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಈ ಉತ್ಸವವನ್ನು 12 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಪ್ರಾಂಶುಪಾಲ ಡಾ|| ವಿ ವಿ ಕಟ್ಟಿ ತಿಳಿಸಿದರು.
Leave a Comment