ಹಳಿಯಾಳ:- ಖ್ಯಾತ ಕಥೆಗಾರ, ಅನುವಾದಕ, ವಿಮರ್ಶಕ, ನಾಟಕಕಾರ ಹಾಗೂ ಪಂಪ ಪ್ರಶಸ್ತಿ ವಿಜೇತರಾದ ಬಾಬಾಸಾಹೇಬ ಅಹಮದ್ಸಾಹೇಬ ಸನದಿ (ಬಿ.ಎ.ಸನದಿ) ಇವರ ನಿಧನದ ವಿಷಯ ತಿಳಿದು ತುಂಬಾ ದುಃಖವಾಗಿದೆ ಎಂದಿರುವ ಸಚಿವ ಆರ್.ವಿ.ದೇಶಪಾಂಡೆ ಸನದಿ ಯವರ ಅಗಲಿಕೆಯಿಂದ ಸಾಹಿತ್ಯ ರಂಗಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಸಂತಾಪ ಸೂಚಿಸಿದ್ದಾರೆ.
ಸರಳ, ಸಜ್ಜನ ಸ್ವಭಾವದ ಜಾತ್ಯಾತೀತ ವ್ಯಕ್ತಿತ್ವ ಹೊಂದಿದ ಸನದಿಯವರು ಎಲ್ಲಕ್ಕಿಂತ ಮಿಗಿಲಾಗಿ ಆದರ್ಶ ಶಿಕ್ಷಕರಾಗಿದ್ದರು. ಇವರು ಬರೆದಿರುವ ಕವನಗಳಿಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದನ್ನು ಇಂದು ನಾವು ಸ್ಮರಿಸಬಹುದು. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇಶಪಾಂಡೆ ಪ್ರಾರ್ಥಿಸಿದ್ದಾರೆ.
Leave a Comment