ಹಳಿಯಾಳ :- ಸಾಮಾಜಿಕ ಜಾಲತಾಣ ಫೇಸಬುಕ್ನಲ್ಲಿ ಪಟ್ಟಣದ ಯುವಕನೋರ್ವ ಮಾಜಿ ಪ್ರಧಾನಿ ದಿ. ಇಂದಿರಾಗಾಂಧೀ ಅವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಬರೆದುಕೊಂಡಿದ್ದ ಹಾಗೂ ಆ ಹೇಳಿಕೆಯನ್ನು ಲೈಕ್ ಮಾಡಿದ ಇಬ್ಬರು ಯುವಕರನ್ನು ಹಳಿಯಾಳ ಪೋಲಿಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಪಟ್ಟಣದ ರಹವಾಸಿ ಸಂತೊಷ ರಗಟೆ ಎನ್ನುವಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಇಂದಿರಾಗಾಂಧೀ ಅವರು ಹಲವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಅವಹೇಳನಕಾರಿ ಬರೆದು ಪೋಸ್ಟ್ ಮಾಡಿದ್ದ ಇದಕ್ಕೆ ನಿಖಿಲ್ ಫಡ್ನಿಸ್ ಎನ್ನುವಾತ ಲೈಕ್ ಮಾಡಿದ್ದು ಈಡಿ ರಾದ್ದಾಂತಕ್ಕೆ ಕಾರಣವಾಗಿದೆ.
ಪ್ರತಿಭಟನೆ :- ವಿಷಯ ತಿಳಿದ ಕೂಡಲೇ ಹಳಿಯಾಳ ಬ್ಲಾಕ್ ಕಾಂಗ್ರೇಸ್ ಕಮಿಟಿಯವರು ತಕ್ಷಣ ಪಕ್ಷದ ಹಿರಿಯ ಗಮನಕ್ಕೆ ತಂದಿದ್ದಾರೆ ಅಲ್ಲದೇ ತಪ್ಪಿತಸ್ಥ ಯುವಕನನ್ನು ಬಂಧಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಅವರ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೇರವಣಿಗೆ ಮೂಲಕ ಪೋಲಿಸ್ ಠಾಣೆಗೆ ಆಗಮಿಸಿ ದೂರು ನೀಡಿದರು. ಅಲ್ಲದೇ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ ಅವರಿಗೆ, ಪೋಲಿಸ್ ಇಲಾಖೆಯ ಸಿಪಿಐ ಬಿ.ಎಸ್.ಲೋಕಾಪೂರ ಮತ್ತು ಪಿಎಸೈ ಆನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ತನಿಖೆ ಚುರುಕುಗೊಳಿಸಿದ ಪೋಲಿಸ್ ಇಲಾಖೆ:- ವಿಷಯ ತಿಳಿಯುತ್ತಿದ್ದಂತೆಯೇ ದಾಂಡೇಲಿಯಿಂದ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಬಿ. ಮೋಹನ ಪ್ರಸಾದ ಅವರು ಪ್ರಕರಣದ ಕುರಿತು ಸಮಾಲೋಚನೆ ನಡೆಸಿ, ನ್ಯಾಯಾಲಯದ ಪರವಾನಿಗೆಯನ್ನು ಪಡೆದು ಎಫ್ಐಆರ್ ದಾಖಲಿಸಲಾಗುವುದು ಅಲ್ಲದೇ ಸಂತೋಷ ರಗಟೆನನ್ನು ವಶಕ್ಕೆ ಪಡೆದು ತನಿಖೆಯನ್ನು ಚುರುಕುಗೊಳಿಸಲಾಗಿದ್ದು ಇನ್ನೋರ್ವ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ, ರಾಜ್ಯ ಕೃಷಿ ಮಂಡಳಿ ಸದಸ್ಯ ಶ್ರೀನಿವಾಸ ಘೋಟ್ನೆಕರ, ಪುರಸಭಾ ಸದಸ್ಯರಾದ ನವೀನ ಕಾಟ್ಕರ, ಫಯಾಜ್ ಶೇಖ್, ಸುರೇಶ್ ವಗ್ರಾಯಿ, ಸಮೀನಾಬಾನು ಜಂಬೂವಾಲೆ ಮುಖಂಡರಾದ ಮಾಲಾ ಬ್ರಿಗಾಂಜಾ ,ಸತ್ಯಜೀತ ಗಿರಿ, ಹನುಮಂತ ಮಂಡಳ, ಎಸಯ್ಯಾ ತಮಗುಂಟ, ಕವಿತಾ ಮಾದರ, ರವಿ ತೊರಣಗಟ್ಟಿ, ಸಿಕಂದರ ಮುಲ್ಲಾ, ಅನಿಲ್ ಫರ್ನಾಂಡೀಸ್, ಉಮೇಶ್ ಬೋಳಶೆಟ್ಟಿ, ಯಶವಂತ ಪಟ್ಟೇಕರ, ಚಂದ್ರಕಾಂತ ಗೊಂಧಳಿ ಇದ್ದರು.
Leave a Comment